ಅನಾರೋಗ್ಯಕರ ಜೀವನ ಶೈಲಿ; ಹೊಟ್ಟೆಯ ಬೊಜ್ಜು ಕರಗಿಸುವ ಯೋಗಾಸನ

ಇದು ಹೊಟ್ಟೆಯ ಬೊಜ್ಜನ್ನು ಕರಗಿಸುವುದರ ಜತೆಗೆ ಮಂಡಿ, ತೊಡೆ, ಸೊಂಟವನ್ನು ಹಿಗ್ಗಿಸುತ್ತದೆ.

Team Udayavani, Nov 23, 2020, 5:27 PM IST

ಅನಾರೋಗ್ಯಕರ ಜೀವನ ಶೈಲಿ; ಹೊಟ್ಟೆಯ ಬೊಜ್ಜು ಕರಗಿಸುವ ಯೋಗಾಸನ

ಹೊಟ್ಟೆಯ ಬೊಜ್ಜು ಹೆಚ್ಚಾದಂತೆ ಅಪಾಯದ ಮಟ್ಟವೂ ಏರುತ್ತದೆ. ಅನಾರೋಗ್ಯಕರ ಜೀವನ ಶೈಲಿ ಇದಕ್ಕೆ ಕಾರಣವಾದರೂ ಸರಿಯಾದ ಆಹಾರ ಕ್ರಮ,
ವ್ಯಾಯಾಮದೊಂದಿಗೆ ಇದನ್ನು ಕರಗಿಸಲು ಸಾಧ್ಯವಿದೆ. ಹೊಟ್ಟೆಯ ಬೊಜ್ಜು ಇಳಿಸಲು ಯೋಗದಿಂದ ಸಾಧ್ಯವಿದೆ. ಆದರೆ ಈ ಆಸನಗಳನ್ನು ಮನೆಯಲ್ಲೇ ಪ್ರಯೋಗ ಮಾಡಿ ನೋಡುವ ಮೊದಲು ತಜ್ಞರಿಂದ ಮಾರ್ಗದರ್ಶನ ಪಡೆಯುವುದು ಅತೀ ಅಗತ್ಯ.

ತಾಡಾಸನ: ಇದು ದೇಹದಲ್ಲಿ ರಕ್ತಚಲನೆಯನ್ನು ಹೆಚ್ಚಿಸಿ, ಇತರ ಯೋಗ ಭಂಗಿಗಳಿಗೆ ಸಿದ್ಧವಾಗಲು ನೆರವಾಗುತ್ತದೆ.

ಮಾಡುವ ವಿಧಾನ: ನೇರವಾಗಿ ನಿಂತು ಹಿಂಗಾಲುಗಳು ಸ್ಪರ್ಶಿಸುತ್ತಿರುವಂತೆ ಪಾದಗಳನ್ನು ಸ್ವಲ್ಪ ಅಗಲಿಸಿ. ಬೆನ್ನು ನೇರವಾಗಿರಬೇಕು. ಎರಡೂ ಕೈ ನೇರವಾಗಿ ಅಂಗೈ ದೇಹಕ್ಕೆ ತಾಗಿರಬೇಕು. ಕೈಗಳನ್ನು ಮುಂದೆ ಚಾಚಿ ಅಂಗೈಯನ್ನು ಒಂದಕ್ಕೊಂದು ಜೋಡಿಸಿ. ದೀರ್ಘ‌ವಾಗಿ ಉಸಿರಾಡಿ. ಬೆನ್ನನ್ನು ಬಗ್ಗಿಸಿ. ಮಡಚಿರುವ
ಕೈಗಳನ್ನು ತಲೆಯ ಮೇಲಿಂದ ಮೇಲಕ್ಕೆತ್ತಿ, ಎಷ್ಟು ಸಾಧ್ಯವಿದೆಯೋ ಅಷ್ಟು ಬಗ್ಗಬೇಕು. ಕಾಲೆºರಳುಗಳಲ್ಲಿ ನಿಂತು ಪಾದಗಳನ್ನು ಮೇಲಕ್ಕೆತ್ತಿ. ದೃಷ್ಟಿ ಆಕಾಶದತ್ತ ಇರಬೇಕು.

ಸಾಮಾನ್ಯವಾಗಿ ಉಸಿರಾಡಿ. ಸ್ವಲ್ಪ ನಿಲ್ಲಿಸಿ ಮತ್ತೆ ದೀರ್ಘ‌ವಾಗಿ ಉಸಿರಾಡಿ, ಅನಂತರ ನಿಧಾನವಾಗಿ ಉಸಿರುಬಿಡಿ. ಪಾದಗಳನ್ನು ಮೊದಲಿನ ಸ್ಥಾನಕ್ಕೆ ತನ್ನಿ. ಬಳಿಕ ಸ್ವಲ್ಪ ವಿಶ್ರಾಂತಿ ಪಡೆದು ಮತ್ತೆ ಆರಂಭಿಸಿ. ನಿತ್ಯವೂ 10 ಬಾರಿ ಇದನ್ನು ಮಾಡಿದರೆ ಹೊಟ್ಟೆಯ ಬೊಜ್ಜು ಕರಗಿಸಬಹುದು.

ಪಶ್ಚಿಮೋತ್ತಾಸನ
ಇದು ಹೊಟ್ಟೆಯ ಬೊಜ್ಜನ್ನು ಕರಗಿಸುವುದರ ಜತೆಗೆ ಮಂಡಿ, ತೊಡೆ, ಸೊಂಟವನ್ನು ಹಿಗ್ಗಿಸುತ್ತದೆ. ಅಜೀರ್ಣ ಕ್ರಿಯೆಯಿಂದ ಬಳಲುತ್ತಿರುವವರಿಗೆ ಇದು ಅತ್ಯುತ್ತಮ ಆಸನ.

ಮಾಡುವ ವಿಧಾನ
ಪದ್ಮಾಸನದಲ್ಲಿ ಕುಳಿತು ಬೆನ್ನು ಬಗ್ಗಿಸಿ, ಮುಂದೆ ಕಾಲುಗಳನ್ನು ಚಾಚಿ. ದೀರ್ಘ‌ವಾಗಿ ಉಸಿರಾಡಿ, ಮೊಣಕೈ ಬಗ್ಗಿಸದೆ ತಲೆ ಮೇಲೆ ಕೈಗಳನ್ನು ಎತ್ತಿ. ದೃಷ್ಟಿಯೂ ಕೈಗಳನ್ನೇ ನೋಡುತ್ತಿರಲಿ. ಉಸಿರು ಬಿಡುವಾಗ ತೊಡೆಗಳು ಮುಂದಿರುವಂತೆ ಬಗ್ಗಿ. ಬೆನ್ನು ಸಾಧ್ಯವಾದಷ್ಟು ಬಗ್ಗಿರಬೇಕು. ಕೈಯಿಂದ ಕಾಲ್ಬೆರಳು ಸ್ಪರ್ಶಿಸಲು ಪ್ರಯತ್ನಿಸಬೇಕು. ತಲೆ ಮೊಣಕಾಲಿನ ಮೇಲಿರಲಿ.

ಹಾಗೇ ಹಿಂದಕ್ಕೆ ತರಲು ಪ್ರಯತ್ನಿಸಿ. ಸ್ನಾಯುಗಳು ಹಿಗ್ಗಿದ ಅನುಭವವಾಗುವರೆಗೂ ಇದನ್ನು ಮುಂದುವರಿಸಿ. ಉಸಿರು ಎಳೆದು ಹೊಟ್ಟೆಯನ್ನು ಹಿಡಿದಿಡಿ. ಬಳಿಕ ನಿಧಾನವಾಗಿ ಉಸಿರು ಬಿಡಿ. ಪದ್ಮಾಸನ ಭಂಗಿಗೆ ಮರಳಿ. ಈ ಆಸನವನ್ನು ಆರಂಭದಲ್ಲಿ 10 ಬಾರಿ ಬಳಿಕ ಹೆಚ್ಚು ಮಾಡುತ್ತಾ ಹೋಗಿ.

ಪವನಮುಕ್ತಾಸನ
ಗ್ಯಾಸ್ಟ್ರಿಕ್‌ ಸಮಸ್ಯೆ, ಅಜೀರ್ಣ, ಮಲಬದ್ಧತೆ ನಿವಾರಿಸಲು ಇದು ಅತ್ಯುತ್ತಮ ಆಸನ ಭಂಗಿಯಾಗಿದೆ. ಮೊಣಕಾಲುಗಳು ಹೊಟ್ಟೆಯ ಮೇಲೆ ಒತ್ತಡ ಹಾಕಿ ಬೊಜ್ಜು ಕರಗಲು ನೆರವಾಗುತ್ತದೆ.

ಮಾಡುವ ವಿಧಾನ
ನೆಲದ ಮೇಲೆ ಮಲಗಿ ಕೈಗಳು ದೇಹದ ಎರಡೂ ಬದಿಯಲ್ಲಿರಲಿ. ಪಾದಗಳು ವಿಸ್ತರಿಸಲಿ. ಹಿಮ್ಮಡಿಗಳು ಒಂದಕ್ಕೊಂದು ಸ್ಪರ್ಶಿಸುವಂತಿರಲಿ. ಮೊಣಕಾಲುಗಳನ್ನು
ಮಡಚಿ. ದೀರ್ಘ‌ವಾಗಿ ಉಸಿರು ತೆಗೆದುಕೊಂಡು ಹೊರಗೆ ಬಿಡುವಾಗ ಮಡಚಿದ ಕಾಲುಗಳನ್ನು ಎದೆಯ ಸಮೀಪ ತನ್ನಿ. ತೊಡೆಗಳು ಹೊಟ್ಟೆಯ ಮೇಲೆ ಒತ್ತಡ
ಹಾಕುವಂತಿರಲಿ. ಕೈಗಳನ್ನು ತೊಡೆಗಳ ಕೆಳಗೆ ತಂದು ಮತ್ತೆ ಉಸಿರಾಡಿ. ಉಸಿರು ಬಿಡುವಾಗ ತಲೆಯನ್ನು ಮೇಲಕ್ಕೆ ಎತ್ತಿ. ಗಲ್ಲವು ಮೊಣಕಾಲನ್ನು ಸ್ಪರ್ಶಿಸಲಿ.
ಸ್ವಲ್ಪ ಹೊತ್ತು ಹಾಗೇ ಇದ್ದು ದೀರ್ಘ‌ ಉಸಿರು ತೆಗೆದುಕೊಂಡು ನಿಧಾನವಾಗಿ ಬಿಡುತ್ತ ಮೊದಲಿನ ಸ್ಥಿತಿಗೆ ಬನ್ನಿ.

ಟಾಪ್ ನ್ಯೂಸ್

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.