Indonesia Open Badminton: ಸಾತ್ವಿಕ್- ಚಿರಾಗ್ ಶೆಟ್ಟಿ , ಪ್ರಣಯ್ ಸೆಮಿ ಪ್ರವೇಶ
Team Udayavani, Jun 17, 2023, 5:56 AM IST
ಜಕಾರ್ತಾ: ಇಂಡೋ ನೇಷ್ಯಾ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಎಚ್.ಎಸ್. ಪ್ರಣಯ್, ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಭಾರತದ ಭರವಸೆಯಾಗಿ ಉಳಿದಿದ್ದಾರೆ. ಇವರೆಲ್ಲರೂ ಸೆಮಿಫೈನಲ್ ಪ್ರವೇಶಿ ಸಿದ್ದಾರೆ. ಆದರೆ ಕೆ. ಶ್ರೀಕಾಂತ್ ಕ್ವಾರ್ಟರ್ ಫೈನಲ್ನಲ್ಲಿ ಎಡವಿದರು.
ಭಾರತದ ಶುಕ್ರವಾರದ ಆಟ ಸೋಲಿನೊಂದಿಗೆ ಆರಂಭಗೊಂಡಿತು. ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ನಲ್ಲಿ ಕೆ. ಶ್ರೀಕಾಂತ್ ಚೀನದ ಲೀ ಶಿ ಫೆಂಗ್ ವಿರುದ್ಧ ಉತ್ತಮ ಹೋರಾಟ ಪ್ರದರ್ಶಿಸಿಯೂ 14-21, 21-14, 12-21 ಅಂತರದಿಂದ ಪರಾಭವಗೊಂಡರು. ವಿಶ್ವದ 10ನೇ ರ್ಯಾಂಕಿಂಗ್ ಆಟಗಾರ ಫೆಂಗ್ ಎದುರು ಶ್ರೀಕಾಂತ್ ಒಂದು ಗಂಟೆ, 9 ನಿಮಿಷಗಳ ತನಕ ಹೋರಾಡಿದರು.
ಅನಂತರದ ಕ್ವಾರ್ಟರ್ ಫೈನಲ್ನಲ್ಲಿ 7ನೇ ಶ್ರೇಯಾಂಕದ ಎಚ್.ಎಸ್. ಪ್ರಣಯ್ ಗೆಲುವಿನ ಫಲಿತಾಂಶ ದಾಖಲಿಸಿದರು. ತೃತೀಯ ಶ್ರೇಯಾಂಕದ ಜಪಾನ್ ಆಟಗಾರ ಕೊಡೈ ನರವೋಕ ಅವರನ್ನು 21-18, 21-6 ಅಂತರದಿಂದ ಹಿಮ್ಮೆಟ್ಟಿಸಿದರು. ವಿಕ್ಟರ್ ಅಕ್ಸೆಲ್ಸೆನ್ (ಡೆನ್ಮಾರ್ಕ್)-ಟೀನ್ ಚೆನ್ ಚೌ (ಚೈನೀಸ್ ತೈಪೆ) ನಡುವಿನ ವಿಜೇತರನ್ನು ಪ್ರಣಯ್ ಎದುರಿಸಲಿದ್ದಾರೆ.
ಪುರುಷರ ಡಬಲ್ಸ್ನಲ್ಲಿ 7ನೇ ಶ್ರೇಯಾಂಕದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಅಗ್ರ ಶ್ರೇಯಾಂಕದ ಫಜರ್ ಅಲ್ಫಿಯಾನ್-ಮುಹಮ್ಮದ್ ರಿಯಾನ್ ಅರ್ದಿ ಯಾಂಟೊ ವಿರುದ್ಧ ಅಮೋಘ ಪ್ರದರ್ಶನ ನೀಡಿದರು. ಕೇವಲ 41 ನಿಮಿಷಗಳಲ್ಲಿ, ಎರಡೇ ಗೇಮ್ಗಳಲ್ಲಿ ಇಂಡೋನೇಷ್ಯನ್ ಜೋಡಿಯ ಆಟ ಮುಗಿಸಿದರು. ಅಂತರ 21-13, 21-13. ಕೊರಿಯಾದ ಮಿನ್ ಹ್ಯುಕ್ ಕಾಂಗ್-ಸೆಯಂಗ್ ಜೇ ಸೆವೊ-ಇಂಡೋನೇಷ್ಯಾದ ಲಿಯೋ ರಾಲಿ ಕರ್ನಾಂಡೊ-ಡೇನಿಯಲ್ ಮಾರ್ಟಿನ್ ನಡುವಿನ ವಿಜೇತರ ವಿರುದ್ಧ ಸೆಮಿಫೈನಲ್ ಪಂದ್ಯ ಆಡಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ