ಹೆಚ್ಚಿದ ಒತ್ತಡ; ಸರಕಾರದ ಸಕಾರಾತ್ಮಕ ಸ್ಪಂದನೆ

ಮಂಗಳೂರಿನಲ್ಲಿ ರಾಜ್ಯದ ಮೊದಲ ಮೀನುಗಾರಿಕೆ ವಿಶ್ವವಿದ್ಯಾನಿಲಯ ಸ್ಥಾಪನೆ ನಿರೀಕ್ಷೆ

Team Udayavani, Sep 29, 2021, 7:10 AM IST

ಹೆಚ್ಚಿದ ಒತ್ತಡ; ಸರಕಾರದ ಸಕಾರಾತ್ಮಕ ಸ್ಪಂದನೆ

ಮಂಗಳೂರು: ಮಂಗಳೂರಿನ ಮೀನುಗಾರಿಕೆ ಕಾಲೇಜನ್ನು ಕೇಂದ್ರೀಕರಿಸಿ ಪ್ರತ್ಯೇಕ ಮೀನುಗಾರಿಕೆ ವಿಶ್ವವಿದ್ಯಾನಿಲಯ ಸ್ಥಾಪನೆ ಅತೀ ಶೀಘ್ರದಲ್ಲಿಯೇ ಆಗಬೇಕೆಂಬ ಒತ್ತಡ ಹೆಚ್ಚಾಗತೊಡಗಿದೆ.

ವಿಧಾನಸಭೆ ಅಧಿವೇಶನ ಸಂದರ್ಭ ಮೀನುಗಾರಿಕೆ ಸಚಿವ ಎಸ್‌. ಅಂಗಾರ ಮತ್ತು ಶಾಸಕ ಡಿ. ವೇದವ್ಯಾಸ ಕಾಮತ್‌ ಅವರು ಸೆ. 16ರಂದು ಈ ವಿಚಾರ ಪ್ರಸ್ತಾ ವಿಸಿ, ಮಂಗಳೂರಿನಲ್ಲಿ ಪ್ರತ್ಯೇಕ ಮೀನುಗಾರಿಕೆ ವಿ.ವಿ.ಯ ಪ್ರಸ್ತುತತೆಯನ್ನು ಮನವರಿಕೆ ಮಾಡಿದ್ದಾರೆ.

ಎಕ್ಕೂರಿನಲ್ಲಿರುವ ಮೀನುಗಾರಿಕೆ ಕಾಲೇಜು 1969ರಲ್ಲಿ ಸ್ಥಾಪನೆಯಾಗಿದ್ದು, ಆಗ್ನೇಯ ಏಷ್ಯಾದ ಪ್ರಥಮ ಮೀನುಗಾರಿಕೆ ಕಾಲೇಜು ಎಂಬ ಹೆಗ್ಗಳಿಕೆ ಪಡೆದಿದೆ. ಪ್ರಾರಂಭ ದಲ್ಲಿ ಬೆಂಗಳೂರಿನ ಕೃಷಿ ವಿಜ್ಞಾನ ವಿ.ವಿ. ವ್ಯಾಪ್ತಿಯಲ್ಲಿದ್ದ ಇದು 2005 ರಿಂದ ಕರ್ನಾಟಕ ಪಶು ವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿ.ವಿ.ಗೆ ಸಂಯೋ ಜನೆ ಗೊಂಡಿದೆ. ಈ ವಿ.ವಿ. ಕೃಷಿ ಮತ್ತು ಪಶು ವೈದ್ಯಕೀಯ ವಿಜ್ಞಾನಗಳಿಗೆ ಮಾತ್ರ ಆದ್ಯತೆ ನೀಡುತ್ತಿರುವ ಕಾರಣ ಮೀನು ಗಾರಿಕೆಗೆ ಆದ್ಯತೆ ಕಡಿಮೆಯಾಗಿದೆ ಎಂಬ ಆರೋಪ ಗಳಿದ್ದವು. ಕರಾವಳಿಯಲ್ಲಿ ಮೀನು ಗಾರಿಕೆ ಪ್ರಮುಖ ವೃತ್ತಿ, ಉದ್ಯಮ ಆಗಿರು ವುದರಿಂದ ಇಲ್ಲಿರುವ ಮೀನುಗಾರಿಕೆ ಕಾಲೇಜನ್ನೇ ವಿ.ವಿ. ಸ್ಥಾನಮಾನ ನೀಡಿ ಮೇಲ್ದರ್ಜೆಗೇರಿಸಬೇಕೆಂದು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಇದಕ್ಕೆ ನಕಾರಾತ್ಮಕ ಪ್ರತಿಕ್ರಿಯೆ ಬಂದಾಗ ಸಹಿ ಅಭಿಯಾನ ನಡೆಸಿ ಒತ್ತಾಯಿಸಿತ್ತು. ಇದಕ್ಕೆ ಮಣಿದ ಪಶು ವೈದ್ಯಕೀಯ ವಿ.ವಿ.ಯು ಸಾಂಪ್ರದಾಯಿಕ ವಿ.ವಿ. ಬದಲು ಮೀನುಗಾರಿಕೆ ಕಾಲೇಜನ್ನು ಸ್ವಾಯತ್ತ ಮೀನುಗಾರಿಕಾ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಯಾಗಿ ಅಭಿವೃದ್ಧಿಪಡಿಸುವ ಚಿಂತನೆ ನಡೆಸಿ ಈ ಬಗ್ಗೆ ಪ್ರಸ್ತಾವ ಮುಂದಿಟ್ಟಿತ್ತು. ಇದಕ್ಕೆ ಶಾಸಕರು ವಿರೋಧ ವ್ಯಕ್ತ ಪಡಿ ಸಿದ್ದು, ಸಾಂಪ್ರದಾಯಿಕ ವಿ.ವಿ. ಯನ್ನೇ ಸ್ಥಾಪಿಸಬೇಕೆಂದು ಆಗ್ರಹಿಸಿದ್ದಾರೆ.

ಜಿಲ್ಲಾಡಳಿತದಿಂದ ಜಾಗದ ಭರವಸೆ
ವಿ.ವಿ. ಸ್ಥಾನಮಾನಕ್ಕೆ ಕೆಲವು ಮಾನದಂಡ ಗಳಿದ್ದು, ಈ ಹಿನ್ನೆಲೆಯಲ್ಲಿ ಮೀನುಗಾರಿಕೆ ಕಾಲೇಜಿನಲ್ಲಿ ಈಗಿರುವ ಮೂಲಸೌಲಭ್ಯಗಳ ಪಟ್ಟಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ವಿ.ವಿ. ಸ್ಥಾಪನೆಗೆ ಬೇಕಾಗಿರುವ ಜಾಗ ಮತ್ತಿತರ ವ್ಯವಸ್ಥೆ ಮಾಡುವುದಾಗಿ ದ.ಕ. ಜಿಲ್ಲಾಡಳಿತ ತಿಳಿಸಿದೆ ಎಂದು ಶಾಸಕ ವೇದವ್ಯಾಸ ಕಾಮತ್‌ ಹೇಳಿದ್ದಾರೆ.

ಇದನ್ನೂ ಓದಿ:ಪೆಟ್ರೋಲ್‌ ಬಂಕ್‌ ಮ್ಯಾನೇಜರ್‌ಗೆ ಹಲ್ಲೆಗೈದು 4.20 ಲ.ರೂ. ಸುಲಿಗೆ

ಪ್ರತ್ಯೇಕ ವಿ.ವಿ. ಏಕೆ ಬೇಕು?
01. ರಾಜ್ಯವು 580 ಕಿ.ಮೀ. ಸಮುದ್ರ ತೀರವನ್ನು ಹೊಂದಿದ್ದು, ಈ ಕರಾವಳಿ ಪ್ರದೇಶದಲ್ಲಿ ಮೀನುಗಾರಿಕೆ ಅತ್ಯಧಿಕ ಪ್ರಮಾಣದಲ್ಲಿದೆ.
02. ಪ್ರಸ್ತುತ ಮಂಗಳೂರಿನ ಮೀನುಗಾರಿಕೆ ಕಾಲೇಜು ಸಂಯೋಜನೆ ಹೊಂದಿರುವ ಕರ್ನಾಟಕ ಪಶು ವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿ.ವಿ. ದೂರದ ಬೀದರ್‌ನಲ್ಲಿದ್ದು, ಅಲ್ಲಿ ಸಮುದ್ರವಿಲ್ಲ.
03. ದೇಶದಲ್ಲಿಯೇ ಮೊದಲ ಮೀನುಗಾರಿಕೆ ಕಾಲೇಜು ಮಂಗಳೂರಿ ನಲ್ಲಿ 1969ರಲ್ಲಿ ಆರಂಭವಾಗಿದ್ದು, ಆ ಬಳಿಕ ಇತರ ರಾಜ್ಯ ಗಳಲ್ಲಿ ಆರಂಭವಾದವು. ಆದರೆ ಈಗ ಕರ್ನಾಟಕ ಹೊರತುಪಡಿಸಿ ಮೀನುಗಾರಿಕೆ ಕಾಲೇಜುಗಳಿರುವ ಕೇರಳ, ತಮಿಳುನಾಡು, ಆಂಧ್ರ, ಮಹಾರಾಷ್ಟ್ರ ಮತ್ತಿತರ ರಾಜ್ಯಗಳಲ್ಲಿ ಪ್ರತ್ಯೇಕ ಮೀನುಗಾರಿಕೆ ವಿ.ವಿ.ಗಳು ಸ್ಥಾಪನೆಯಾಗಿವೆ.
04.ಮೀನುಗಾರಿಕೆ ವಿ.ವಿ. ಸ್ಥಾಪನೆಯಾದರೆ ಹೊಸ ಮೀನುಗಾರಿಕೆ ಕಾಲೇಜು, ಡಿಪ್ಲೊಮಾ ಕೋರ್ಸು, ಸಂಶೋಧನೆ ಮತ್ತು ತರಬೇತಿ ಕೇಂದ್ರಗಳನ್ನು ಆರಂಭಿಸಲು ಅನುಕೂಲ. ಈಗಿರುವ ಕೇವಲ ಒಂದು ಕಾಲೇಜಿನಿಂದ ಅಥವಾ ಉದ್ದೇಶಿತ ಸಂಸ್ಥೆಯಿಂದ ಇವೆಲ್ಲ ಸಾಧ್ಯವಾಗದು.
05.ಈಗಿರುವ ಕರ್ನಾಟಕ ಪಶು ವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿ.ವಿ. ಪಶು ವೈದ್ಯಕೀಯಕ್ಕಷ್ಟೇ ಹೆಚ್ಚು ಪ್ರಾಮುಖ್ಯ ನೀಡುತ್ತಿದ್ದು, ಮೀನುಗಾರಿಕೆಗೆ ಪ್ರಾಶಸ್ತ್ಯ ಕಡಿಮೆಯಿದೆ.
06.ಮಂಗಳೂರಿನಲ್ಲಿ ಮೀನುಗಾರಿಕೆ ವಿ.ವಿ. ಸ್ಥಾಪನೆಯಾದರೆ ಡಿಪ್ಲೊಮಾ ಕೋರ್ಸು ಮತ್ತು ತರಬೇತಿ ಶಿಬಿರಗಳ ಮೂಲಕ ಕರಾವಳಿ ಭಾಗದ ಯುವಕರಿಗೆ ತಾಂತ್ರಿಕ ಮತ್ತು ವೈಜ್ಞಾನಿಕ ಮಾಹಿತಿ ನೀಡಿ ಸ್ವ ಉದ್ಯೋಗಕ್ಕೆ ಉತ್ತೇಜನ ನೀಡ ಬಹುದು. ಈ ಮೂಲಕ ಮೀನುಗಾರಿಕೆಯನ್ನು ಬೃಹತ್‌ ಉದ್ಯಮವಾಗಿ ಬೆಳೆಸಬಹುದು.
07.ರಾಜ್ಯ ಮತ್ತು ಕೇಂದ್ರ ಸರಕಾರಗಳು ಮೀನುಗಾರರಿಗಾಗಿ ಮತ್ಸ್ಯಾಶ್ರಯ ಮತ್ತಿತರ ಹಲವು ಯೋಜನೆಗಳನ್ನು ಹಮ್ಮಿ ಕೊಂಡಿದ್ದು, ಮೀನು ಗಾರಿಕೆ ವಿ.ವಿ. ಇದ್ದರೆ ಇವುಗಳ ಪರಿಣಾಮಕಾರಿ ಅನುಷ್ಠಾನ ಸಾಧ್ಯ.
08.ಒಂದು ವಿ.ವಿ. ಮಾಡುವ ಕೆಲಸವನ್ನು ಕೇವಲ ಒಂದು ಕಾಲೇಜು ಅಥವಾ ಸಂಸ್ಥೆ ಮಾಡಲು ಸಾಧ್ಯವಿಲ್ಲ. ವಿ.ವಿ.ಗೆ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ಅಧಿಕಾರವಿರುತ್ತದೆ.

ಕರ್ನಾಟಕ ಪಶು ವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿ.ವಿ.ಯಿಂದ ಮೀನುಗಾರಿಕೆಯನ್ನು ಪ್ರತ್ಯೇಕಿಸಿ ಮಂಗಳೂರಿನ ಕಾಲೇಜನ್ನು ಕೇಂದ್ರೀಕರಿಸಿ ಸಾಂಪ್ರದಾಯಿಕ ವಿ.ವಿ. ಸ್ಥಾಪಿಸ ಬೇಕೆಂಬುದು ನಮ್ಮ ಬೇಡಿಕೆ; ಅದರ ಹೊರತಾಗಿ ಮೀನು ಗಾರಿಕೆ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಯನ್ನಾಗಿ ಮಾಡುವುದರಿಂದ ನಿರೀಕ್ಷಿತ ಪ್ರಯೋಜನ ಆಗಲಾರದು.
– ಸೆಂಥಿಲ್‌ ವೇಲ್‌, ಡೀನ್‌, ಮೀನುಗಾರಿಕೆ ಕಾಲೇಜು, ಮಂಗಳೂರು

ಮಂಗಳೂರಿನಲ್ಲಿ ಮೀನು ಗಾರಿಕೆ ವಿ.ವಿ. ಸ್ಥಾಪನೆ ಯಾದರೆ ಕರಾವಳಿಯಲ್ಲಿ ಮೀನು ಗಾರಿಕೆ ವೃತ್ತಿ ಮತ್ತು ಉದ್ಯಮದ ಬೆಳವಣಿಗೆಗೆ ಗಣನೀಯ ವಾಗಿಉತ್ತೇಜನ ದೊರೆಯಲಿದೆ. ವಿ.ವಿ. ಸ್ಥಾಪನೆ ಅತೀ ಶೀಘ್ರ ಆಗಬೇಕು.
– ನಿತಿನ್‌ ಕುಮಾರ್‌, ಅಧ್ಯಕ್ಷರು, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ

ಮೀನುಗಾರಿಕೆ ಕಾಲೇಜಿಗೆ ವಿ.ವಿ.
ಸ್ಥಾನಮಾನ ನೀಡುವ ಬಗ್ಗೆ ಈಗಾಗಲೇ ಪ್ರಸಾವನೆ ಸಲ್ಲಿಸಿದ್ದು, ವಿಧಾನಸಭೆಯಲ್ಲೂ ಚರ್ಚೆಯಾಗಿದೆ. ಸಚಿವ ಸಂಪುಟದ ಮುಂದೆ ಮಂಡಿಸಿ ಅನುಮೋದನೆ ಪಡೆಯಲು ಪ್ರಯತ್ನಿಸುವೆ.
– ಎಸ್‌. ಅಂಗಾರ, ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವ

- ಹಿಲರಿ ಕ್ರಾಸ್ತಾ

ಟಾಪ್ ನ್ಯೂಸ್

siddanna-2

Prajwal Revanna ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ: ಸಿದ್ದರಾಮಯ್ಯ ಕಿಡಿ

1-wddsa-das

Toxic: ಯಶ್ ಸಿನಿಮಾದಿಂದ ಹೊರಹೋದ ಕರೀನಾ ಕಪೂರ್?

kore

KLE ಸಂಸ್ಥೆ ಬೆಳೆದಿದ್ದು ದಾನಿಗಳಿಂದ, ಕಾಂಗ್ರೆಸ್‍ನಿಂದ ಅಲ್ಲ‌: ಪ್ರಭಾಕರ ಕೋರೆ

Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…

Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…

Heavy Rain: ಹುಣಸೂರು ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಆಲಿಕಲ್ಲು ಮಳೆ…

Heavy Rain: ಹುಣಸೂರು ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಆಲಿಕಲ್ಲು ಮಳೆ…

ಪ್ರಜ್ವಲ್ ನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿದ್ದರಾಮಯ್ಯ: ಆರ್.ಅಶೋಕ್ ಆರೋಪ

Bidar; ಪ್ರಜ್ವಲ್ ನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿದ್ದರಾಮಯ್ಯ: ಆರ್.ಅಶೋಕ್ ಆರೋಪ

1-wewewqe

Bengaluru ತಂಪೆರೆದ ವರುಣ; ಕೆಲವೆಡೆ ಹಾನಿ: 4 ದಿನ ಮುಂದುವರಿಯುವ ಸಾಧ್ಯತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ; ನಿರ್ವಹಣೆಯಿಲ್ಲದೆ ಸೊರಗಿದ ಮಲ್ಲಿಕಟ್ಟೆ ಪಾರ್ಕ್‌

70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ; ನಿರ್ವಹಣೆಯಿಲ್ಲದೆ ಸೊರಗಿದ ಮಲ್ಲಿಕಟ್ಟೆ ಪಾರ್ಕ್‌

ರಂಗ ಸಂಗಾತಿ 16ನೇ ವಾರ್ಷಿಕೋತ್ಸವ; ರಂಗಭಾಸ್ಕರ ಪ್ರಶಸ್ತಿಗೆ ನಟ ನವೀನ್‌ ಪಡೀಲ್‌ ಆಯ್ಕೆ

ರಂಗ ಸಂಗಾತಿ 16ನೇ ವಾರ್ಷಿಕೋತ್ಸವ; ರಂಗಭಾಸ್ಕರ ಪ್ರಶಸ್ತಿಗೆ ನಟ ನವೀನ್‌ ಪಡೀಲ್‌ ಆಯ್ಕೆ

ಆಪತ್ಕಾಲಕ್ಕೆ ಆತಂಕ; “ರಕ್ತ’ ಅಭಾವ- ಬೇಡಿಕೆ ವಿಪರೀತ ಏರಿಕೆ!

ಆಪತ್ಕಾಲಕ್ಕೆ ಆತಂಕ; “ರಕ್ತ’ ಅಭಾವ- ಬೇಡಿಕೆ ವಿಪರೀತ ಏರಿಕೆ!

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

Mangaluru University; ಲೋಕ ಸಮರದ ನೆಪ; ಘಟಿಕೋತ್ಸವ ಆಗದೆ ವಿ.ವಿ. ವಿದ್ಯಾರ್ಥಿಗಳು ಕಂಗಾಲು!

Mangaluru University; ಲೋಕ ಸಮರದ ನೆಪ; ಘಟಿಕೋತ್ಸವ ಆಗದೆ ವಿ.ವಿ. ವಿದ್ಯಾರ್ಥಿಗಳು ಕಂಗಾಲು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-CKDY

Chikkodi:ಅಮಿತ್ ಶಾ ಸಮ್ಮುಖದಲ್ಲಿ ವಿವೇಕರಾವ್ ಪಾಟೀಲ ಬಿಜೆಪಿ ಸೇರ್ಪಡೆ

Bommai Interview: “ನೀರಾವರಿ-ಕೈಗಾರಿಕಾ ಬೆಳವಣಿಗೆ ಜೊತೆ ಆರ್ಥಿಕಾಭಿವೃದ್ಧಿಗೆ ಆದ್ಯತೆ’

Bommai Interview: “ನೀರಾವರಿ-ಕೈಗಾರಿಕಾ ಬೆಳವಣಿಗೆ ಜೊತೆ ಆರ್ಥಿಕಾಭಿವೃದ್ಧಿಗೆ ಆದ್ಯತೆ’

siddanna-2

Prajwal Revanna ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ: ಸಿದ್ದರಾಮಯ್ಯ ಕಿಡಿ

Interview: “ಈ ಭಾಗದಲ್ಲಿ  ಶಿಕ್ಷಣ-ಉದ್ಯೋಗಕ್ಕೆ ಹೆಚ್ಚು ಆದ್ಯತೆ ನೀಡುವುದು ಅಗತ್ಯ’

Interview: “ಈ ಭಾಗದಲ್ಲಿ ಶಿಕ್ಷಣ-ಉದ್ಯೋಗಕ್ಕೆ ಹೆಚ್ಚು ಆದ್ಯತೆ ನೀಡುವುದು ಅಗತ್ಯ’

Sandalwood; ‘ಕನ್ನಡ ಮಾಧ್ಯಮ’ದಲ್ಲಿ ಹೊಸಬರ ಕನಸು

Sandalwood; ‘ಕನ್ನಡ ಮಾಧ್ಯಮ’ದಲ್ಲಿ ಹೊಸಬರ ಕನಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.