![car](https://www.udayavani.com/wp-content/uploads/2024/07/car-7-415x248.jpg)
Americaದ ಮಹಿಳೆಗೆ ಪಂಗನಾಮ! 300 ರೂ. ಆಭರಣ 6 ಕೋಟಿ ರೂ.ಗೆ ಮಾರಾಟ-ಅಪ್ಪ, ಮಗ ನಾಪತ್ತೆ
Team Udayavani, Jun 11, 2024, 4:53 PM IST
![Americaದ ಮಹಿಳೆಗೆ ಪಂಗನಾಮ! 300 ರೂ. ಆಭರಣ 6 ಕೋಟಿ ರೂ.ಗೆ ಮಾರಾಟ-ಅಪ್ಪ, ಮಗ ನಾಪತ್ತೆ](https://www.udayavani.com/wp-content/uploads/2024/06/America-2-620x379.jpg)
ಜೈಪುರ್/ದೆಹಲಿ: ರಾಜಸ್ಥಾನದ ಅಂಗಡಿ ಮಾಲೀಕರೊಬ್ಬರು 300 ರೂಪಾಯಿ ಬೆಲೆಯ ಆಭರಣವನ್ನು 6 ಕೋಟಿ ರೂಪಾಯಿಗೆ ಮಾರಾಟ ಮಾಡಿ ವಂಚಿಸಿರುವುದಾಗಿ ಅಮೆರಿಕದ ಮಹಿಳೆಯೊಬ್ಬರು ದೂರು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:Renuka Swamy Case: ದರ್ಶನ್ಗೆ ಮರಣದಂಡನೆ- ಜೀವಾವಧಿ ಶಿಕ್ಷೆಯಾಗಲಿ; ನಟಿ ರಮ್ಯಾ ಟ್ವೀಟ್
ಅಮೆರಿಕದ ಪ್ರಜೆಯಾದ ಚೇರಿಷ್ ಎಂಬಾಕೆ ರಾಜಸ್ಥಾನದ ಜೈಪುರದ ಜೋಹ್ರಿ ಬಜಾರ್ ಶಾಪ್ ನಲ್ಲಿ ಆಭರಣ ಖರೀದಿಸಿದ್ದರು. ಈ ಆಭರಣವನ್ನು ಏಪ್ರಿಲ್ ತಿಂಗಳಲ್ಲಿ ಅಮೆರಿಕದಲ್ಲಿ ನಡೆದ ವಸ್ತುಪ್ರದರ್ಶನದಲ್ಲಿ ಪ್ರದರ್ಶನಕ್ಕೆ ಇಟ್ಟ ವೇಳೆ ಇದು ನಕಲಿ ಆಭರಣ ಎಂಬುದು ಪತ್ತೆಯಾಗಿತ್ತು.
300 ರೂಪಾಯಿ ಆಭರಣವನ್ನು 6 ಕೋಟಿ ರೂಪಾಯಿಗೆ ಮಾರಾಟ ಮಾಡುವ ಮೂಲಕ ಮೋಸ ಎಸಗಿದ್ದಾರೆಂದು ತಿಳಿದ ಚೇರಿಷ್ ರಾಜಸ್ಥಾನಕ್ಕೆ ಬಂದು ಅಂಗಡಿ ಮಾಲೀಕ ಗೌರವ್ ಸೋನಿ ಜತೆ ವಾಗ್ವಾದಕ್ಕೆ ಇಳಿದಿದ್ದರು ಎಂದು ವರದಿ ವಿವರಿಸಿದೆ.
ಆದರೆ ಅಂಗಡಿ ಮಾಲೀಕ ಆಕೆಯ ಆರೋಪವನ್ನು ಒಪ್ಪದೇ ಹೋದಾಗ, ಅಮೆರಿಕದ ಮಹಿಳೆ ಜೈಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅಮೆರಿಕ ರಾಯಭಾರಿ ಕಚೇರಿಯ ನೆರವನ್ನು ಯಾಚಿಸಿದ್ದಾರೆ.
2022ರಲ್ಲಿ ಗೌರವ್ ಸೋನಿ ನನಗೆ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದು, ಕಳೆದ ಎರಡು ವರ್ಷಗಳಲ್ಲಿ ಈ ಆಭರಣಕ್ಕಾಗಿ ಆರು ಕೋಟಿ ರೂಪಾಯಿ ಪಾವತಿಸಿದ್ದೇನೆ ಎಂದು ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗೌರವ್ ಹಾಗೂ ತಂದೆ ರಾಜೇಂದ್ರ ಸೋನಿ ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
![car](https://www.udayavani.com/wp-content/uploads/2024/07/car-7-415x248.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![car](https://www.udayavani.com/wp-content/uploads/2024/07/car-7-150x90.jpg)
Road Mishap: ಕಮರಿಗೆ ಉರುಳಿದ ಕಾರು… ಐದು ಮಕ್ಕಳು ಸೇರಿ ಎಂಟು ಮಂದಿ ಮೃತ್ಯು
![Tragedy: ಅಂದು ರೀಲ್ಸ್ ಗಾಗಿ ಚಲಿಸುವ ರೈಲಿನಲ್ಲಿ ಹುಚ್ಚಾಟ… ಇಂದು ಈ ಯುವಕನ ಸ್ಥಿತಿ ನೋಡಿ](https://www.udayavani.com/wp-content/uploads/2024/07/reels-150x105.jpg)
Tragedy: ಅಂದು ರೀಲ್ಸ್ ಗಾಗಿ ಚಲಿಸುವ ರೈಲಿನಲ್ಲಿ ಹುಚ್ಚಾಟ… ಇಂದು ಈ ಯುವಕನ ಸ್ಥಿತಿ ನೋಡಿ
![kupwara](https://www.udayavani.com/wp-content/uploads/2024/07/kupwara-150x98.jpg)
Encounter in Kupwara: ಯೋಧ ಹುತಾತ್ಮ, ಸೇನಾ ಮೇಜರ್ ಸೇರಿದಂತೆ ನಾಲ್ವರಿಗೆ ಗಾಯ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![modi (4)](https://www.udayavani.com/wp-content/uploads/2024/07/modi-4-4-150x92.jpg)
NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!
MUST WATCH
ಹೊಸ ಸೇರ್ಪಡೆ
![car](https://www.udayavani.com/wp-content/uploads/2024/07/car-7-150x90.jpg)
Road Mishap: ಕಮರಿಗೆ ಉರುಳಿದ ಕಾರು… ಐದು ಮಕ್ಕಳು ಸೇರಿ ಎಂಟು ಮಂದಿ ಮೃತ್ಯು
![Editorial: ಯುಪಿಎಸ್ಸಿ ಪರೀಕ್ಷಾ ಸುಧಾರಣೆ ಕ್ರಮ: ಸ್ವಾಗತಾರ್ಹ ಹೆಜ್ಜೆ](https://www.udayavani.com/wp-content/uploads/2024/07/Exam-9-150x84.jpg)
Editorial: ಯುಪಿಎಸ್ಸಿ ಪರೀಕ್ಷಾ ಸುಧಾರಣೆ ಕ್ರಮ: ಸ್ವಾಗತಾರ್ಹ ಹೆಜ್ಜೆ
![Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ](https://www.udayavani.com/wp-content/uploads/2024/07/chikka-150x83.jpg)
Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ
![ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!](https://www.udayavani.com/wp-content/uploads/2024/07/Dubai1-150x84.jpg)
ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!
![Screenshot (7) copy](https://www.udayavani.com/wp-content/uploads/2024/07/Screenshot-7-copy-150x83.jpg)
Thekkatte: 5 ಗ್ರಾ.ಪಂ.ಗಳ ಕಸ ವಿಲೇವಾರಿಯೇ ದೊಡ್ಡ ಸವಾಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.