ಆಟೋ ರಿಕ್ಷಾ ಢಿಕ್ಕಿ: ಗಾಯಾಳು ಸಾವು
Team Udayavani, Apr 7, 2023, 5:00 AM IST
ಕಾಸರಗೋಡು: ಪೊವ್ವಲ್ ಬೆಂಚ್ ಕೋರ್ಟ್ ಸಮೀಪ ಆಟೋ ರಿಕ್ಷಾ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ಕೂಟರ್ ಸವಾರ ಕೆಟ್ಟುಂಗಲ್ ನಿವಾಸಿಯಾಗಿರುವ ಯೂನಿಯನ್ ಬ್ಯಾಂಕ್ ಬೋವಿಕ್ಕಾನ ಶಾಖೆಯ ಅಪ್ರೈಸರ್ ರಘುರಾಮನ್ (30) ಸಾವಿಗೀಡಾದರು.
ಮಾ. 30ರಂದು ಆಟೋ ರಿಕ್ಷಾ ಢಿಕ್ಕಿ ಹೊಡೆದು ಸ್ಕೂಟರ್ ಸವಾರ ರಘುರಾಮನ್ ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸಾವು ಸಂಭವಿಸಿತು.
———————
ಅಪ್ರಾಪ್ತ ಯುವತಿಯ ವಿವಾಹ: ಯುವಕನ ವಿರುದ್ಧ ಪೊಕ್ಸೋ ಕೇಸು
ಕುಂಬಳೆ: ಅಪ್ರಾಪ್ತ ಯುವ ತಿಯನ್ನು ಮದುವೆಯಾಗಿ, ಆ ಸಂಬಂಧದಲ್ಲಿ ಒಂದು ಗಂಡು ಮಗು ಜನಿಸಿದ ಘಟನೆಗೆ ಸಂಬಂಧಿಸಿ ಒಂದೂವರೆ ವರ್ಷದ ಬಳಿಕ ಪೊಲೀಸರು ಪೊಕ್ಸೋ ಪ್ರಕಾರ ಕೇಸು ದಾಖಲಿಸಿಕೊಂಡಿದ್ದಾರೆ.
ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಬಾಲಕಿ ನೀಡಿದ ಹೇಳಿಕೆ ಹಿನ್ನೆಲೆಯಲ್ಲಿ ಹತ್ತಿರದ ಸಂಬಂಧಿಕನಾದ 28ರ ಹರೆಯದ ಯುವಕನ ವಿರುದ್ಧ ಕೇಸು ದಾಖಲಿಸಲಾಗಿದೆ. ಆರೋಪಿ ತಮಿಳುನಾಡು ನಿವಾಸಿಯಾಗಿದ್ದಾನೆ.
ಕೋವಿಡ್ ಕಾಲದಲ್ಲಿ ಬಾಲಕಿಯನ್ನು ತಮಿಳುನಾಡಿಗೆ ಕರೆದೊಯ್ದು ಯುವಕ ಮದುವೆಯಾಗಿರುವುದಾಗಿ ಹೇಳಲಾಗುತ್ತಿದೆ. ಅನಂತರ ಅವರಿಬ್ಬರು ಅಲ್ಲಿಯೇ ವಾಸಿಸಿದ್ದಾರೆ. ಈ ಸಂಬಂಧದಲ್ಲಿ ಒಂದೂವರೆ ವರ್ಷದ ಮಗುವಿದೆ. ದಾಖಲೆಪತ್ರವೊಂದರ ಅಗತ್ಯಕ್ಕಾಗಿ ಬಾಲಕಿ ಈ ಹಿಂದೆ ಕಲಿತಿದ್ದ ಶಾಲೆಗೆ ತಲುಪಿದಾಗ ಸಂಶಯಗೊಂಡ ಕೌನ್ಸೆಲಿಂಗ್ ಹೊಣೆಗಾರಿಕೆಯುಳ್ಳ ಅಧ್ಯಾಪಿಕೆ ಬಾಲಕಿಯ ಮನೆಗೆ ತಲುಪಿ ಪರಿಶೀಲಿಸಿದಾಗ ಬಾಲಕಿ ಪ್ರಾಯಪೂರ್ತಿಯಾಗುವ ಮುನ್ನವೇ ಮದುವೆಯಾಗಿರುವುದಾಗಿಯೂ ಮಗುವಿಗೆ ಜನ್ಮ ನೀಡಿರುವುದಾಗಿಯೂ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಯಿತು. ಈ ವಿಷಯ ತಿಳಿದು ಆರೋಪಿ ತಲೆಮರೆಸಿಕೊಂಡಿದ್ದಾನೆ. ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಬಾಲಕಿ ಹಾಗು ಮಗುವನ್ನು ನಿರ್ಭಯ ಕೇಂದ್ರಕ್ಕೆ ಸೇರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ