ಅಂಚೆ ಕಚೇರಿ ಉಳಿತಾಯ ಖಾತೆಯಲ್ಲಿ ಇನ್ನು ಕನಿಷ್ಠ 500ರೂ. ಇರಲೇಬೇಕು! ಇಂದಿನಿಂದಲೇ ನಿಯಮ ಜಾರಿ
Team Udayavani, Dec 11, 2020, 7:41 PM IST
ನವದೆಹಲಿ: ಬ್ಯಾಂಕ್ಗಳಲ್ಲಿನ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇರಿಸುವ ನಿಯಮದಂತೆ ಅಂಚೆ ಕಚೇರಿಯ ಉಳಿತಾಯ ಖಾತೆಗಳಿಗೂ ಡಿ.11ರಿಂದ ಹೊಸ ನಿಯಮ ಜಾರಿಯಾಗಿದೆ. ಹೊಸ ನಿಯಮದಂತೆ ಅಂಚೆ ಕಚೇರಿಗಳಲ್ಲಿ ಇರುವ ಉಳಿತಾಯ ಖಾತೆಗಳಲ್ಲಿ ಕನಿಷ್ಠ 500 ರೂ. ಇರಲೇಬೇಕಾಗಿದೆ. ಇಲ್ಲದೇ ಇದ್ದರೆ 100 ರೂ. ಮತ್ತು ಜಿಎಸ್ಟಿ ಸೇರಿಸಿ ದಂಡ ಪಾವತಿ ಮಾಡಬೇಕಾಗುತ್ತದೆ. ವಿತ್ತೀಯ ವರ್ಷದ ಕೊನೆಯಲ್ಲಿ ಖಾತೆಯಲ್ಲಿ ಕಡ್ಡಾಯವಾಗಿ ಕನಿಷ್ಠ 500 ರೂ. ಇರಬೇಕು. ಇಲ್ಲದೇ ಇದ್ದರೆ, ಖಾತೆ ನಿರ್ವಹಣೆ ಶುಲ್ಕವೆಂದು 100 ರೂ. ಕಡಿತ ಮಾಡಿಕೊಳ್ಳಲಾಗುತ್ತದೆ. ಇಷ್ಟು ಮಾತ್ರವಲ್ಲದೆ, ಶೂನ್ಯ ಮೊತ್ತವಿದ್ದರೆ ಅದು ತನ್ನಿಂತಾನೆ ರದ್ದು ಆಗುತ್ತದೆ ಎಂದು ಅಂಚೆ ಇಲಾಖೆಯ ಹೊಸ ನಿಯಮದಲ್ಲಿ ಉಲ್ಲೇಖೀಸಲಾಗಿದೆ.
ಖಾತೆ ತೆರೆಯಲು 500 ರೂ. ಬೇಕು. ನಂತರ ದಿನಗಳಲ್ಲಿ ಹತ್ತು ರೂ.ಗಳಿಗಿಂತ ಕಡಿಮೆ ಮೊತ್ತವನ್ನು ಜಮೆ ಮಾಡುವಂತಿಲ್ಲ ಮತ್ತು ಕನಿಷ್ಠ ವಿಥ್ಡ್ರಾ ಮಾಡುವ ಮೊತ್ತ 50 ರೂ. ಆದರೆ ಕನಿಷ್ಠ ಬ್ಯಾಲೆನ್ಸ್ 500 ರೂ. ಇರಲೇಬೇಕು ಎಂದು ಅಂಚೆ ಇಲಾಖೆ ತಿಳಿಸಿದೆ. ಮೂರು ವರ್ಷಗಳ ವರೆಗೆ ಯಾವುದೇ ರೀತಿಯಲ್ಲಿ ವಹಿವಾಟು ನಡೆದಿಲ್ಲವೆಂದಾದರೆ, ಅದನ್ನು ಸ್ತಬ್ದಗೊಂಡ ಖಾತೆ ಎಂದು ಪರಿಗಣಿಸಲಾಗುತ್ತದೆ. ಅದನ್ನು ಮತ್ತೆ ಚಾಲನೆಗೊಳಿಸಬೇಕೆಂದಿದ್ದರೆ, ಹೊಸತಾಗಿ ಕೆವೈಸಿ ದಾಖಲೆಗಳು, ಹಾಲಿ ಇರುವ ಪಾಸ್ಪುಸ್ತಕವನ್ನು ಅಂಚೆ ಕಚೇರಿಗೆ ನೀಡಬೇಕು.
ಇದನ್ನೂ ಓದಿ:ಬಾಲಿವುಡ್ ನೃತ್ಯ ನಿರ್ದೇಶಕ ರೆಮೋ ಡಿಸೋಜಾಗೆ ಹೃದಯಾಘಾತ ಆಸ್ಪತ್ರೆಗೆ ದಾಖಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ