ಸ್ಯಾಂಟ್ರೋ ರವಿ ಬಂಧಿಸಿ ಆತನ 20 ವರ್ಷದ ಇತಿಹಾಸ ತೆಗೆಯುತ್ತೇವೆ: ಸಿಎಂ ಬೊಮ್ಮಾಯಿ
Team Udayavani, Jan 7, 2023, 1:28 PM IST
ಬೆಂಗಳೂರು: ಕಳೆದ 20 ವರ್ಷಗಳಿಂದ ಸ್ಯಾಂಟ್ರೋ ರವಿ ಯಾವೆಲ್ಲ ರಾಜಕಾರಣಿಗಳ ಜತೆಗೆ ಸಂಬಂಧ ಹೊಂದಿದ್ದಾರೆಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಸ್ಯಾಂಟ್ರೋ ರವಿ ವಿಚಾರದ ಬಗ್ಗೆ ಮಾತನಾಡಿರುವ ಅವರು, ಎಲ್ಲರ ಹಿನ್ನೆಲೆ ತಿಳಿದುಕೊಂಡು ಮಾತನಾಡಲು ಸಾಧ್ಯವಿಲ್ಲ. ಆದಾಗಿಯೂ ಕಳೆದ 20 ವರ್ಷಗಳಿಂದ ರವಿ ಯಾರ ಯಾರ ಜತೆ ಸಂಪರ್ಕ ಹೊಂದಿದ್ದ ಎಂಬ ತನಿಖೆ ನಡೆಸಲು ಸೂಚಿಸಿದ್ದೇನೆ. ವಿಪಕ್ಷ ನಾಯಕರ ಜತೆಗೂ ಸಂಬಂಧ ಹೊಂದಿರುವ ಬಗ್ಗೆಯೂ ತನಿಖೆಯಾಗಲಿ ಎಂದರು.
ಇದನ್ನೂ ಓದಿ:ಪಡುಹಿತ್ಲು ನ್ಯಾಯ ಪ್ರಸಂಗ: ಒಂದು ಬಣದಿಂದ ದೈವಸ್ಥಾನಕ್ಕೆ ಬೀಗ; ಜಾರಂದಾಯ ನೇಮಕ್ಕೆ ಅಡ್ಡಿ
ಮಹಿಳೆ ನೀಡಿರುವ ದೂರಿನ ಆಧಾರದ ಮೇಲೆ ಸ್ಯಾಂಟ್ರೋ ರವಿ ಬಂಧಿಸಿ ಕ್ರಮ ತೆಗದುಕೊಳ್ಳಲು ಸೂಚನೆ ನೀಡಿದ್ದೇನೆ. ಯಾವುದೇ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದೇನೆ ಎಂದು ಹೇಳಿದರು.