ಘಟಶ್ರಾದ್ಧ ದೇಶದ ಸಾರ್ವಕಾಲಿಕ ಅತ್ಯುತ್ತಮ ಚಿತ್ರ

ಅಂತಾರಾಷ್ಟ್ರೀಯ ಚಲನಚಿತ್ರ ವಿಮರ್ಶಕರ ಒಕ್ಕೂಟ ಭಾರತ ಘಟಕದ ತೀರ್ಮಾನ

Team Udayavani, Oct 21, 2022, 9:06 PM IST

ಘಟಶ್ರಾದ್ಧ ದೇಶದ ಸಾರ್ವಕಾಲಿಕ ಅತ್ಯುತ್ತಮ ಚಿತ್ರ

ನವದೆಹಲಿ: ದೇಶದ ಸಾರ್ವಕಾಲಿಕ ಅತ್ಯುತ್ತಮ ಚಿತ್ರಗಳ ಪಟ್ಟಿ ಬಿಡುಗಡೆಯಾಗಿದ್ದು, ಅದರಲ್ಲಿ ಕನ್ನಡದ “ಘಟಶ್ರಾದ್ಧ’ ಸಿನಿಮಾ ಟಾಪ್‌ 5ನೇ ಸ್ಥಾನ ಪಡೆದುಕೊಂಡಿದೆ. ಅಂತಾರಾಷ್ಟ್ರೀಯ ಚಲನಚಿತ್ರ ವಿಮರ್ಶಕರ ಒಕ್ಕೂಟದ(FIPRESCI) ಭಾರತೀಯ ವಿಭಾಗವು ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ.

“ಘಟಶ್ರಾದ್ಧ’ ಸಿನಿಮಾ ಕನ್ನಡದ ಪ್ರಸಿದ್ಧ ಸಾಹಿತಿ ಯು.ಆರ್‌.ಅನಂತಮೂರ್ತಿ ಅವರ ಕಾದಂಬರಿಯನ್ನಾಧರಿಸಿರುವುದಾಗಿದೆ. ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರು 1977ರಲ್ಲಿ ಈ ಸಿನಿಮಾವನ್ನು ತೆರೆ ಮೇಲೆ ತಂದಿದ್ದಾರೆ. ಬ್ರಾಹ್ಮಣ ಸಮುದಾಯದ ವಿಧವೆಯರ ಬದುಕನ್ನು ಎಳೆ ಎಳೆಯಾಗಿ ಬಿಚ್ಚಿಡುವ ಈ ಸಿನಿಮಾದಲ್ಲಿ ಮೀನಾ ಕುಟ್ಟಪ್ಪ, ಅಜಿತ್‌ ಕುಮಾರ್‌ ಮತ್ತು ನಾರಾಯಣ ಭಟ್‌ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು. ಈ ಸಿನಿಮಾ ಹಲವಾರು ಪ್ರಶಸ್ತಿಗಳನ್ನೂ ಬಾಚಿಕೊಂಡಿತ್ತು.

ಬಂಗಾಳಿ ಸಿನಿಮಾಗಳಿಗೆ 3 ಸ್ಥಾನ:
ಟಾಪ್‌ 10 ಸಿನಿಮಾಗಳ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಬಂಗಾಳಿ ಭಾಷೆಯ ಸಿನಿಮಾಗಳು ತಮ್ಮದಾಗಿಸಿಕೊಂಡಿವೆ. ನಿರ್ದೇಶಕ ಸತ್ಯಜಿತ್‌ ರೈ ನಿರ್ದೇಶನದ “ಪಥೆರ್‌ ಪಾಂಚಾಲಿ’ ಸಿನಿಮಾ ಅಗ್ರ ಸ್ಥಾನ ಪಡೆದುಕೊಂಡಿದೆ. ಈ ಸಿನಿಮಾ ಬಂಗಾಳದ ಬಿಬೂತಿಭೂಷಣ್‌ ಬಂಡೋಪಾಧ್ಯಾಯ ಅವರು 1929ರಲ್ಲಿ ಬರೆದಿದ್ದ ಕಾದಂಬರಿಯನ್ನು ಆಧರಿಸಿದ್ದಾಗಿದೆ. ಪಟ್ಟಿಯ ಎರಡನೇ ಸ್ಥಾನದಲ್ಲಿ ಬಂಗಾಳಿಯ “ಮೆಘೆ ಧಾಕಾ ತರ’ ಸಿನಿಮಾವಿದೆ. ನಿರ್ದೇಶಕ ರಿತ್ವಿಕ್‌ ಘಟಕ್‌ ನಿರ್ದೇಶನವಿರುವ ಸಿನಿಮಾ 1960ರಲ್ಲಿ ತೆರೆ ಕಂಡಿತ್ತು. ವಿಶೇಷವಾಗಿ ಪಟ್ಟಿಯ 7ನೇ ಸ್ಥಾನದಲ್ಲಿ ಸತ್ಯಜಿತ್‌ ನಿರ್ದೇಶನದ “ಚಾರುಲತಾ’ ಸಿನಿಮಾವಿದೆ. ಈ ಸಿನಿಮಾ 1964ರಲ್ಲಿ ಬಿಡುಗಡೆಯಾಗಿತ್ತು.

ಹಿಂದಿಯ 5 ಸಿನಿಮಾ ಪಟ್ಟಿಯಲ್ಲಿ:
ಪಟ್ಟಿಯಲ್ಲಿ ಹಿಂದಿಯ ಸಿನಿಮಾಗಳು ಒಟ್ಟು 5 ಸ್ಥಾನವನ್ನು ಬಾಚಿಕೊಂಡಿವೆ. 3ನೇ ಸ್ಥಾನದಲ್ಲಿ ಮೃನಾಲ್‌ ಸೇನ್‌ ನಿರ್ದೇಶನದ “ಭುವನ್‌ ಶೋಮೆ'(1969), 6ನೇ ಸ್ಥಾನದಲ್ಲಿ “ಗರ್ಮ್ ಹವಾ'(ನಿರ್ದೇಶಕ-ಎಂ.ಎಸ್‌.ಸತ್ಯು, 1973), 8ನೇ ಸ್ಥಾನದಲ್ಲಿ “ಅಂಕುರ್‌’ (ನಿರ್ದೇಶಕ- ಶ್ಯಾಮ್‌ ಬನೇಗಲ್‌, 1974), 9ನೇ ಸ್ಥಾನದಲ್ಲಿ ಪ್ಯಾಸಾ (ನಿರ್ದೇಶಕ- ಗುರು ದತ್‌, 1957) ಮತ್ತು 10ನೇ ಸ್ಥಾನದಲ್ಲಿ “ಶೋಲೆ’ (ನಿರ್ದೇಶಕ- ರಮೇಶ್‌ ಸಿಪ್ಪಿ, 1975) ಸಿನಿಮಾವಿದೆ. ಉಳಿದಂತೆ ಮಲಯಾಳಂನ “ಎಲಿಪ್ಪಥಯಂ'(ನಿರ್ದೇಶಕ-ಅದೂರು ಗೋಪಾಲಕೃಷ್ಣನ್‌, 1981) ಸಿನಿಮಾ ಪಟ್ಟಿಯ 4ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

 

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.