ನನ್ನ ತಮಾಷೆಯನ್ನು ಸುಪ್ರೀಂ ಗಂಭೀರವಾಗಿ ಸ್ವೀಕರಿಸಿದ್ದೇ ಅಚ್ಚರಿ: ಕುನಾಲ್ ಸಮರ್ಥನೆ
Team Udayavani, Jan 29, 2021, 10:10 PM IST
ನವದೆಹಲಿ: ಸುಪ್ರೀಂ ಕೋರ್ಟ್ ಸಿಜೆಐ ಮತ್ತು ನ್ಯಾಯಾಂಗ ವ್ಯವಸ್ಥೆ ವಿರುದ್ಧ ತಮಾಷೆಯ ಟ್ವೀಟ್ ಮಾಡಿ, ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿರುವ ಸ್ಟಾಂಡ್ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ಸುಪ್ರೀಂ ಮುಂದೆ ಟ್ವೀಟನ್ನು ಸಮರ್ಥಿಸಿಕೊಂಡಿದ್ದಾರೆ.
ಶುಕ್ರವಾರ ಸಲ್ಲಿಸಿದ್ದ ಅಫಿಡವಿಟ್ನಲ್ಲಿ ಅವರು, “ನಾನು ಯಾವುದೇ ದುರುದ್ದೇಶದಿಂದ ಟ್ವೀಟ್ ಮಾಡಿಲ್ಲ. ಆದರೆ, ಕೋರ್ಟ್ ಇದನ್ನು ಗಂಭೀರವಾಗಿ ಸ್ವೀಕರಿಸಿರುವುದೇ ನನಗೆ ಅಚ್ಚರಿ. ಕಾಮಿಡಿಯನ್ನರು ತಮ್ಮದೇ ಗ್ರಹಿಕೆಗಳಿಂದ ಹಾಸ್ಯ ಸೃಷ್ಟಿಸಿ ಜನರನ್ನು ನಗಿಸುತ್ತಾರಷ್ಟೇ. ಇವು ಯಾವತ್ತೂ ವಾಸ್ತವವಾಗಿರುವುದಿಲ್ಲ. ಅದನ್ನು ಸತ್ಯ ಎಂದೂ ಪ್ರತಿಪಾದಿಸಲಾಗದು. ದೇಶದಲ್ಲಿ ಇಂದು ಅಸಹಿಷ್ಣುತೆ ಸಂಸ್ಕೃತಿ ಹೆಚ್ಚುತ್ತಿದ್ದು, ಏನು ಹೇಳಿದರೂ ತಪ್ಪು ಕಾಣಿಸುವಂತಾಗಿದೆ’ ಎಂದು ವಿಷಾದಿಸಿದ್ದಾರೆ. “ಜಗತ್ತಿನ ಶಕ್ತಿಶಾಲಿ ಕೋರ್ಟ್ನ ಅಡಿಪಾಯ ನನ್ನ ಟೀಕೆಯಿಂದ ಅಲುಗಾಡಿದೆ ಎನ್ನುವುದು ನನಗೆ ನಂಬಲಾಗದ ಸಂಗತಿ’ ಎಂದಿದ್ದಾರೆ.
ತನೇಜಾಗೆ ಬುದ್ಧಿವಾದ: ಕುನಾಲ್ನಂತೆ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುತ್ತಿರುವ ಕಾಮಿಕ್ ಆರ್ಟಿಸ್ಟ್ ರಚಿತಾ ತನೇಜಾ ಕೂಡ ಸುಪ್ರೀಂಗೆ ತಮ್ಮ ನಿಂದನಾತ್ಮಕ ಟ್ವೀಟ್ ಸಮರ್ಥಿಸಿ, ಸ್ಪಷ್ಟನೆ ರವಾನಿಸಿದ್ದರು. ಇದಕ್ಕೆ ಉತ್ತರಿಸಿದ ನ್ಯಾಯಪೀಠ “ನಿಮ್ಮ ಅಭಿಪ್ರಾಯ ಒಪ್ಪುತ್ತೇವೆ. ಆದರೆ, ಈ ದಿನಗಳಲ್ಲಿ ಟೀಕಾಸಂಸ್ಕೃತಿ ಬೆಳೆಯುತ್ತಿದೆ. ಎಲ್ಲರೂ ಇದನ್ನು ಮಾಡುತ್ತಿದ್ದಾರೆ’ ಎಂದು ವಿಷಾದಿಸಿದೆ.
ಇದನ್ನೂ ಓದಿ:ಟಿಎಂಸಿ ಶಾಸಕ ರಜೀಬ್ ಬ್ಯಾನರ್ಜಿ ರಾಜೀನಾಮೆ : ಬಿಜೆಪಿಗೆ ಸೇರ್ಪಡೆ ಸಾಧ್ಯತೆ
“ಕೋರ್ಟಿನ ಅಡಿಪಾಯ ಬಹಳ ಗಟ್ಟಿಯಿದೆ. ಅದು ಯಾರ ಟೀಕೆಗೂ ಅಲುಗಾಡುವುದಿಲ್ಲ’ ಎಂದೂ ನ್ಯಾ. ರೊಹrಗಿ, ಆರ್.ಎಸ್. ರೆಡ್ಡಿ, ಎಂ.ಆರ್. ಷಾ ನೇತೃತ್ವದ ಪೀಠ ಖಾರವಾಗಿ ಪ್ರತಿಕ್ರಿಯಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ