ಮರಣಮೃದಂಗ: ದೆಹಲಿಯಲ್ಲಿ ಒಂದು ಸಾವಿರಕ್ಕೂ ಅಧಿಕ ಕೋವಿಡ್ ಸಾವಿನ ಅಂಕಿಅಂಶ ಮುಚ್ಚಿಡಲಾಗಿದೆ!
ಸಾವಿನ ಪ್ರಮಾಣದ ಅಂಕಿಅಂಶ ಹೊಂದಾಣಿಕೆಯಾಗದ ಕಾರಣ ಇನ್ನೂ ತಿಳಿದು ಬಂದಿಲ್ಲ
Team Udayavani, Apr 27, 2021, 1:26 PM IST
ನವದೆಹಲಿ: ಭಾರತದಲ್ಲಿ ಕೋವಿಡ್ ಎರಡನೇ ಅಲೆ ತೀವ್ರ ಆತಂಕ, ಜೀವಹಾನಿಗೆ ಎಡೆಮಾಡಿಕೊಟ್ಟಿರುವ ನಡುವೆ ರಾಷ್ಟ್ರರಾಜಧಾನಿಯಲ್ಲಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿರುವ ರಾಶಿ, ರಾಶಿ ಶವಗಳ ದಹನ ಕ್ರಿಯೆ ಮಾಡುತ್ತಿರುವ ಫೋಟೊ ವಿದೇಶಿ ಪತ್ರಿಕೆಗಳ ಮುಖಪುಟದಲ್ಲಿ ಪ್ರಕಟವಾಗಿದೆ. ಆದರೆ ದೆಹಲಿಯಲ್ಲಿ ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ದೆಹಲಿ ಸರ್ಕಾರ ನೈಜ ಅಂಕಿಅಂಶವನ್ನು ಮುಚ್ಚಿಟ್ಟಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಲೈಂಗಿಕ ದೌರ್ಜನ್ಯದ ಆರೋಪಿ ತರುಣ್ ವಿರುದ್ಧದ ವಿಚಾರಣೆ ಮುಕ್ತಾಯ : ಮೇ.12ಕ್ಕೆ ತೀರ್ಪು
ದೆಹಲಿ ಮಹಾನಗರ ಪಾಲಿಕೆಯ ದಾಖಲೆಯಲ್ಲಿ ಕೋವಿಡ್ ಸಾವಿನ ನೈಜ ಅಂಕಿಅಂಶ ಪತ್ತೆಯಾಗಿರುವುದಾಗಿ ಎನ್ ಡಿಟಿವಿ ವರದಿ ತಿಳಿಸಿದ್ದು, ಏಳು ಚಿತಾಗಾರಗಳಿಗೆ ಭೇಟಿ ನೀಡಿದ ವೇಳೆ 1,150 ಶವಗಳು ಪತ್ತೆಯಾಗಿರುವುದಾಗಿ ತಿಳಿಸಿದೆ. ಆದರೆ ಅಧಿಕಾರಿಗಳು ಇದನ್ನು ಕೋವಿಡ್ ಸಾವಿನ ಪಟ್ಟಿಯಲ್ಲಿ ಸೇರಿಸಿಲ್ಲ ಎಂದು ಆರೋಪಿಸಿದೆ.
ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ನಿಂದ ಸಂಗ್ರಹಿಸಿರುವ ಮಾಹಿತಿ ಪ್ರಕಾರ, ಏಪ್ರಿಲ್ 2 ಮತ್ತು ಏಪ್ರಿಲ್ 18ರ ನಡುವೆ 26 ಚಿತಾಗಾರಾಗಳಲ್ಲಿ 3,096 ಶವಸಂಸ್ಕಾರ ನಡೆಸಲಾಗಿದೆ ಎಂದು ತಿಳಿಸಿದೆ. ಆದರೆ ದೆಹಲಿ ಸರ್ಕಾರ ಬಿಡುಗಡೆಗೊಳಿಸಿರುವ ಒಟ್ಟು ಅಂಕಿಅಂಶದ ಪ್ರಕಾರ 1,938 ಸಾವು ಸಂಭವಿಸಿದೆ ಎಂದು ಹೇಳಿತ್ತು. ಅಂದರೆ 1,158 ಮಂದಿ ಸಾವಿನ ಲೆಕ್ಕ ಮುಚ್ಚಿಡಲಾಗಿದೆ ಎಂದು ವರದಿ ದೂರಿದೆ.
ಆಸ್ಪತ್ರೆಗಳಿಂದ ತರಲಾದ ಶವಗಳನ್ನು ಮಾತ್ರ ಎಂಸಿಡಿ ಕೋವಿಡ್ ಸಾವು ಎಂದು ಪರಿಗಣಿಸುತ್ತದೆ. ಆದರೆ ಅಧಿಕೃತ ಸಾವಿನ ಪ್ರಮಾಣದ ಅಂಕಿಅಂಶ ಹೊಂದಾಣಿಕೆಯಾಗದ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದು ವರದಿ ಹೇಳಿದೆ.
ದೆಹಲಿ ಹೊರವಲಯದ ಘಾಜಿಪುರ್ ಶವಾಗಾರದಲ್ಲಿ ಕೋವಿಡ್ ಮೃತ ಕುಟುಂಬಸ್ಥರ ಸಂತ್ರಸ್ತರು ದಾಖಲೆಯನ್ನು ಭರ್ತಿ ಮಾಡಲು ಸಾಲುಗಟ್ಟಿ ನಿಂತಿರುವುದು ಕಂಡು ಬಂದಿದ್ದು, ಕೋವಿಡ್ ಸೋಂಕಿನಿಂದ ಮನೆಯಲ್ಲಿ ಸಾವನ್ನಪ್ಪಿರುವವರ ಅಂಕಿಅಂಶವನ್ನು ಕೋವಿಡ್ ಶವಸಂಸ್ಕಾರದಲ್ಲಿ ದಾಖಲಿಸಿಕೊಂಡಿಲ್ಲ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ