ತಳಂಗರೆ ಮಸೀದಿಗೆ ಹರಕೆ ರೂಪದಲ್ಲಿ ಕುದುರೆ ನೀಡಿದ ಭಕ್ತ
Team Udayavani, Jan 11, 2021, 6:20 AM IST
ಕಾಸರಗೋಡು: ಇತಿಹಾಸ ಪ್ರಸಿದ್ಧವಾದ ಕಾಸರಗೋಡಿನ ತಳಂಗರೆ ಮಾಲಿಕ್ ದೀನಾರ್ ದೊಡ್ಡ ಜಮಾಅತ್ ಮಸೀದಿಗೆ ಕರ್ನಾಟಕದ ಭಕ್ತ ರೊಬ್ಬರು ಕುದುರೆಯನ್ನು ಹರಕೆ ರೂಪದಲ್ಲಿ ನೀಡಿದ್ದಾರೆ. ಈ ಕುದುರೆಯನ್ನು ವೀಕ್ಷಿ ಸಲು ಅಧಿಕ ಸಂಖ್ಯೆಯಲ್ಲಿ ಮಸೀದಿಗೆ ಬರುತ್ತಿದ್ದಾರೆ.
ತುಮಕೂರು ನಿವಾಸಿ ಮಹಮ್ಮದ್ ಶಂಸೀರ್ ಮಸೀದಿಗೆ ಹರಕೆ ರೂಪದಲ್ಲಿ ಕುದುರೆಯನ್ನು ನೀಡಿದ್ದಾರೆ. ತನ್ನ ಬೇಡಿಕೆಯೊಂದು ಈಡೇರಿದಲ್ಲಿ ಹರಕೆ ನೀಡುವುದಾಗಿ ಹೇಳಿಕೊಂಡಿದ್ದರು. ಅದ ರಂತೆ ತನ್ನ ಬೇಡಿಕೆ ಈಡೇರಿದ ಹಿನ್ನೆಲೆಯಲ್ಲಿ ಕುದುರೆಯನ್ನು ನೀಡಿದ್ದಾರೆ. ಇದೀಗ ಈ ಕುದುರೆಯನ್ನು ಮಸೀದಿ ಪರಿಸರದಲ್ಲಿ ಕಟ್ಟಿ ಹಾಕಲಾಗಿದೆ. ಈ ಕುದುರೆಯನ್ನು ಹರಾಜು ಹಾಕಲು ಮಸೀದಿ ಆಡಳಿತ ಸಮಿತಿ ತೀರ್ಮಾ ನಿಸಿದೆ. ಹರಾಜು ಹಾಕುವ ಮುನ್ನ ಅರಣ್ಯ ಇಲಾಖೆಯ ಅನುಮತಿ ಕೇಳುವುದಾಗಿ ಮಸೀದಿ ಆಡಳಿತ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. ತಮ್ಮ ಬೇಡಿಕೆ ಈಡೇರಿದರೆ ಈ ಮಸೀದಿಗೆ ಚಿನ್ನ-ಬೆಳ್ಳಿ ಆಭರಣಗಳನ್ನು ಹರಕೆ ರೂಪದಲ್ಲಿ ನೀಡುವುದಿದೆಯಾದರೂ ಕುದುರೆ ಪ್ರಥಮ ಬಾರಿಗೆ ಹರಕೆ ರೂಪದಲ್ಲಿ ಸಮರ್ಪಣೆಯಾಗಿದೆ.
ಕೆಲವು ವರ್ಷಗಳ ಹಿಂದೆ ಕರ್ನಾಟಕದ ಭಕ್ತರೊಬ್ಬರು ಈ ಮಸೀ ದಿಗೆ ಬೆಳ್ಳಿಯಿಂದ ನಿರ್ಮಿಸಿದ ಬಾಗಿಲನ್ನು ಹರಕೆ ರೂಪದಲ್ಲಿ ನೀಡಿದ್ದರು.