ಖ್ಯಾತ ತೆಲುಗು ಲೇಖಕ, ನಿರ್ದೇಶಕ ನಂದ್ಯಾಲಾ ರವಿ ಕೋವಿಡ್ ನಿಂದ ನಿಧನ
ನಿರ್ದೇಶಕ ಕೆವಿ ಆನಂದ್, ನಟ ಬಿಕ್ರಮ್ ಜೀತ್ ಕನ್ವರ್ ಪಾಲ್ ಕೋವಿಡ್ 19 ಸೋಂಕಿನಿಂದ ಸಾವನ್ನಪ್ಪಿದ್ದರು.
Team Udayavani, May 15, 2021, 6:43 PM IST
ಹೈದರಾಬಾದ್: ಖ್ಯಾತ ತೆಲುಗು ಲೇಖಕ, ಸಿನಿಮಾ ನಿರ್ದೇಶಕ ನಂದ್ಯಾಲಾ ರವಿ ಅವರು ಶುಕ್ರವಾರ(ಮೇ 14) ಹೈದರಾಬಾದ್ ನ ಆಸ್ಪತ್ರೆಯಲ್ಲಿ ಕೋವಿಡ್ ಸಂಬಂಧಿ ಸಮಸ್ಯೆಯಿಂದ ನಿಧನರಾಗಿರುವುದಾಗಿ ವರದಿ ತಿಳಿಸಿದೆ.
ಕಳೆದ ಮೂರು ವಾರಗಳಿಂದ ಕೋವಿಡ್ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಾರಣಾಂತಿಕ ಸೋಂಕಿಗೆ ಕೊನೆಯುಸಿರೆಳೆದಿರುವುದಾಗಿ ವರದಿ ಹೇಳಿದೆ. ನೇನು ಸೀತಾಮಹಾಲಕ್ಷ್ಮಿ, ಅಸಾಧ್ಯುಡು ಮತ್ತು ಪಾಂಡೆಮ್ ಸೇರಿದಂತೆ ಹಲವು ಚಿತ್ರಗಳಿಗೆ ರವಿ ಸಂಭಾಷಣೆ ಬರೆದಿದ್ದರು.
ನಂತರ ರವಿ ನಂದ್ಯಾಲಾ ಅವರು ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದರು. ಆ ನಿಟ್ಟಿನಲ್ಲಿ ನಾಗ ಶೌರ್ಯ ಮತ್ತು ಅವಿಕಾ ಗೋರ್ ಅಭಿನಯದ “ಲಕ್ಷ್ಮಿ ರಾವ್ ಮಾ ಇಂಟಿಕಿ” ಚಿತ್ರವನ್ನು ರವಿ ನಿರ್ದೇಶಿಸಿದ್ದರು. ಬಳಿಕ ಪವರ್ ಪ್ಲೇ ಮತ್ತು ರೈಡರ್ ಚಿತ್ರಗಳನ್ನು ನಿರ್ದೇಶಿಸಿದ್ದರು.
ಕೋವಿಡ್ ಎರಡನೇ ಅಲೆ ಸಿನಿಮಾ ರಂಗದ ಹಲವು ನಟ, ನಿರ್ದೇಶಕರನ್ನು ಬಲಿ ತೆಗೆದುಕೊಂಡಿದೆ. ತಮಿಳು ನಿರ್ದೇಶಕ ತಾಮೀರಾ, ನಟಿ ಶಶಿಕಲಾ, ನಟ ರಾಹುಲ್ ವೋಹ್ರಾ, ನಿರ್ದೇಶಕ ಕೆವಿ ಆನಂದ್, ನಟ ಬಿಕ್ರಮ್ ಜೀತ್ ಕನ್ವರ್ ಪಾಲ್ ಕೋವಿಡ್ 19 ಸೋಂಕಿನಿಂದ ಸಾವನ್ನಪ್ಪಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Met Gala 2024: ಇವೆಂಟ್ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್ ಫೇಕ್ ಫೋಟೋ ವೈರಲ್
Arrested: ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ: ಐದನೇ ಆರೋಪಿ ಬಂಧನ
Housefull 5: ಕಾಮಿಡಿ ಜರ್ನಿಯ ʼಹೌಸ್ ಫುಲ್ʼ ಕುಟುಂಬಕ್ಕೆ ಅಭಿಷೇಕ್ ಬಚ್ಚನ್ ಎಂಟ್ರಿ
Kangana Ranaut: ಚಿತ್ರರಂಗದಲ್ಲಿ ಅಮಿತಾಭ್ ಗೆ ಸಮಾನವಾದ ಗೌರವ ನನಗೆ ಸಿಗುತ್ತಿದೆ; ಕಂಗನಾ
Covid vaccine ಅಡ್ಡ ಪರಿಣಾಮದಿಂದಲೇ ಹೃದಯಾಘಾತ?: ನಟ ಶ್ರೇಯಸ್ ಹೇಳಿದ್ದೇನು?