ಇಂದೋರ್ ಪಿಚ್ನ್ನು ಜಿಲೇಬಿಗೆ ಹೋಲಿಸಿದ ಝೋಮ್ಯಾಟೋ: ಫುಲ್ ವೈರಲ್
Team Udayavani, Mar 3, 2023, 5:41 PM IST
ನವದೆಹಲಿ: ಭಾರತ-ಆಸ್ಟ್ರೇಲಿಯ ನಡುವಿನ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ಹೀನಾಯವಾಗಿ ಮುಗ್ಗರಿಸಿದೆ. ಆದರೆ ಇಂದೋರ್ ಪಿಚ್ನ ಸ್ಪಿನ್ ಮೋಡಿ ಇತ್ತಂಡಗಳ ಆಟಗಾರರನ್ನೂ ಬಾಧಿಸಿತ್ತು. ಈದೀಗ ಮೂರೇ ದಿನದಲ್ಲಿ ಪಂದ್ಯ ಮುಗಿದಿದ್ದರೂ ನೆಟ್ಟಿಗರು ಈ ಪಿಚ್ ಬಗೆಗಿನ ಚರ್ಚೆಯನ್ನು ಇನ್ನೂ ಬಿಟ್ಟಂತಿಲ್ಲ.
ಇಂದೋರ್ ಪಿಚ್ ಬಗ್ಗೆ ಕ್ರಿಕೆಟ್ ಪ್ರಿಯರು ಸೋಷಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆಗಳನ್ನು ನಡೆಸುತ್ತಿರುವ ಮಧ್ಯೆಯೇ ಪ್ರಖ್ಯಾತ ಆಹಾರ ಡೆಲಿವರಿ ಕಂಪೆನಿ ಝೋಮ್ಯಾಟೋ ಎಂದಿನಂತೆ ತನ್ನ ಫನ್ನಿ ಕಾಮೆಂಟ್ ಮಾಡುವ ಮೂಲಕ ಮತ್ತೆ ಸುದ್ದಿಗೆ ಬಂದಿದೆ.
ಇಂದೋರ್ನ ಡ್ರೈ ಪಿಚ್ನಿಂದಾಗಿ ಪಂದ್ಯ ಅನಿರೀಕ್ಷಿತ ತಿರುವು ಪಡೆದುಕೊಂಡು ಭಾರತದ ಪಾಲಿಗೆ ದುಸ್ವಪ್ನವಾಗಿ ಪರಿಣಮಿಸಿತ್ತು.
ಆದರೆ ಈ ನಡುವೆಯೂ ಟ್ವಿಟರ್ನಲ್ಲಿ ಪಿಚ್ ಬಗ್ಗೆ ಆಹಾರ ಸಂಬಂಧಿ ಟ್ವೀಟ್ ಮಾಡಿರುವ ಝೊಮ್ಯಾಟೋ ಇಂದೋರ್ ಪಿಚ್ನ್ನು ಭಾರತದ ಪ್ರಸಿದ್ಧ ಸಿಹಿ ತಿಂಡಿ ಜಿಲೇಬಿಗೆ ಹೋಲಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ವೈರಲ್ ಆಗಿದೆ.
there is more turn on this pitch than on a jalebi #IndvsAus
— zomato (@zomato) March 1, 2023
ಝೋಮ್ಯಾಟೋ ಮಾಡಿರುವ ವೈರಲ್ ಟ್ವೀಟ್ನಲ್ಲಿ ʻಈ ಪಿಚ್ನಲ್ಲಿ ಜಿಲೇಬಿಯಲ್ಲಿರುವುದಕ್ಕಿಂತಲೂ ಹೆಚ್ಚು ಸುತ್ತುಗಳಿದ್ದವುʼ ಎಂದು ಹೇಳಿದೆ. ಈ ಟ್ವೀಟ್ ಭಾರೀ ವೈರಲ್ ಆಗಿದ್ದು ಸುಮಾರು 30.3 ಸಾವಿರಕ್ಕೂ ಅಧಿಕ ವ್ಯೂವ್ಸ್ ಪಡೆದುಕೊಂಡಿದೆ. ಈ ಟ್ವೀಟ್ಗೆ ರಿಪ್ಲೈ ಮಾಡಿರುವ ಟಾಟಾ ಪ್ಲೇ ಬಿಂಗ್, ʻಆದರೂ ಸಾಲು ಸಾಲು ವಿಕೆಟ್ ಬೀಳುತ್ತಿದ್ದದ್ದು ಅಷ್ಟು ಸಿಹಿಯಾಗಿರಲಿಲ್ಲʼ ಎಂದಿದೆ.
Though the fall of wickets wasn’t as sweet!🥲
— Tata Play Binge (@TataPlayBinge) March 1, 2023
ಇದನ್ನೂ ಓದಿ : ಇಂದೋರ್ ಟೆಸ್ಟ್ ಗೆಲುವಿನೊಂದಿಗೆ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ತಲುಪಿದ ಆಸೀಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ
MUST WATCH
ಹೊಸ ಸೇರ್ಪಡೆ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ