Patla Foundation ಉದಾತ್ತ ಗುಣ: ಒಡಿಯೂರು ಶ್ರೀ

ಯಕ್ಷಧ್ರುವ ಪಟ್ಲ ಸಂಭ್ರಮ; ಪ್ರಶಸ್ತಿ, ನೆರವು, ಸಮ್ಮಾನ

Team Udayavani, May 26, 2024, 11:06 PM IST

Patla Foundation ಉದಾತ್ತ ಗುಣ: ಒಡಿಯೂರು ಶ್ರೀ

ಮಂಗಳೂರು: ಯಕ್ಷಗಾನ ಎಂದರೆ ಒಂದು ಸಂಸ್ಕೃತಿ, ಅದರಲ್ಲಿ ಬದುಕಿಗೊಂದು ದೊಡ್ಡ ಪಾಠವಿದೆ, ಯಕ್ಷಗಾನ ಬದುಕಿಗೆ ಬೆಳಕು ನೀಡುತ್ತದೆ, ಅದರಂತೆಯೇ ಪಟ್ಲ ಫೌಂಡೇಶನ್‌ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಷ್ಟವನ್ನು ಕಂಡು ಅವರಿಗೆ ಸಹಾಯ ಹಸ್ತ ಚಾಚುತ್ತಿರುವುದು ಅಭಿನಂದನೀಯ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ ಮಂಗಳೂರು ವತಿಯಿಂದ ಅಡ್ಯಾರಿನ ಅಡ್ಯಾರ್‌ ಗಾರ್ಡನ್‌ನಲ್ಲಿ ರವಿವಾರ “ಯಕ್ಷಧ್ರುವ ಪಟ್ಲ ಸಂಭ್ರಮ 2024’ದ ಭಾಗವಾಗಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಯಕ್ಷಗಾನ, ದೈವಾರಾಧನೆ, ಕಂಬಳ ಸೇರಿದಂತೆ ವಿವಿಧ ರಂಗದಲ್ಲಿ ಅಶಕ್ತರಿಗೆ ನೆರವು ನೀಡುವ, ಪ್ರತಿಭಾನ್ವಿತರನ್ನು ಗೌರವಿಸುವ, ಅದರೊಂದಿಗೆ ಸೇರಿದವರನ್ನು ರಂಜಿಸುವಂತಹ ಈ ಸಮೃದ್ಧ ಸಮಾರಂಭ ನಡೆಸಿರುವುದು ಪಟ್ಲ ಅವರ ಅರ್ಪಣಾ ಮನೋಭಾವಕ್ಕೆ, ಹಾಗೂ ದಾನಿಗಳ ವಿಶಾಲ ಮನೋಭಾವಕ್ಕೆ ನಿದರ್ಶನ ಎಂದರು.

ಕೊಂಡದಕುಳಿ ಅವರಿಗೆ ಪಟ್ಲ ಪ್ರಶಸ್ತಿ
ಹಿರಿಯ ಯಕ್ಷಗಾನ ಕಲಾವಿದ ರಾಮಚಂದ್ರ ಹೆಗಡೆ ಕೊಂಡದಕುಳಿ ಅವರಿಗೆ 2024ರ ಸಾಲಿನ ಯಕ್ಷಧ್ರುವ ಪಟ್ಲಪ್ರಶಸ್ತಿ ನೀಡಿ ಗೌರವಿಸಲಾಯಿತು.

2024ರ ಸಾಲಿನ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿಯನ್ನು ಸಿಎ ದಿವಾಕರ್‌ ರಾವ್‌ ಅವರಿಗೆ ನೀಡಲಾಯಿತು. ಈ ವೇಳೆ ಮಾತನಾಡಿದ ಕೊಂಡದಕುಳಿ ಅವರು, ಹಿಂದಿನ ತಲೆಮಾರಿನ ಯಕ್ಷಗಾನದ ಹಿರಿಯರು ಫಲಾಪೇಕ್ಷೆಯಿಲ್ಲದೆ ಕಷ್ಟದ ಕಾಲದಲ್ಲೂ ಕಲೆಯನ್ನು ಉಳಿಸಿ ಬೆಳೆಸಿದ್ದಾರೆ, ಅದರ ಫಲವನ್ನು ನಾವೀಗ ಉಣ್ಣುತ್ತಿದ್ದೇವೆ. ಯಾವುದೇ ಭೇದವೆಣಿಸದೆ ಎಲ್ಲರನ್ನೂ ಒಳಗೊಂಡಂತೆ ನಡೆಸುತ್ತಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಕಾರ್ಯ ಅನುಕರಣೀಯ ಎಂದರು.

ಟ್ರಸ್ಟ್‌ ಗೌರವಾಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಉದ್ಯಮಿಗಳಾದ ವಕ್ವಾಡಿ ಪ್ರವೀಣ್‌ ಶೆಟ್ಟಿ, ಹರೀಶ್‌ ಶೇರಿಗಾರ್‌, ಕೆ.ಕೆ. ಶೆಟ್ಟಿ, ರಘುರಾಮ್‌ ಶೆಟ್ಟಿ, ಇನ್ನಂಜೆ ಶಶಿಧರ ಶೆಟ್ಟಿ, ಕೃಷ್ಣಮೂರ್ತಿ ಮಂಜ, ತಲ್ಲೂರು ಶಿವರಾಮ ಶೆಟ್ಟಿ, ರಘು ಎಲ್‌. ಶೆಟ್ಟಿ, ಸುಧಾಕರ್‌ ಸೆಟ್ಟಿ ಸುಗ್ಗಿ, ಗಿರೀಶ್‌ ಶೆಟ್ಟಿ ಕಟೀಲು, ಅಜಿತ್‌ ಶೆಟ್ಟಿ, ಅಮೃತೇಶ್ವರಿ ಹಲವುಮಕ್ಕಳ ತಾಯಿ ದೇವಸ್ಥಾನದ ಆಡಳಿತ ಮೊಕ್ತೇಸರ ಆನಂದ ಸಿ. ಕುಂದರ್‌, ಅಶೋಕ್‌ ಶೆಟ್ಟಿ, ಉಳೂ¤ರು ಮೋಹನದಾಸ್‌ ಶೆಟ್ಟಿ, ಎನ್‌.ಟಿ. ಪೂಜಾರಿ, ಪುತ್ತಿಗೆ ಯೋಗೇಂದ್ರ ಭಟ್‌ ಉಳಿ, ಗೋಪಾಲ್‌ ಶೆಟ್ಟಿ ಟ್ರಸ್ಟ್‌ನಪದಾಧಿಕಾರಿಗಳಾದ ಸುದೇಶ್‌ ಕುಮಾರ್‌ ರೈ, ಡಾ| ಮನುರಾವ್‌, ಬಾಳ ಜಗನ್ನಾಥ ಶೆಟ್ಟಿ, ದುರ್ಗಾಪ್ರಸಾದ್‌, ರಾಜೀವ ಪೂಜಾರಿ, ಉದಯ ಕುಮಾರ್‌ ಶೆಟ್ಟಿ, ರವಿಚಂದ್ರ ಶೆಟ್ಟಿ ಅಶೋಕನಗರ ಉಪಸ್ಥಿತರಿದ್ದರು.

ಟ್ರಸ್ಟ್‌ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್‌ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದರು. ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು, ಪ್ರದೀಪ್‌ ಆಳ್ವ ಕದ್ರಿ ವಂದಿಸಿದರು.

ನಿಮ್ಮ ನಡುವೆ ಬಂದಿದ್ದೇ ನನಗೆ ಹೆಮ್ಮೆ: ಸುದೀಪ್‌
ಅತಿಥಿಯಾಗಿದ್ದ ಕನ್ನಡ ಚಿತ್ರನಟ ಕಿಚ್ಚ ಸುದೀಪ್‌ ಮಾತನಾಡಿ, ತುಳುನಾಡಿನ ಜನ ಸ್ವಾಭಿಮಾನಿಗಳು, ಸುಲಭವಾಗಿ ಯಾರನ್ನೂ ಇಷ್ಟ ಪಡುವುದಿಲ್ಲ. ಹಾಗಿರುವಾಗ ನಿಮ್ಮ ಮನಸ್ಸಿನಲ್ಲಿ ನನಗೊಂದು ಚಿಕ್ಕ ಜಾಗ ಕೊಟ್ಟಿದ್ದಿರಿ. ಇಷ್ಟು ದೊಡ್ಡ ಸಾಧಕರು, ಕಲಾವಿದರಿದ್ದೀರಿ, ನಿಮ್ಮ ಮಧ್ಯೆ ನನ್ನನ್ನು ಕರೆಸಿಕೊಂಡಿರುವುದೇ ನನಗೆ ಖುಷಿ, ಹೆಮ್ಮೆ ಎಂದರು.

ನನ್ನ ತಂದೆಗೆ ನನ್ನ ತಾಯಿ ಸಿಕ್ಕಿದ್ದು ಈ ಊರಲ್ಲೇ. ಹಾಗಾಗಿ ಅಮ್ಮನಿಗೆ ಒಳ್ಳೆಯ ತುಳು ಬರುತ್ತದೆ. ಬದುಕಿನಲ್ಲಿ ಕೇವಲ ದುಡಿದು ತಿನ್ನೋದಷ್ಟೇ ಅಲ್ಲ, ಇತರರಿಗೆ ನೆರವಾಗುವುದಕ್ಕೆ ದೊಡ್ಡ ಮನಸ್ಸು ಬೇಕು, 8 ವರ್ಷದಲ್ಲಿ 11.5 ಕೋಟಿ ರೂ. ನೆರವು ಅಂದರೆ ದೊಡ್ಡದು ಎಂದ ಸುದೀಪ್‌, ಪಟ್ಲ ಫೌಂಡೇಶನ್‌ ಆಲದ ಮರದಂತೆ ಬೆಳೆದು ನಿಲ್ಲಲಿ ಎಂದು ಹಾರೈಸಿದರು.

ಚಲನಚಿತ್ರದ ಬಿಗ್‌ಬಾಸ್‌, ಯಕ್ಷರಂಗದ ಬಿಗ್‌ಬಾಸ್‌
ಸಮಾರಂಭದಲ್ಲಿ ಪಾಲ್ಗೊಳ್ಳಲು ಕಿಚ್ಚ ಸುದೀಪ್‌ ಬರುತ್ತಿರುವ ಬಗ್ಗೆ ಮಾತನಾಡಿದ ಒಡಿಯೂರು ಶ್ರೀಗಳು, ನಮ್ಮೊಡನೆ ಚಲನಚಿತ್ರ ರಂಗದ ಬಿಗ್‌ಬಾಸ್‌ ಸೇರಿಕೊಳ್ಳುತ್ತಾರೆ, ಆದರೆ ಯಕ್ಷರಂಗದ ಬಿಗ್‌ಬಾಸ್‌ ಪಟ್ಲ ಸತೀಶ್‌ ಶೆಟ್ಟರು, ಇಲ್ಲೆಲ್ಲ ಓಡಾಡುತ್ತಾ ಅನುಕರಣೀಯ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಲ ಸಂಭ್ರಮದ ಅಂಗಣದಿಂದ
-ಯಕ್ಷಗಾನ, ರಂಗಭೂಮಿ, ದೈವಾರಾಧನೆ, ಕಂಬಳದ 3,500 ಕಲಾವಿದರಿಗೆ ಅಪಘಾತ ವಿಮಾ ಯೋಜನೆ
-18 ಮಂದಿಗೆ ತಲಾ 20 ಸಾವಿರ ರೂ. ಕಲಾ ಗೌರವವನ್ನು ನೀಡಲಾಯಿತು.
-ಪಟ್ಲ ಯಕ್ಷಾಶ್ರಯ ಯೋಜನೆಯಡಿ ನಿವೇಶನರಹಿತ ಫಲಾನುಭವಿಗಳಿಗೆ ಕಿಚ್ಚ ಸುದೀಪ್‌ ತಲಾ 5 ಲಕ್ಷ ರೂ. ಚೆಕ್‌ ವಿತರಿಸಿದರು.
-ಅಶಕ್ತರಿಗೆ, ಗೃಹನಿರ್ಮಾಣಕ್ಕೆ ಸಹಾಯಧನ ನೀಡಲಾಯಿತು.
-ವೈದ್ಯಕೀಯ ನೆರವು, ವೈದ್ಯಕೀಯ ತಪಾಸಣೆ, ಕನ್ನಡಕ ವಿತರಣೆ ನಡೆಯಿತು.

ಟಾಪ್ ನ್ಯೂಸ್

Mudhol ಬೈಕ್‌ಗಳ ಸರಣಿ ಕಳ್ಳತನ; ಆರೋಪಿ ಪೊಲೀಸ್‌ ವಶಕ್ಕೆ

Mudhol ಬೈಕ್‌ಗಳ ಸರಣಿ ಕಳ್ಳತನ; ಆರೋಪಿ ಪೊಲೀಸ್‌ ವಶಕ್ಕೆ

Rahul Gandhi resfused to take Leader of Opposition post In Lok Sabha

Lok Sabha; ವಿಪಕ್ಷ ನಾಯಕನ ಸ್ಥಾನಕ್ಕೆ ಹೆಸರು ಬಹುತೇಕ ಅಂತಿಮ; ಹುದ್ದೆ ಬೇಡ ಎಂದ ರಾಹುಲ್

Goa Calangute Beach: ಮೊಬೈಲ್,ಬ್ಯಾಗ್‍ ಕಳ್ಳತನ; ಮೂವರ ಬಂಧನ

Goa Calangute Beach: ಮೊಬೈಲ್,ಬ್ಯಾಗ್‍ ಕಳ್ಳತನ; ಮೂವರ ಬಂಧನ

ರಸ್ತೆ ಬದಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಮೃತ್ಯು

ರಸ್ತೆ ಬದಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಮೃತ್ಯು

Panaji: ಪಕ್ಷ ಅವಕಾಶ ನೀಡಿದರೆ ಸ್ಥಳೀಯ ರಾಜಕಾರಣಕ್ಕೆ ಬರಲು ಸಿದ್ಧ: ಶ್ರೀಪಾದ್ ನಾಯ್ಕ್

Panaji: ಪಕ್ಷ ಅವಕಾಶ ನೀಡಿದರೆ ಸ್ಥಳೀಯ ರಾಜಕಾರಣಕ್ಕೆ ಬರಲು ಸಿದ್ಧ: ಶ್ರೀಪಾದ್ ನಾಯ್ಕ್

PM Modi- Pope ಭೇಟಿ ಫೋಟೋ: ಕ್ಷಮೆಯಾಚಿಸಿದ ಕೇರಳ ಕಾಂಗ್ರೆಸ್-‌ ಏನಿದು ವಿವಾದ?

PM Modi- Pope ಭೇಟಿ ಫೋಟೋ: ಕ್ಷಮೆಯಾಚಿಸಿದ ಕೇರಳ ಕಾಂಗ್ರೆಸ್-‌ ಏನಿದು ವಿವಾದ?

12-uppinangady

Uppinangady: ಮಹಿಳೆ ಸಾವು; ಕೊಲೆ ಶಂಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಂಪ್‌ವೆಲ್‌-ಪಡೀಲ್‌ ಚತುಷ್ಪಥ ಕಾಮಗಾರಿ: ಸಂಚಾರಕ್ಕೆ ಸಂಕಷ್ಟ

ಪಂಪ್‌ವೆಲ್‌-ಪಡೀಲ್‌ ಚತುಷ್ಪಥ ಕಾಮಗಾರಿ: ಸಂಚಾರಕ್ಕೆ ಸಂಕಷ್ಟ

Mangaluru: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿಯಿಂದ ವಿಭಿನ್ನ ಪ್ರತಿಭಟನೆ

Mangaluru: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿಯಿಂದ ವಿಭಿನ್ನ ಪ್ರತಿಭಟನೆ

ಕರಾವಳಿಯಲ್ಲಿ ಇಲ್ಲ ವಾಡಿಕೆ ಮಳೆ!

Rain ಕರಾವಳಿಯಲ್ಲಿ ಇಲ್ಲ ವಾಡಿಕೆ ಮಳೆ!

Mangaluru ಬ್ರೇಕ್‌ ಸಮಸ್ಯೆ; ಬಸ್‌ ಚಾಲಕನ ಸಮಯಪ್ರಜ್ಞೆ; ತಪ್ಪಿದ ದುರಂತ

Mangaluru ಬ್ರೇಕ್‌ ಸಮಸ್ಯೆ; ಬಸ್‌ ಚಾಲಕನ ಸಮಯಪ್ರಜ್ಞೆ; ತಪ್ಪಿದ ದುರಂತ

Mangaluru ದ್ವಿಚಕ್ರ ವಾಹನ ಕಳವು; ದೂರು ದಾಖಲು

Mangaluru ದ್ವಿಚಕ್ರ ವಾಹನ ಕಳವು; ದೂರು ದಾಖಲು

MUST WATCH

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

udayavani youtube

ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಆಡಳಿತ ಮಾಡಲು ಅಸಮರ್ಥರು

udayavani youtube

ಬಿಜೆಪಿ ಹಿರಿಯ ಮುಖಂಡ ಎಂ.ಬಿ‌.ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ

ಹೊಸ ಸೇರ್ಪಡೆ

Mudhol ಬೈಕ್‌ಗಳ ಸರಣಿ ಕಳ್ಳತನ; ಆರೋಪಿ ಪೊಲೀಸ್‌ ವಶಕ್ಕೆ

Mudhol ಬೈಕ್‌ಗಳ ಸರಣಿ ಕಳ್ಳತನ; ಆರೋಪಿ ಪೊಲೀಸ್‌ ವಶಕ್ಕೆ

Rahul Gandhi resfused to take Leader of Opposition post In Lok Sabha

Lok Sabha; ವಿಪಕ್ಷ ನಾಯಕನ ಸ್ಥಾನಕ್ಕೆ ಹೆಸರು ಬಹುತೇಕ ಅಂತಿಮ; ಹುದ್ದೆ ಬೇಡ ಎಂದ ರಾಹುಲ್

Goa Calangute Beach: ಮೊಬೈಲ್,ಬ್ಯಾಗ್‍ ಕಳ್ಳತನ; ಮೂವರ ಬಂಧನ

Goa Calangute Beach: ಮೊಬೈಲ್,ಬ್ಯಾಗ್‍ ಕಳ್ಳತನ; ಮೂವರ ಬಂಧನ

ಬಾಗಲಕೋಟೆ: ಇಳಕಲ್ಲ ಸೀರೆಯುಟ್ಟು ಓಡಿದ 1500 ನಾರಿಯರು !

ಬಾಗಲಕೋಟೆ: ಇಳಕಲ್ಲ ಸೀರೆಯುಟ್ಟು ಓಡಿದ 1500 ನಾರಿಯರು !

ರಸ್ತೆ ಬದಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಮೃತ್ಯು

ರಸ್ತೆ ಬದಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.