“ಅಪಹರಣ ಕಟ್ಟುಕತೆ’ : ದಿಲೀಪ್ ಪರ ಜಾರ್ಜ್ ಮತ್ತೆ ಬ್ಯಾಟಿಂಗ್
Team Udayavani, Aug 2, 2017, 8:05 AM IST
ಆಲಪ್ಪುಳ: ನಟಿ ಅಪಹರಣ ಪ್ರಕರಣದಲ್ಲಿ ಮೊದಲಿನಿಂದಲೂ ದಿಲೀಪ್ ಬೆಂಬಲಕ್ಕೆ ನಿಂತವರು ಪೂಂಜಾರ್ನ ಶಾಸಕ ಪಿ. ಸಿ. ಜಾರ್ಜ್ ಮಾತ್ರ. ಇದೀಗ ಅವರು ಮತ್ತೂಮ್ಮೆ ನಟಿಯ ಅಪಹರಣ ಘಟನೆಯ ಸಾಚಾತನವನ್ನು ಪ್ರಶ್ನಿಸುವ ಮೂಲಕ ದಿಲೀಪ್ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಪ್ರಕರಣದ ಕುರಿತು ಮಾತನಾಡಿದ ಜಾರ್ಜ್ ಅಪ ಹರಣಕ್ಕೊಳಗಾಗಿರುವ ನಟಿ ಮರು ದಿನವೇ ಶೂಟಿಂಗ್ಗೆ ಹೋಗಿದ್ದಾರೆ. ಬರ್ಬರ ಹಲ್ಲೆಯಾಗಿರುವ ಮಹಿಳೆ ಮರುದಿನವೇ ಎದ್ದುಕೊಂಡು ಕೆಲಸಕ್ಕೆ ಹೋಗುವುದು ಹೇಗೆ ಸಾಧ್ಯ? ಹೀಗಾಗಿ ಈ ಘಟನೆಯ ಸಾಚಾತನದ ಕುರಿತು ಅನುಮಾನಗಳಿವೆ ಎಂದಿದ್ದಾರೆ.
ನಟ ದಿಲೀಪ್ ಅವರನ್ನು ಪ್ರಕರಣದಲ್ಲಿ ಬಲಿಪಶು ಮಾಡಲಾಗಿದೆ ಎಂದು ಮತ್ತೂಮ್ಮೆ ಪ್ರತಿಪಾದಿಸಿದ ಅವರು ಪೊಲೀ ಸರ ಕಟ್ಟುಕತೆಗಳನ್ನು ನಂಬಲು ಸಾಧ್ಯವಿಲ್ಲ. ಈಗ ನಡೆಯುತ್ತಿರುವುದು ಪುರುಷರ ಮೇಲಿ ದೌರ್ಜನ್ಯ. ಇನ್ನೂ ಹಲವು ಪ್ರಮುಖ ನಟ ನಟಿಯರು ಅಕ್ರಮ ಭೂ ವ್ಯವಹಾರದಲ್ಲಿ ತೊಡಗಿದ್ದಾರೆ. ಅವರ ವಿರುದ್ಧವೂ ತನಿಖೆಯಾಗಬೇಕು ಎಂದಿದ್ದಾರೆ.
ಸಾಕ್ಷ್ಯಾಧಾರ ಹುಡುಕುವುದು ಪೊಲೀಸರ ಕೆಲಸ
ಇಡೀ ಪ್ರಕರಣವೇ ಒಂದು ಕಟ್ಟುಕತೆ ಯಂತಿದೆ. ದಿಲೀಪ್ ವಿರುದ್ಧ ಪ್ರತ್ಯಕ್ಷ ಸಾಕ್ಷಿಗಳು ಇಲ್ಲದಿದ್ದರೂ ಅವರನ್ನು ಬಂಧಿಸಿ ಜೈಲಿನಲ್ಲಿಟ್ಟಿದ್ದಾರೆ ಎಂದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀ ಸರು ತನ್ನನ್ನು ಪ್ರಶ್ನಿಸುವ ಸಾಧ್ಯತೆಯ ಬಗ್ಗೆ ಮಾತನಾಡಿದ ಜಾರ್ಜ್ ನಾನು ಪೊಲೀಸರಿಗೆ ಯಾವುದೇ ಸಾಕ್ಷ್ಯಾಧಾರ ನೀಡುವುದಿಲ್ಲ. ಸಾಕ್ಷ್ಯಾಧಾರ ಹುಡುಕು ವುದು ಪೊಲೀಸರ ಕೆಲಸ. ಆದರೆ ನನಗೆ ಗೊತ್ತಿರುವುದನ್ನು ಹೇಳುತ್ತೇನೆ ಎಂದರು.
ಭಾಗ್ಯಲಕ್ಷ್ಮೀ ತಿರುಗೇಟು
ಖ್ಯಾತ ಡಬ್ಬಿಂಗ್ ಕಲಾವಿದೆ ಜಾರ್ಜ್ ವಿರುದ್ಧ ಫೇಸ್ಬುಕ್ ಪೋಸ್ಟ್ನಲ್ಲಿ ಕೆಂಡ ಕಾರಿದ್ದಾರೆ. ಜಾರ್ಜ್ ಸಂತ್ರಸ್ತ ನಟಿಯನ್ನು ಅವಮಾನಿಸಿರುವುದು ಮಾತ್ರವಲ್ಲದೆ ತನಿಖೆಯನ್ನೂ ಅಣಕಿಸಿದ್ದಾರೆ. ಜನ ಪ್ರತಿನಿಧಿಯಾಗಿ ಜಾರ್ಜ್ ಇಷ್ಟು ಕೀಳುಮಟ್ಟದಲ್ಲಿ ಚಿಂತಿಸುತ್ತಿರುವುದು ದುರದೃಷ್ಟಕರ ಎಂದಿದ್ದಾರೆ.
ಅತ್ಯಾಚಾರಕ್ಕೊಳಗಾದ ಅಥವಾ ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳೆ ಜೀವಮಾನವಿಡೀ ಮನೆಯಲ್ಲಿ ಕುಳಿತು ಕಣ್ಣೀರು ಸುರಿಸಬೇಕೇ ಅಥವಾ ಆತ್ಮಹತ್ಯೆ ಮಾಡಿಕೊಳ್ಳಬೇಕೆ? ಒಬ್ಬ ಜನಪ್ರತಿನಿಧಿ ಯಾಗಿ ಜಾರ್ಜ್ ಯಾವ ಸಂದೇಶ ನೀಡಲು ಬಯಸಿದ್ದಾರೆ? ಇದೆಲ್ಲ ಅವರಿಗೆ ತಮಾಷೆಯಂತೆ ಕಾಣಿಸುತ್ತಿದೆಯೆ? ಅವರ ಮಗಳಿಗೆ ಈ ಗತಿಯಾಗಿದ್ದರೆ ಅವರು ಈ ರೀತಿ ಪ್ರತಿಕ್ರಿಯಿಸುತ್ತಿದ್ದರೇ ಎಂದು ಪ್ರಶ್ನಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ