ಸ್ಪರ್ಧೆಯನ್ನು ಎದುರಿಸಿ ಮುನ್ನಡೆಯಬೇಕಿದೆ: ಕೇಶವ ಕುಮಾರ್
ಬ್ರಾಹ್ಮಣ ಸಂಘ: ಕಾಟಿಪಳ್ಳ ವತಿಯಿಂದ ವಿದ್ಯಾರ್ಥಿಗಳಿಗೆ ಸಮ್ಮಾನ
Team Udayavani, Oct 1, 2020, 10:33 PM IST
ವಿದ್ಯಾರ್ಥಿ ಸಾಧಕರನ್ನು ಕಾರ್ಯಕ್ರಮದಲ್ಲಿ ಸಮ್ಮಾನಿಸಲಾಯಿತು.
ಕಾಟಿಪಳ್ಳ: ಬ್ರಾಹ್ಮಣರ ಸಂಘ ಕಾಟಿಪಳ್ಳ-ಕೃ ಷ್ಣಾಪುರ ಇದರ ವತಿಯಿಂದ ಎಸೆಸೆಲ್ಸಿ ಹಾಗೂ ಪಿಯುಸಿ ಸಾಧಕರಿಗೆ ಸಮ್ಮಾನ ಹಾಗೂ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ಮೂಲನಾಗ ಬ್ರಹ್ಮಸ್ಥಾನ ಕಾಟಿಪಳ್ಳದಲ್ಲಿ ಇತ್ತೀಚೆಗೆ ಜರಗಿತು.
ಉತ್ತಮ ಅಂಕ ಪಡೆದು ತೇರ್ಗಡೆಯಾದ 20 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ, ಪಿಯುಸಿಯಲ್ಲಿ ರಾಜ್ಯಕ್ಕೆ 10ನೇ ಸ್ಥಾನ ಪಡೆದ ಶಿಶಿರ್ ವಿ.ಎಸ್. ಅವರಿಗೆ ಪ್ರತಿಭಾ ಪುರಸ್ಕಾರ, ಸಮ್ಮಾನ ಸಹಿತ ಇತರ ಅರ್ಹ 9 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ವಿದ್ಯಾರ್ಥಿಗಳನ್ನು ಸಮ್ಮಾನಿಸಿ ಮಾತನಾಡಿದ, ಎಂಆರ್ಪಿಎಲ್ ಜನರಲ್ ಮ್ಯಾನೇಜರ್ ಕೇಶವ ಕುಮಾರ್ ಕೆ. ಅವರು ವಿದ್ಯಾರ್ಥಿಗಳಿಗೆ ಪ್ರಸ್ತುತ ಸಮಾಜದಲ್ಲಿ ವಿದ್ಯಾರ್ಜನೆಯಲ್ಲಿರುವ ಪೈಪೋಟಿಯನ್ನು ಎದುರಿಸಿ ನಾವು ಮುನ್ನಡೆಯಬೇಕಿದೆ ಎಂದರು.
ಅಧ್ಯಕ್ಷ ದೇವಸ್ಯ ವಾಸುದೇವ ರಾವ್ ಅವರು ವಿದ್ಯಾನಿ ಧಿಗೆ ನಿಸ್ವಾರ್ಥ ಮನಸ್ಸಿನಿಂದ ಸಹಕರಿಸಿದ ಸ್ಥಳೀಯ ಎಂಆರ್ಪಿಎಲ್ ಉದ್ಯೋಗಿಳಿಗೆ ಕೃತಜ್ಞತೆ ಸಲ್ಲಿಸಿದರು.
ಪ್ರಧಾನ ಕಾರ್ಯದರ್ಶಿ ಟಿ. ದಿನೇಶ್ ರಾವ್ ಅವರು ಬ್ರಾಹ್ಮಣ ಸಂಘಟನೆ ಬೆಳೆದು ಬಂದ ಹಾದಿ ಹಾಗೂ ಪರಸ್ಪರ ಸಹಕಾರ, ಸಹಬಾಳ್ವೆಯ ಬಗ್ಗೆ ಮಾಹಿತಿ ನೀಡಿ ಸದಸ್ಯರನ್ನು ಅಭಿನಂದಿಸಿದರು.
ಸಂಘದ ಪದಾಧಿಕಾರಿಗಳಾದ ಬಿ. ರಘುರಾಮ ತಂತ್ರಿ, ಕೆ. ರಾಘವೇಂದ್ರ ರಾವ್, ಜಯಲಕ್ಷ್ಮೀ ಟಿ., ರಾಘವೇಂದ್ರ ರಾವ್, ವರುಣ್ ಡಿ. ರಾವ್, ಭರತ್ ಪಟೇಲ್, ಹರೀಶ್ ಭಟ್, ಟಿ.ಪಿ. ಶ್ರೀನಿವಾಸ, ಬಿ. ಸುರೇಂದ್ರ ರಾವ್, ಶ್ರೀನಿವಾಸ ಐತಾಳ, ಯೋಗೀಶ್ ರಾವ್, ಎಂ.ಎಸ್. ಪ್ರಭಾಕರ್, ಮನೋಹರ್ ಕೆ., ಶ್ರಾವ್ಯಾ ಕೆ., ಕಾರ್ತಿಕ್, ಸುಬ್ರಹ್ಮಣ್ಯ ಮಯ್ಯ, ಗೋಪಾಲ ಮಯ್ಯ, ಪಟೇಲ್ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ
Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ
Mukhtar Ansari: ಕುಖ್ಯಾತ ಗ್ಯಾಂಗ್ಸ್ಟರ್, 5 ಬಾರಿ ಶಾಸಕ ಅನ್ಸಾರಿ ಸಾವು
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!