ಯೆಸ್ ಬ್ಯಾಂಕ್ ಗೆ 466 ಕೋಟಿ ರೂ.ವಂಚನೆ:ಗೌತಮ್ ಥಾಪರ್ ಮನೆ, ಕಚೇರಿ ಮೇಲೆ ಸಿಬಿಐ ದಾಳಿ
ಆರೋಪಿಗಳು ಮತ್ತು ಅವರ ಕಂಪನಿಗಳು ಯೆಸ್ ಬ್ಯಾಂಕ್ ನಿಂದ ಭಾರೀ ಪ್ರಮಾಣದ ಸಾಲವನ್ನು ಪಡೆದುಕೊಂಡಿತ್ತು.
Team Udayavani, Jun 9, 2021, 4:15 PM IST
ನವದೆಹಲಿ: ಯೆಸ್ ಬ್ಯಾಂಕ್ ಗೆ 466 ಕೋಟಿ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬುಧವಾರ(ಜೂನ್ 09) ಶ್ರೀಮಂತ ಉದ್ಯಮಿ, ಅವಂತಾ ಗ್ರೂಪ್ ಸಂಸ್ಥಾಪಕ ಗೌತಮ್ ಥಾಪರ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಅನ್ ಲಾಕ್ ಬಗ್ಗೆ ಚರ್ಚಿಸಲಾಗಿದೆ, ಬಾರ್ ಅವಧಿ ವಿಸ್ತರಣೆ ಕುರಿತೂ ಚರ್ಚಿಸಲಾಗಿದೆ : ಆರ್ ಅಶೋಕ್
ಮೂಲಗಳ ಪ್ರಕಾರ, ಸಿಬಿಐ ಥಾಪರ್ ಗೆ ಸೇರಿದ ನಿವಾಸ, ಕಚೇರಿ ಸೇರಿದಂತೆ 20 ಸ್ಥಳಗಳಲ್ಲಿ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿರುವುದಾಗಿ ಹೇಳಿದೆ.
ಗೌತಮ್ ಥಾಪರ್ (60ವರ್ಷ) ಸೇರಿದಂತೆ ರಘುಬೀರ್ ಕುಮಾರ್ ಶರ್ಮಾ, ರಾಜೇಂದ್ರ ಕುಮಾರ್ ಮಂಗಲ್, ತಾಪ್ಸಿ ಮಹಾಜನ್ ಮತ್ತು ಅವರ ಕಂಪನಿಗಳಾದ ಓಯಿಸ್ಟರ್ ಬಿಲ್ಡ್ ವೆಲ್ ಪ್ರೈ ಲಿಮಿಟೆಡ್, ಅವಂತ ರಿಯಾಲಿಟಿ ಪ್ರೈವೇಟ್ ಲಿಮಿಟೆಡ್ ಮತ್ತು ಜಾಬುವಾ ಪವರ್ ಲಿಮಿಟೆಡ್ ನ ಅಪರಿಚಿತ ಅಧಿಕಾರಿಗಳ ಹೆಸರನ್ನು ಪ್ರಕರಣದಲ್ಲಿ ಉಲ್ಲೇಖಿಸಿರುವುದಾಗಿ ವರದಿ ವಿವರಿಸಿದೆ.
ಆರೋಪಿಗಳು ಮತ್ತು ಅವರ ಕಂಪನಿಗಳು ಯೆಸ್ ಬ್ಯಾಂಕ್ ನಿಂದ ಭಾರೀ ಪ್ರಮಾಣದ ಸಾಲವನ್ನು ಪಡೆದುಕೊಂಡಿತ್ತು. ಆದರೆ ದೀರ್ಘಕಾಲದಿಂದ ಸಾಲವನ್ನು ಮರುಪಾವತಿಸದ ಕಾರಣ ಅವರ ಖಾತೆಗಳು ಎಪಿಎ (ಕಾರ್ಯನಿರ್ವಹಿಸದ ಆಸ್ತಿ) ಆಗಿ ಮಾರ್ಪಟ್ಟಿರುವುದಾಗಿ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ