ಏನಿದು ಬೋರಿಸ್ ವಿವಾದ: ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿಗೆ ಬ್ರಿಟನ್ ಪ್ರಧಾನಿ ಹುದ್ದೆ?
ಬೋರಿಸ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕೆಂಬ ಒತ್ತಡ ಹೆಚ್ಚಾಗತೊಡಗಿದೆ.
Team Udayavani, Jan 14, 2022, 1:33 PM IST
ಯುಕೆ(ಬ್ರಿಟನ್): ಬ್ರಿಟನ್ (ಯುನೈಟೆಡ್ ಕಿಂಗ್ ಡಮ್) ಪ್ರಧಾನಿ ಬೋರಿಸ್ ಜಾನ್ಸನ್ ಗದ್ದುಗೆಯಿಂದ ಕೆಳಗಿಳಿಯಬೇಕೆಂದು ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷವೇ ತೀವ್ರ ಒತ್ತಡ ಹೇರುತ್ತಿದ್ದು, ಬೋರಿಸ್ ಶೀಘ್ರವೇ ರಾಜೀನಾಮೆ ನೀಡುವ ಸಾಧ್ಯತೆ ಇದ್ದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಇದನ್ನೂ ಓದಿ:ಬೆಂಗಳೂರು: ಯುವ ವೈದ್ಯನ ಆತ್ಮಹತ್ಯೆಗೆ ಹನಿಟ್ರ್ಯಾಪ್ ಕಾರಣ!
ಬೋರಿಸ್ ಜಾನ್ಸನ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದಲ್ಲಿ, ಭಾರತೀಯ ಮೂಲದ ಚಾನ್ಸಲರ್, ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಾಕ್ ಬ್ರಿಟನ್ ನ ಪ್ರಧಾನಿ ಹುದ್ದೆಗೇರುವ ಸಾಧ್ಯತೆ ದಟ್ಟವಾಗಿದೆ ಎಂದು ವರದಿ ವಿವರಿಸಿದೆ.
ಏನಿದು ವಿವಾದ:
2020ರ ಮೇನಲ್ಲಿ ಬ್ರಿಟನ್ ನಲ್ಲಿ ಕೋವಿಡ್ ನ ಮೊದಲ ಲಾಕ್ ಡೌನ್ ಜಾರಿಯಲ್ಲಿದ್ದ ಸಂದರ್ಭದಲ್ಲಿ ಪ್ರಧಾನಿ ಬೋರಿಸ್ ಜಾನ್ಸನ್ ಡೌನಿಂಗ್ ಸ್ಟ್ರೀಟ್ ಉದ್ಯಾನವನದಲ್ಲಿ ಮದ್ಯ ಪಾರ್ಟಿ ನಡೆಸಿದ್ದು, ಬಹಿರಂಗವಾದ ಬಳಿಕ ಬೋರಿಸ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕೆಂಬ ಒತ್ತಡ ಹೆಚ್ಚಾಗತೊಡಗಿದೆ.
ಲಾಕ್ ಡೌನ್ ಮಾರ್ಗಸೂಚಿ ಉಲ್ಲಂಘಿಸಿ ಡೌನಿಂಗ್ ಸ್ಟ್ರೀಟ್ ಉದ್ಯಾನವನದಲ್ಲಿ ನೂರಕ್ಕೂ ಅಧಿಕ ಮಂದ ಜತೆ ಮದ್ಯ ಸೇವನೆ ಮಾಡಿರುವ ಘಟನೆಗೆ ಬೋರಿಸ್ ಬುಧವಾರ ಕ್ಷಮೆಯಾಚಿಸಿದ್ದರು. ಬೋರಿಸ್ ಜಾನ್ಸನ್ ದೇಶದ ಅಧಿಕಾರ ನಡೆಸುವ ನೈತಿಕತೆ ಹೊಂದಿಲ್ಲ, ಕೂಡಲೇ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಲೇಬರ್(ವಿರೋಧ) ಪಕ್ಷದ ಮುಖಂಡ ಕೀರ್ ಸ್ಟಾರ್ಮರ್ ಒತ್ತಾಯಿಸಿದ್ದಾರೆ.
ಸುನಾಕ್ ಗೆ ಬ್ರಿಟನ್ ಪ್ರಧಾನಿ ಹುದ್ದೆ?
ಕನ್ಸರ್ವೇಟಿವ್ ಪಕ್ಷ ಮೊದಲ ಬಾರಿಗೆ ಭಾರತೀಯ ಮೂಲದ ಸುನಾಕ್ ಅವರನ್ನು ಬ್ರಿಟನ್ ನ ಪ್ರಧಾನಿಯನ್ನಾಗಿ ಮಾಡಲಿದೆ. ಮೊದಲ ಮಹಿಳಾ ಪ್ರಧಾನಿಯನ್ನು (ಮಾರ್ಗರೇಟ್ ಥ್ಯಾಚರ್) ಆಯ್ಕೆ ಮಾಡಿದ್ದು ನಮ್ಮದೇ ಪಕ್ಷ, ಜ್ಯೂವಿಶ್ ಪ್ರಧಾನಿ (ಬೆಂಜಮಿನ್)ಯನ್ನು ಕೂಡಾ ಕನ್ಸರ್ವೇಟಿವ್ ಪಕ್ಷವೇ ಆಯ್ಕೆ ಮಾಡಿತ್ತು ಎಂಬುದಾಗಿ ಡೇವಿಡ್ ಕ್ಯಾಮರೂನ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
MUST WATCH
ಹೊಸ ಸೇರ್ಪಡೆ
Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್
Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ
YSR Congress ಪ್ರಣಾಳಿಕೆ: ಪಿಂಚಣಿ ಮೊತ್ತ ಏರಿಕೆ, ವೈಜಾಗ್ ಕಾರ್ಯಕಾರಿ ರಾಜಧಾನಿ
Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು
Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ