ಮಾಹಿತಿ ಹಕ್ಕು ಕಾರ್ಯಕರ್ತನಿಗೆ ಹಲ್ಲೆ; ಪಂಚಾಯತ್ ಸದಸ್ಯನ ವಿರುದ್ಧ ಕೇಸು ದಾಖಲು
Team Udayavani, Jul 1, 2023, 10:30 PM IST
ಕುಂಬಳೆ: ಮಾಹಿತಿ ಹಕ್ಕು ಸಂಗ್ರಹದ ಅಂಗವಾಗಿ ಕುಂಬಳೆ ಪಂಚಾಯತ್ ಅಪಲೇಟ್ ಅಥಾರಿಟಿ ಪಂಚಾಯತ್ ಕಚೇರಿಗೆ ಕರೆಸಿದ ಕುಂಬಳೆ ಕಂಚಿಕಟ್ಟೆಯ ನಿವಾಸಿ ಮಾಹಿತಿ ಹಕ್ಕು ಕಾರ್ಯಕರ್ತ ಸುಬ್ರಹ್ಮಣ್ಯ ಅವರಿಗೆ ಹಲ್ಲೆ ಮಾಡಿದ ಬಗ್ಗೆ ಆರೋಪಿಸಲಾಗಿದೆ.
ಈ ಸಂಬಂಧ ಪಂಚಾಯತ್ನ ಆರನೇ ವಾರ್ಡ್ ಸದಸ್ಯ ಯೂಸಫ್ ಉಳುವಾರ್ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ.
ಜೂ.27 ರಂದು ಬೆಳಗ್ಗೆ ಕುಂಬಳೆ ಪಂಚಾಯತ್ ಅಡಿಶನಲ್ ಸೆಕ್ರೆಟರಿ ಮಾಹಿತಿ ಸಂಗ್ರಹಕ್ಕೆ ಸಿದ್ಧತೆ ನಡೆಸುತ್ತಿದ್ದಂತೆ ಪಂಚಾಯತ್ ಸದಸ್ಯ ಹಲ್ಲೆ ಮಾಡಿದ್ದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ಆರು ತಿಂಗಳ ಹಿಂದೆ ಇದೇ ವ್ಯಕ್ತಿ ಹಲ್ಲೆ ಮಾಡಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ.