ಚೀನ-ಅಮೆರಿಕ ಸಂಘರ್ಷ ಹೊಸ ಮಜಲಿಗೆ

ಕೋವಿಡ್-19 ನಡುವೆಯೂ ಜಲಾಧಿಪತ್ಯಕ್ಕೆ ಕಮ್ಯುನಿಸ್ಟ್‌ ದೇಶ ಪ್ರಯತ್ನ

Team Udayavani, Apr 25, 2020, 6:45 AM IST

ಚೀನ-ಅಮೆರಿಕ ಸಂಘರ್ಷ ಹೊಸ ಮಜಲಿಗೆ

ಹೊಸದಿಲ್ಲಿ: ಕಮ್ಯುನಿಸ್ಟ್‌ ರಾಷ್ಟ್ರ ಚೀನ ತನ್ನ ಸಲ್ಲದ ಉಪದ್ವ್ಯಾಪ ಬಿಡುತ್ತಿಲ್ಲ. ದಕ್ಷಿಣ ಚೀನ ಸಮುದ್ರದಲ್ಲಿ ಆಧಿಪತ್ಯ ಸಾಧಿಸುವ ಪ್ರಯತ್ನ ಮುಂದು ವರಿಸುತ್ತಿದೆ. ಈ ಮಧ್ಯೆ ಅಮೆರಿಕದ ಯುದ್ಧನೌಕೆಯೊಂದು ಸೂಕ್ಷ್ಮ ಪ್ರದೇಶವಾಗಿ ರುವ ತೈವಾನ್‌ ಜಲಸಂಧಿಯ ಮೂಲಕ ಪ್ರಯಾಣ ಬೆಳೆಸಿದ್ದು, ಚೀನ-ಅಮೆರಿಕ ನಡುವಿನ ಮತ್ತೂಂದು ಸಂಘರ್ಷಕ್ಕೆ ಹಾದಿ ಮಾಡಿಕೊಟ್ಟಿದೆ.

ತನ್ನ ಸಮರ ನೌಕೆಯೊಂದು ಈ ತಿಂಗಳಲ್ಲಿ ಎರಡನೇ ಬಾರಿಗೆ ತೈವಾನ್‌ ಜಲ ಸಂಧಿಯ ಮೂಲಕ ಪ್ರಯಾಣಿಸಿದೆ ಎಂದು ಅಮೆರಿಕದ ಸೇನೆ ಶುಕ್ರವಾರ ತಿಳಿಸಿದೆ. “ಕೋವಿಡ್-19 ಲಾಭ ಪಡೆದುಕೊಂಡು ದಕ್ಷಿಣ ಚೀನ ಸಮುದ್ರದಲ್ಲಿ ತನ್ನ ಆಧಿಪತ್ಯ ಸಾಧಿಸಲು ಚೀನ ಮುಂದಾಗುತ್ತಿದೆ. ಕಡಲಾಚೆಯ ತೈಲ ಮತ್ತು ಅನಿಲ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಕೂಡ ಯೋಜಿಸುತ್ತಿದೆ’ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪೆಯೋ ಆರೋಪಿಸಿದ ಕೆಲವೇ ತಾಸುಗಳ ಅನಂತರ ಅಮೆರಿಕ ಸೈನ್ಯದ ಈ ಹೇಳಿಕೆ ಹೊರಬಿದ್ದಿದೆ.

ಆಧಿಪತ್ಯಕ್ಕೆ ಸತತ ಯತ್ನ
ದಕ್ಷಿಣ ಚೀನ ಸಮುದ್ರದ ಬಹುಭಾಗ ಮತ್ತು ಅಲ್ಲಿನ ದ್ವೀಪರಾಷ್ಟ್ರಗಳು ತನ್ನವು ಎಂದು ಚೀನ ಪ್ರತಿಪಾದಿಸುತ್ತಿದೆ. ಈ ತಿಂಗಳ ಆರಂಭದಲ್ಲಿ ಆಡಳಿತಾತ್ಮಕ ಅನುಕೂಲಕ್ಕಾಗಿ ಇಲ್ಲಿ ಎರಡು ಜಿಲ್ಲೆಗಳನ್ನು ಸ್ಥಾಪಿಸಿದ್ದಾಗಿ ಚೀನ ಘೋಷಿಸಿತ್ತು. ಕಳೆದ ವಾರ ತನ್ನ ನಿಯಂತ್ರಿತ ಪ್ರದೇಶಗಳ ವ್ಯಾಪ್ತಿಯೊಳಗೆ ಚೀನದ ಕರಾವಳಿ ಕಾವಲು ಪಡೆಯ ನಾಲ್ಕು ಹಡಗುಗಳು 90 ನಿಮಿಷಗಳ ಕಾಲ ಒಳನುಸುಳಿದ್ದಕ್ಕಾಗಿ ಜಪಾನ್‌ ಎಚ್ಚರಿಕೆ ನೀಡಿತ್ತು. ಎ.16ರಂದು ಚೀನದ ಕಣ್ಗಾವಲು ನೌಕೆಯೊಂದು ತನ್ನ ನಿಯಂತ್ರಿತ ಪ್ರದೇಶದೊಳಕ್ಕೆ ನುಸುಳಿದ್ದಕ್ಕಾಗಿ ವಿಯೆಟ್ನಾಂ ಪ್ರತಿಭಟಿಸಿತ್ತು.

ಕೆಂಪು ದೇಶದ ಈ ದುಸ್ಸಾಹಸಗಳು ಭಾರತಕ್ಕೂ ಸಮಸ್ಯೆ ತಂದೊಡ್ಡಿವೆ. ಶೇ.55ರಷ್ಟು ಭಾರತೀಯ ಸರಕು ಸಾಗಣೆ ಹಡಗುಗಳು ಈ ಜಲಮಾರ್ಗದ ಮೂಲಕವೇ ಸಾಗುತ್ತವೆ. ಅಲ್ಲದೆ, ದೇಶದ ತೈಲ ಉತ್ಪಾದಕ ಒಎನ್‌ಜಿಸಿ ವಿದೇಶಿ ನಿಗಮವು ವಿಯೆಟ್ನಾಂ ಸಹಯೋಗದಲ್ಲಿ ಇಲ್ಲಿ ಅನಿಲ ಉತ್ಪಾದನ ಯೋಜನೆಯಲ್ಲಿ ತೊಡಗಿದೆ.

ಅರುಣಾಚಲದಲ್ಲಿ ಸರ್ವಋತು ಸೇತುವೆ ಸಂಚಾರಕ್ಕೆ ಮುಕ್ತ
ಯುದ್ಧ ಸಾಮಗ್ರಿ ಮತ್ತು ಶಸ್ತ್ರಾಸ್ತ್ರಗಳ ಸುಲಭ ಸಾಗಣೆಗೆ ಅನುಕೂಲವಾಗುವಂತೆ ಎಲ್ಲ ಋತುಗಳಲ್ಲೂ ಸಂಚರಿಸ ಬಹುದಾದ, 40 ಟನ್‌ಗಳಷ್ಟು ಭಾರ ಹೊರುವ ಸಾಮರ್ಥ್ಯವುಳ್ಳ ಸೇತುವೆಯೊಂದನ್ನು ಅರುಣಾಚಲ ಪ್ರದೇಶದ ಡೋಕ್ಲಾಮ್‌ ವ್ಯಾಪ್ತಿಯಲ್ಲಿ ಸಂಚಾರಕ್ಕೆ ಮುಕ್ತ ಗೊಳಿಸಲಾಗಿದೆ. ಇದು ಭಾರತ ಮತ್ತು ಚೀನ ನಡುವೆ ಮತ್ತೂಂದು ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಯಿದೆ.

2017ರಲ್ಲಿ ಸುಮಾರು ಒಂದು ತಿಂಗಳ ಕಾಲ ಭಾರತ ಮತ್ತು ಚೀನ ಸೈನಿಕರ ನಡುವಿನ ಸಂಘರ್ಷಕ್ಕೆ ಕಾರಣವಾಗಿದ್ದ ಡೋಕ್ಲಾಮ್‌ ವ್ಯಾಪ್ತಿಯಲ್ಲಿಯೇ ಈ ಸೇತುವೆ ಉದ್ಘಾಟನೆಗೊಂಡಿದೆ.

ಟಾಪ್ ನ್ಯೂಸ್

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.