ಮದ್ಯ ಮಾರಾಟ ಬಂದ್ ಮಾಡುವಂತೆ ಒತ್ತಾಯಿಸಿ ಮಹಿಳೆಯರ ಪ್ರತಿಭಟನೆ
Team Udayavani, May 5, 2020, 2:01 PM IST
ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಮದ್ಯ ಮಾರಾಟ ಬಂದ್ ಮಾಡುವಂತೆ ಒತ್ತಾಯಿಸಿ ಮಹಿಳೆಯರು ಮಂಗಳವಾರ ಮದ್ಯದಂಗಡಿ ಮುಂದೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಯಲ್ಲಿತ್ತು. ಆಗ ಸರ್ಕಾರ ಮದ್ಯದಂಗಡಿ ಬಂದ್ ಮಾಡಿತ್ತು. ಇದರಿಂದ ನಮ್ಮ ಕುಟುಂಬವು ನೆಮ್ಮದಿಯಿಂದ ಇದ್ದೆವು. ಆದರೆ ಸರ್ಕಾರ ಮದ್ಯ ಮಾರಾಟ ಆರಂಭ ಮಾಡಿ ನಮ್ಮ ಜೀವನಕ್ಕೆ ಕುತ್ತು ತಂದಿದೆ. ಇದರಿಂದ ನಮಗೆ ನೆಮ್ಮದಿ ಇಲ್ಲದಂತಾಗಿದೆ. ಮದ್ಯ ಮಾರಾಟ ಆರಂಭ ಮಾಡಿದ ಮೊದಲ ದಿನವೆ ನಮ್ಮ ಮನೆ ಮಕ್ಕಳು, ಯಜಮಾನರು ಮದ್ಯ ಸೇವನೆ ಮಾಡಿ ನಮಗೆ ತುಂಬ ನೋವು ಕೊಡುತ್ತಿದ್ದಾರೆ. ಮೊದಲೆ ನಮಗೆ ದುಡಿಮೆ ಇಲ್ಲ, ಈ ವೇಳೆ ಊಟಕ್ಕೂ ಕಷ್ಟವಾಗುತ್ತಿದೆ. ಆದರೆ ಸರ್ಕಾರವು ಮದ್ಯದ ಅಂಗಡಿ ತೆರೆದು ನಮ್ಮ ಬದುಕಿಗೆ ಕೊಳ್ಳಿ ಇಡುತ್ತಿದೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ಕಳೆದೊಂದು ತಿಂಗಳು ನಾವು ನೆಮ್ಮದಿಯಿಂದ ಮನೆಯಲ್ಲಿ ಇದ್ದೆವು. ಈಗ ನೆಮ್ಮದಿ ಇಲ್ಲದಂತಾಗುತ್ತಿದೆ. ಮನೆಯಲ್ಲಿ ಇರುವ ದುಡ್ಡನ್ನೆಲ್ಲ ತಂದು ಮಕ್ಕಳು, ಹಿರಿಯರು ಮದ್ಯ ಸೇವಿಸುತ್ತಿದ್ದಾರೆ. ನಮೆಗೆ ಬಂದು ಜಗಳ ಮಾಡುತ್ತಿದ್ದಾರೆ. ಕೂಡಲೇ ಮದ್ಯ ಮಾರಾಟ ಬಂದ್ ಮಾಡಿ ನಮ್ಮ ಜೀವನ ಕಾಪಾಡಬೇಕು ಎಂದು ಹಲವು ಮಹಿಳೆಯರು ಮದ್ಯದಂಗಡಿ ಮುಂದೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಪೊಲೀಸರೊಂದಿಗೂ ವಾಗ್ವಾಧ ನಡೆಸಿದರು.
ಪೊಲೀಸ್ ಸಿಬ್ಬಂದಿಗಳು ಸರ್ಕಾರ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ. ಡಿಸಿ ಅವರು ಆದೇಶ ಮಾಡಿದ್ದಾರೆ. ನೀವು ಸರ್ಕಾರಕ್ಕೆ, ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಳ್ಳಿ ಇಲ್ಲಿ ಮುಂದೆ ಪ್ರತಿಭಟನೆ ಮಾಡಬೇಡಿ. ಇಲ್ಲಿ ಗುಂಪು ಸೇರಬೇಡಿ ಎಂದು ಪೊಲೀಸರು ಮಹಿಳೆಯರಿಗೆ ತಿಳಿ ಹೇಳಿದರೂ ಮಹಿಳೆಯರು ಮಾತ್ರ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
MUST WATCH
ಹೊಸ ಸೇರ್ಪಡೆ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು