Road Mishap: ಸ್ಕೂಟರ್ ಢಿಕ್ಕಿ ಹೊಡೆದು ರಸ್ತೆಗೆ ಬಿದ್ದ ವ್ಯಕ್ತಿ ಮೇಲೆ ಬಸ್ ಹರಿದು ಸಾವು
Team Udayavani, Nov 7, 2023, 12:24 AM IST
ಮುಳ್ಳೇರಿಯ: ಬೆಳ್ಳೂರಿನಲ್ಲಿ ಸ್ಕೂಟರ್ಗಳು ಢಿಕ್ಕಿ ಹೊಡೆದು ರಸ್ತೆಗೆಸೆಯಲ್ಪಟ್ಟ ಸಿಪಿಎಂ ಲೋಕಲ್ ಸಮಿತಿ ಸದಸ್ಯನ ಮೇಲೆ ಬಸ್ ಹರಿದು ಸಾವಿಗೀಡಾದ ಘಟನೆ ನಡೆದಿದೆ.
ಸಿಪಿಎಂ ಪಾಂಡಿ ಲೋಕಲ್ ಸಮಿತಿ ಸದಸ್ಯ ಅಡೂರು ಬಳವಂತಡ್ಕದ ತಿಮ್ಮಪ್ಪ (63) ಸಾವಿಗೀಡಾದವರು. ಸೋಮವಾರ ಮಧ್ಯಾಹ್ನ ಬೆಳ್ಳೂರು ಪಂಚಾಯತ್ ಕಚೇರಿಯ ಸಮೀಪ ಅಪಘಾತ ಸಂಭವಿಸಿತು. ಬಳವಂತಡ್ಕದಿಂದ ಬೆಳ್ಳೂರಿನಲ್ಲಿರುವ ಸಹೋದರಿಯ ಮನೆಗೆ ಹೋಗುತ್ತಿದ್ದಾಗ ಎದುರು ಭಾಗದಿಂದ ಬಂದ ಸ್ಕೂಟರ್ ಢಿಕ್ಕಿ ಹೊಡೆದು ತಿಮ್ಮಪ್ಪ ರಸ್ತೆಗೆ ಬಿದ್ದರು.
ಇದೇ ವೇಳೆ ಅವರ ತಲೆ ಮೇಲೆ ಖಾಸಗಿ ಬಸ್ಸೊಂದು ಹರಿದು ಸಾವಿಗೀಡಾದರು. ಇನ್ನೊಂದು ಸ್ಕೂಟರ್ನಲ್ಲಿದ್ದ ಕಿನ್ನಿಂಗಾರ್ ನಿವಾಸಿ ಗಿರೀಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.