ಪ್ರಕೃತಿ ಸೌಂದರ್ಯದ “ಈ ಮೇರುತಿ ಪರ್ವತ” ಚಾರಣಿಗರ ಸ್ವರ್ಗ

ಮೇತಿಕಾನ್ ಟೀ ಎಸ್ಟೇಟಿನಿಂದ ಅನುಮತಿಯನ್ನು ಪಡೆದು ಚಾರಣ ಪ್ರಾರಂಭಿಸಬೇಕು.

ಸುಧೀರ್, Nov 28, 2020, 6:25 PM IST

ಪ್ರಕೃತಿ ಸೌಂದರ್ಯದ “ಈ ಮೇರುತಿ ಪರ್ವತ” ಚಾರಣಿಗರ ಸ್ವರ್ಗ

ಪ್ರವಾಸಿಗರ ಸ್ವರ್ಗ ಎಂದೇ ಕರೆಯಬಹುದಾದ ಚಿಕ್ಕಮಗಳೂರು ಹಲವಾರು ಪ್ರವಾಸಿ ತಾಣಗಳನ್ನು ಹೊಂದಿರುವ ಜಿಲ್ಲೆ ಎಂದೇ ಹೆಸರುವಾಸಿಯಾಗಿದೆ. ಚಿಕ್ಕಮಗಳೂರು ಎಂದಾಕ್ಷಣ ನಮ್ಮ ಮನಸಿನಲ್ಲಿ ಬರುವಂತಹ ಪ್ರಮುಖ ಹೆಸರು ಕೆಮ್ಮಣ್ಣು ಗುಂಡಿ, ಬಾಬಾ ಬುಡನಗಿರಿ, ಮುಳ್ಳಯ್ಯನಗಿರಿಬೆಟ್ಟ, ಇವಿಷ್ಟು ತಾಣಗಳನ್ನು ಹೆಚ್ಚಿನ ಪ್ರವಾಸಿಗರು ಸಂದರ್ಶಿಸುವ ಸ್ಥಳಗಳು. ಆದರೆ ಈ ಜಿಲ್ಲೆಯಲ್ಲಿ ಇದೆ ರೀತಿಯ ಹತ್ತು ಹಲವು ಪ್ರವಾಸಿ ತಾಣಗಳು ತಮ್ಮ ಪ್ರಾಕೃತಿಕ ಸೌಂದರ್ಯದಿಂದ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸುತ್ತಿದೆ. ಅಂತಹ ಪ್ರಮುಖತಾಣಗಳ ಸಣ್ಣ ಪರಿಚಯವನ್ನು ನಾವು ಪರಿಚಯಿಸುತ್ತಿದ್ದೇವೆ. ಅಂದ ಹಾಗೆ ಇಂದು ನಾನು ಹೇಳಲು ಹೊರಟಿರುವ ಸುಂದರತಾಣದ ಹೆಸರು ಮುಳ್ಳಯ್ಯನ ಗಿರಿಬೆಟ್ಟದಷ್ಟೇ ಸೌಂದರ್ಯವನ್ನು ಮೈಗೆತ್ತಿಕೊಂಡಿರುವ ಇದೆ ಜಿಲ್ಲೆಯಲ್ಲಿ ಆಕಾಶದೆತ್ತರಕ್ಕೆ ತಲೆಯೆತ್ತಿ ನಿಂತಿರುವ ಗಿರಿಶಿಖರ ಮೇರುತಿ ಪರ್ವತ.

ಚಾರಣಿಗರ ಸ್ವರ್ಗ:

ಮೇರುತಿ ಪರ್ವತ ಸಮುದ್ರ ಮಟ್ಟದಿಂದ ಸುಮಾರು 5451 ಅಡಿಗಳಷ್ಟು ಎತ್ತರದಲ್ಲಿದೆ ಈ ಗಿರಿಶಿಖರವು ಶೃಂಗೇರಿ ಕಳಸ, ಹೊರನಾಡು ಪವಿತ್ರ ಯಾತ್ರಾ ಸ್ಥಳದ ಕೇಂದ್ರ ಭಾಗವಾದಲ್ಲಿ ಮೈದಳೆದು ನಿಂತಿದೆ.

ಬೆಟ್ಟದ ಮೇಲೆ ಹತ್ತಿ ನೋಡಿದರೆ ಸುತ್ತಲೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಕಾಫಿ, ಅಡಿಕೆ ತೋಟಗಳು, ಅಂದ ಹಾಗೆ ಮಾಗಿಯ ಕಾಲದಲ್ಲಿ ಈ ಬೆಟ್ಟಕ್ಕೆ ಹತ್ತಿದರೆ ನಮ್ಮ ಜೊತೆಗಿರುವವರು ಮುಸುಕು ಮಂಜಿನಲ್ಲಿ ಅವಿತು ಕುಳಿತಂತೆ ಭಾಸವಾಗುತ್ತದೆ ಒಮ್ಮಿಂದೊಮ್ಮೆಗೆ ನಾವು ಕಾಶ್ಮೀರದಲ್ಲಿದ್ದೇವೇನೋ ಎನ್ನುವ ಅನುಮಾನನೂ ಹುಟ್ಟುತ್ತದೆ. ಇಲ್ಲಿನ ಮತ್ತೊಂದು ವಿಶೇಷತೆ ಏನೆಂದರೆ ತಪಾಸಣೆ ಇಲ್ಲಿ ಬದರಿಮುನಿಗಳು ತಪಸ್ಸು ಮಾಡಿದ್ದಾರೆಂಬ ಕುರುಹುಗಳಿವೆ ಜೊತೆಗೆ ಇಲ್ಲಿ ಬಂಡೆಕಲ್ಲುಗಳನ್ನು ಕೊರೆದು ಬರುವಂತಹ ತೀರ್ಥ ಈ ಪ್ರದೇಶದ ಜನರ ಜೀವನಾಡಿಯಾಗಿದೆ.

ಮೇರುತಿ ಪರ್ವತಕ್ಕೆ ಭೇಟಿ ನೀಡುವವರು ಬಸರಿಕಟ್ಟೆಯಲ್ಲಿರುವ ಮೇತಿಕಾನ್ ಟೀ ಎಸ್ಟೇಟಿನಿಂದ ಅನುಮತಿಯನ್ನು ಪಡೆದು ಚಾರಣ ಪ್ರಾರಂಭಿಸಬೇಕು. ಸುತ್ತಲೂ ಹಚ್ಚಹಸುರಿನ ಸ್ವಚ್ಛಂದ ಕಾಫಿ ತೋಟದ ನಡುವೆ ಹೆಜ್ಜೆ ಹಾಕುತ್ತಾ ಸಾಗಿದರೆ ನಿಮ್ಮ ಉತ್ಸಾಹ ಇಮ್ಮಡಿಗೊಳ್ಳುವುದಂತೂ ಸತ್ಯ. ಮುಂದೆ ಸಾಗಿದರೆ ನಮಗೆ ನೆರಳು ನೀಡಲು ಆಳೆತ್ತರಕ್ಕೆ ಬೆಳೆದು ನಿಂತಿರುವ ಮರಗಳು, ಮರಗಳಲ್ಲಿ ಚಿಲಿಪಿಲಿ ಹಕ್ಕಿಗಳ ನಾದ ನಮ್ಮ ಚಾರಣದ ಹುಮ್ಮಸ್ಸನ್ನು ಹೆಚ್ಚಿಸಿದಂತಹ ಅನುಭವ. ಹೀಗೆ ಸಾಗುತ್ತ ಮುಂದೆ ಎದುರುಗೊಳ್ಳುವುದೇ ಹಸಿರು ಹುಲ್ಲುಗಳಿಂದ ಶೃಂಗಾರಗೊಂಡಿರುವ ಮೇರುತಿ ಪರ್ವತ.

ಬೆಟ್ಟದ ತುದಿಯಲ್ಲಿದೆ ಗಣಪತಿ ಮಂದಿರ:
ಮೇರುತಿ ಪರ್ವತದ ತುತ್ತತುದಿಯನ್ನು ತಲುಪಿದರೆ ಚಾರಣಿಗರಿಗೆ ಪ್ರಕೃತಿ ಸೌಂದರ್ಯದ ಜೊತೆ ದೇವರ ದರುಶನದ ಭಾಗ್ಯ ಕೂಡ ಇಲ್ಲಿ ಸಿಗುತ್ತದೆ, ಬೆಟ್ಟದ ತುದಿಯಲ್ಲಿ ಗಣಪತಿ ದೇವರ ಗುಡಿಯೊಂದಿದ್ದು ಇಲ್ಲಿ ಮಾರ್ಚ್ ತಿಂಗಳಿನಲ್ಲಿ ದೇವರಿಗೆ ವಿಶೇಷ ಪೂಜೆಯನ್ನು ಊರಿನ ಜನರೆಲ್ಲರೂ ಸೇರಿ ನಡೆಸುತ್ತಾರೆ. ಅಂತೆಯೇ ತಪಾಸಣೆಯಲ್ಲಿ ಹೋಮ ಹವನಗಳನ್ನು ನಡೆಸಿಕೊಂಡು ಬರುವುದು ಹಿಂದಿನಿಂದಲೂ ವಾಡಿಕೆಯಲ್ಲಿತ್ತು.

ಬೆಟ್ಟದ ತುದಿಯಲ್ಲಿ ನಿಂತು ಕಣ್ಣು ಹಾಯಿಸಿದರೆ ಒಂದುಕಡೆ ಕಳಸ ಹೊರನಾಡು ದೇವಸ್ಥಾನ ಕಾಣಸಿಗುತ್ತದೆ. ಜೊತೆಗೆ ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಗಿರಿಶಿಖರಗಳನ್ನು ಕಣ್ತುಂಬಿಕೊಳ್ಳಬಹುದು. ಬೆಟ್ಟದ ಬುಡದಲ್ಲಿ ನಿಂತು ಪರ್ವತದ ತುದಿಯನ್ನು ನೋಡಿದಾಗ ಬಾನುಭುವಿ ಸಂಗಮಿಸಿದಂತೆ ಗೋಚರಿಸುತ್ತದೆ.

ತಿಂಡಿ ತಿನಿಸು ನೀವೇ ತೆಗೆದುಕೊಂಡು ಹೋಗಿ:
ಚಾರಣಿಗರು ಇಲ್ಲಿಗೆ ಬರುವಾಗ ತಮಗೆ ಬೇಕಾಗಿರುವ ತಿಂಡಿ ತಿನಿಸುಗಳನ್ನು ತಾವೇ ತರಬೇಕು. ಇಲ್ಲಿ ಯಾವುದೇ ರೀತಿಯ ತಿಂಡಿ ತಿನಿಸುಗಳು ಸಿಗುವುದಿಲ್ಲ, ಬಸರಿಕಟ್ಟೆಯಲ್ಲಿ ತಿಂಡಿ ತಿನಿಸುಗಳನ್ನು ಪಡೆದುಕೊಳ್ಳಬಹುದು.

ಜನಾಕರ್ಷಣೆ ಕಡಿಮೆ :
ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಮುಳ್ಳಯ್ಯನ ಗಿರಿ, ಬಾಬಾಬುಡನ್ ಗಿರಿ, ಕೆಮ್ಮಣ್ಣು ಗುಂಡಿ ಹೀಗೆ ಹಲವಾರು ಗಿರಿಧಾಮಗಳು ಹೆಚ್ಚು ಪ್ರಚಲಿತದಲ್ಲಿ ಇದೆ. ಆದರೂ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದಿರುವ ಮೇರುತಿ ಪರ್ವತ ಹೆಚ್ಚಿನ ಜನಾಕರ್ಷಣೆ ಪಡೆದಿಲ್ಲ. ಈ ಬೆಟ್ಟ ಇನ್ನಷ್ಟು ಜನಾಕರ್ಷಣೆಯನ್ನು ಪಡೆಯಬೇಕಾಗಿದೆ ಎನ್ನುತ್ತಾರೆ ಇಲ್ಲಿನ ಜನರು.

ಭೇಟಿ ಹೇಗೆ:
ಮೇರುತಿ ಪರ್ವತ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ಹತ್ತಿರದ ಪ್ರದೇಶ, ಕಳಸದಿಂದ ಬಸ್ರಿಕಟ್ಟೆ ಮಾರ್ಗದಲ್ಲಿ ಪ್ರಯಾಣಿಸಿದರೆ ಮೇಥಿಖಾನ್ ಎಸ್ಟೇಟ್ ಎದುರುಗೊಳ್ಳುತ್ತದೆ ಇಲ್ಲಿಂದ ಅನುಮತಿಯನ್ನು ಪಡೆದು ಚಾರಣ ಮುಂದುವರಿಸಬೇಕು.

ಸ್ವಚ್ಛತೆ ಕಾಪಾಡಿ :
ಇಲ್ಲಿಗೆ ಬರುವ ಚಾರಣಿಗರು ಬೆಟ್ಟದ ಸೌಂದರ್ಯಕ್ಕೆ ಧಕ್ಕೆ ಆಗದ ರೀತಿಯಲ್ಲಿ ಸುರಕ್ಷತೆ ವಹಿಸಬೇಕು. ತಾವು ತಂದಂತಹ ತಿಂಡಿ ತಿನಿಸುಗಳನ್ನು ಎಲ್ಲೆಂದರಲ್ಲಿ ಎಸೆದು ಪರಿಸರ ಹಾಳುಮಾಡದೆ ಪರ್ವತದ ಸೌಂದರ್ಯ ಇಮ್ಮಡಿಗೊಳಿಸಲು ಸಹಕರಿಸಿ.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.