Delhi ಕಚೋರಿ ಶಾಪ್ ಗೆ ನುಗ್ಗಿದ ಮರ್ಸಿಡಿಸ್ ಕಾರು…ಪ್ರಾಣಾಪಾಯದಿಂದ ಗ್ರಾಹಕರು ಪಾರು!
ಸುತ್ತ-ಮುತ್ತ ಇದ್ದ ಟೇಬಲ್, ಜನರು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರು.
Team Udayavani, Apr 2, 2024, 1:36 PM IST
ನವದೆಹಲಿ: ದೆಹಲಿಯ ಕಾಶ್ಮೀರಿ ಗೇಟ್ ಪ್ರದೇಶದ ಜನಪ್ರಿಯ ಫತೇಹ್ ಕಚೋರಿ ಶಾಪ್ ನಲ್ಲಿ ನೆರೆದಿದ್ದ ಹತ್ತಾರು ಮಂದಿಗೆ ದುಸ್ವಪ್ನವಾಗಿ ಕಾಡಿತ್ತು..ಅದಕ್ಕೆ ಕಾರಣ ಮಿತಿಮೀರಿದ ವೇಗದಲ್ಲಿ ಬಂದ ಮರ್ಸಿಡಿಸ್ ಎಸ್ ಯುವಿ ಕಾರು ಏಕಾಏಕಿ ಒಳನುಗ್ಗಿದ್ದು, ಇದರ ಪರಿಣಾಮ ಆರು ಮಂದಿ ಗ್ರಾಹಕರು ಗಾಯಗೊಂಡಿರುವ ಘಟನೆ ಭಾನುವಾರ (ಮಾರ್ಚ್ 31) ನಡೆದಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:Mangaluru: ಆತ್ಮಹತ್ಯೆಗೆ ಯತ್ನಿಸಿದ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ
ಕಚೋರಿ ಶಾಪ್ ಒಳಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಈ ಭಯಾನಕ ಘಟನೆ ಸೆರೆಯಾಗಿದೆ. ಭಾನುವಾರ ಮಧ್ಯಾಹ್ನ 3ಗಂಟೆ ಹೊತ್ತಿಗೆ ಕಚೋರಿ ಶಾಪ್ ನಲ್ಲಿ ಹಲವು ಗ್ರಾಹಕರು ಚಾಟ್ಸ್ ಸೇವನೆಯಲ್ಲಿ ತೊಡಗಿದ್ದರು. ಆಗ ಮರ್ಸಿಡಿಸ್ ಎಸ್ ಯುವಿ ಕಾರು ದಿಢೀರನೆ ಶಾಪ್ ಒಳಗೆ ನುಗ್ಗಿದ್ದು, ಸುತ್ತ-ಮುತ್ತ ಇದ್ದ ಟೇಬಲ್, ಜನರು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರು.
ಗೋಡೆಗೆ ಡಿಕ್ಕಿ ಹೊಡೆದು ನಿಂತ ಎಸ್ ಯುವಿ ಕಾರು ರಿವರ್ಸ್ ತೆಗೆದು ಶಾಪ್ ನಿಂದ ಹೊರಗೆ ನಿಂತ ಮೇಲೆ ಗ್ರಾಹಕರು ತಮ್ಮ ಕುಟುಂಬ ಸದಸ್ಯರನ್ನು ಗಾಬರಿಯಲ್ಲಿ ಹುಡುಕುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಗ್ರಾಹಕನೊಬ್ಬ ಕಾರಿನ ಅಡಿಭಾಗದಲ್ಲಿ ಪತ್ನಿ ಬಿದ್ದಿರಬಹುದೇ ಎಂದು ಹುಡುಕುತ್ತಿದ್ದ ವೇಳೆ ಹಿಂಭಾಗ ಹೋಗಿ ಬಿದ್ದಿದ್ದ ಪತ್ನಿಯೇ ಎದ್ದು ಬಂದು ಪತಿಯನ್ನು ಕರೆದಾಗ ಪತಿ ನಿಟ್ಟುಸಿರು ಬಿಟ್ಟು, ಗಾಯಗೊಂಡ ಆಕೆಯನ್ನು ತಬ್ಬಿ ಹಿಡಿದು ಕರೆದೊಯ್ಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.
A speeding car careened out of control and crashed into the renowned Fateh Kachori Wala shop on Rajpur Road in Civil Lines, Delhi.
The chaotic scene unfolded while numerous patrons were enjoying their kachoris inside the shop.
pic.twitter.com/PQ5ArBIlnY— prabhakar Kumar choudhary (@chpkc88) April 2, 2024
ಒಬ್ಬ ಗ್ರಾಹಕನ ಕಾಲಿಗೆ ಬಲವಾದ ಏಟು ಬಿದ್ದಿದ್ದು, ಕೆಲವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಪೊಲೀಸರ ಮಾಹಿತಿ ಪ್ರಕಾರ, ನೋಯ್ಡಾ ನಿವಾಸಿ, ಪರಾಗ್ ಮೈನಿ (36) ಎಂಬ ವಕೀಲ ಕಾರನ್ನು ಚಲಾಯಿಸುತ್ತಿದ್ದ. ಘಟನೆಗೆ ಸಂಬಂಧಿಸಿದಂತೆ ಮಿತಿಮೀರಿದ ವೇಗದಲ್ಲಿ ಕಾರನ್ನು ಚಲಾಯಿಸಿದ ಆರೋಪದಡಿ ಪರಾಗ್ ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ
MUST WATCH
ಹೊಸ ಸೇರ್ಪಡೆ
ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು
Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು
Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ
Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ
T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್