ಕಾಸರಗೋಡು ಕ್ರೈಂ ಸುದ್ದಿ: ಬಾರಡ್ಕದಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಕಾರು, ರಿವಾಲ್ವರ್ ಪತ್ತೆ
Team Udayavani, Oct 1, 2020, 10:39 PM IST
ಬದಿಯಡ್ಕ: ಇಲ್ಲಿನ ಬಾರಡ್ಕದಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಕಾರು ಮತ್ತು ರಿವಾಲ್ವರ್ ಪತ್ತೆಯಾಗಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸೆ. 30ರಂದು ರಾತ್ರಿ 11.30ಕ್ಕೆ ಬಾರಡ್ಕದಲ್ಲಿ ಕಾರೊಂದು ಉಪೇಕ್ಷಿತ ಸ್ಥಿತಿಯಲ್ಲಿ ಕಂಡುಬಂದಿದ್ದು, ಸ್ಥಳೀಯರು ಬದಿಯಡ್ಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಕಾರಿನ ಮುಂಭಾಗ ರಸ್ತೆಯಲ್ಲಿ ಒಂದು ರಿವಾಲ್ವರ್ನ್ನು ಪತ್ತೆಹಚ್ಚಿದರು. ಕಾರಿನ ಗಾಜು ಪುಡಿಯಾದ ಸ್ಥಿತಿಯಲ್ಲಿತ್ತು. ಕಾರಿನ ನಂಬ್ರವನ್ನು ಪರಿಶೀಲಿಸಿದಾಗ ಕಾಸರಗೋಡು ಬಳಿಯ ನಿವಾಸಿಯೊಬ್ಬರದ್ದೆಂದು ತಿಳಿದು ಬಂದಿದ್ದು, ಆದರೆ ಈ ಬಗ್ಗೆ ಪೊಲೀಸರಿಗೆ ಸಂಶಯವುಂಟಾಗಿದೆ. ಕಾರಿಗೆ ನಕಲಿ ನಂಬ್ರ ಅಳವಡಿಸಿರುವ ಸಾಧ್ಯತೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
ಎರಡು ತಂಡಗಳ ಮಧ್ಯೆ ಘರ್ಷಣೆ ನಡೆದಿರಬೇಕೆಂದೂ ಈ ಬಗ್ಗೆ ಸ್ಥಳೀಯರಿಗೆ ತಿಳಿದ ಹಿನ್ನೆಲೆಯಲ್ಲಿ ಕಾರು, ರಿವಾಲ್ವರ್ ಬಿಟ್ಟು ಪರಾರಿಯಾಗಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. ಉಪೇಕ್ಷಿತ ಸ್ಥಿತಿಯಲ್ಲಿ ಲಭಿಸಿದ ರಿವಾಲ್ವರ್ನಿಂದ ಗುಂಡು ಹಾರಿಸಿರಬಹುದೇ, ಯಾರಿಗಾದರೂ ಗಾಯವಾಗಿರಬಹುದೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಯುವಕನಿಗೆ ಹಲ್ಲೆ: ಸ್ಕೂಟರ್ ಅಪಹರಣ
ಕಾಸರಗೋಡು: ಹುರಿಹಗ್ಗ ಕಾರ್ಖಾನೆ ಮಾಲಕ ತಳಂಗರೆ ನಿವಾಸಿ ಮೊಹಮ್ಮದ್ ಅಸ್ಲಾಂ ತೊಟ್ಟಿಯಿಲ್(30) ಅವರಿಗೆ
ಕಾರಿನಲ್ಲಿ ಬಂದ ತಂಡವೊಂದು ಹಲ್ಲೆ ಮಾಡಿ ಸ್ಕೂಟರನ್ನು ಅಪಹರಿಸಿದೆ. ಅ. 1ರಂದು ಬೆಳಗ್ಗೆ ಮಾನ್ಯದಲ್ಲಿರುವ ಹುರಿಹಗ್ಗ ಕಾರ್ಖಾನೆಗೆ ಸ್ಕೂಟರ್ನಲ್ಲಿ ತೆರಳುತ್ತಿದ್ದಾಗ ಅಣಂಗೂರಿನಲ್ಲಿ ಹಲ್ಲೆ ಮಾಡಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ. ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಯುವಕನಿಗೆ ಹಲ್ಲೆ : ಕೇಸು
ಕುಂಬಳೆ: ಕುಬಣೂರು ನಿವಾಸಿ ರಮೇಶ್ ಅವರ ಪುತ್ರ ರಾಕೇಶ್ (21) ಅವರಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಕುಬಣೂರು ನಿವಾಸಿ ನುಮಾನ್ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ.
ಹಲ್ಲೆ ಯತ್ನ: ಇಬ್ಬರ ಬಂಧನ
ಕಾಸರಗೋಡು: ಹಿಂದೂ ಐಕ್ಯ ವೇದಿಕೆ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತೃಕ್ಕರಿಪುರದ ಒಳವರ ಟಿ.ವಿ. ಶಿಬಿನ್ ಅವರಿಗೆ ಹಲ್ಲೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಯ್ಯೂರು ನಿವಾಸಿ ಅಖೀಲ್ (38), ಪಿಲಿಕ್ಕೋಡು ಮಾಂಕಡವತ್ ಕೊವ್ವಲ್ ನಿವಾಸಿ ವಿನೋದ್ (37) ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಬೈಕನ್ನು ವಶಪಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು