ಹಲ್ಲೆ: ದೂರು, ಪ್ರತಿದೂರು ದಾಖಲು
Team Udayavani, Mar 31, 2023, 5:24 AM IST
ಸಿದ್ದಾಪುರ: ಆಜ್ರಿ ಗ್ರಾಮದ ಚೌಕುಳಮಕ್ಕಿ ಎಂಬಲ್ಲಿ ಮನೆ ಕಟ್ಟುತ್ತಿದ್ದಾಗ ರಾಮ ಪೂಜಾರಿ, ರಮೇಶ ಪೂಜಾರಿ ಮತ್ತು ಕೃಷ್ಣ ಪೂಜಾರಿ ಅವರು ಜಾಗದ ತಕರಾರು ತೆಗೆದು ಮರದ ಕೋಲಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಸವಿತಾ ಪೂಜಾರಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರತಿದೂರು
ಗೇರು ತೋಟದಲ್ಲಿ ಗೇರು ಬೀಜ ಹೆಕ್ಕುತ್ತಿದ್ದಾಗ ಆರೋಪಿಗಳಾದ ಲಕ್ಷ್ಮೀ ಪೂಜಾರಿ, ಶಂಕರ ಪೂಜಾರಿ, ಅಣ್ಣಪ್ಪ ಪೂಜಾರಿ, ಗೋಪಾಲ ಪೂಜಾರಿ, ಉಮಾಪತಿ, ಉದಯ ಪೂಜಾರಿ ಅವರು ಅಕ್ರಮ ಕೂಟ ಕಟ್ಟಿಕೊಂಡು ಬಂದು ಜಾಗದ ತಕರಾರು ತೆಗೆದು, ಸವಿತಾ ಅವರಿಗೆ ಮನೆ ಕಟ್ಟಲು ಜಾಗ ಯಾಕೆ ಕೊಡುವುದಿಲ್ಲ ಎಂದು ಹಲ್ಲೆ ನಡೆಸಿದರು ಎಂದು ಬೇಬಿ ಪೂಜಾರಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಶಂಕರನಾರಾಯಣ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.