ಕರ್ನಾಟಕ ಮುಖ್ಯಮಂತ್ರಿಯಿಂದ “ಗಾನ ಗಂಗೆ’ ಲೋಕಾರ್ಪಣೆ
Team Udayavani, Sep 18, 2020, 6:08 PM IST
ಕಾಸರಗೋಡು: ಕಾಸರಗೋಡಿನ ಬಹುಮುಖಿ ಕಲಾವಿದ ಹರಿದಾಸ ಜಯಾನಂದ ಕುಮಾರ ಹೊಸದುರ್ಗ ಅವರ ನಿಸ್ಪೃಹ ಬದುಕನ್ನು ಆದರಿಸಿ ಪತ್ರಕರ್ತ, ಲೇಖಕ ರವಿ ನಾಯಿಕಾಪು ಅವರು ಬರೆದು ಸುಬ್ಬಯಕಟ್ಟೆ ಕೈರಳಿ ಪ್ರಕಾಶನ ಪ್ರಕಟಿಸಿದ ಸಾಹಿತಿಕ ಕೃತಿ “ಗಾನ ಗಂಗೆ’ ಲೋಕಾರ್ಪಣೆಗೊಂಡಿತು.
ಕರ್ನಾಟಕ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಜರಗಿದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೃತಿಯನ್ನು ಬಿಡುಗಡೆಗೊಳಿಸಿದರು.
ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಲೇಖಕ ಹಾಗೂ ಪ್ರಕಾಶಕರ ಪ್ರಯತ್ನವನ್ನು ಸ್ಲಾಘಿಸಿದರು. ಸದ್ರಿ ಕೃತಿಯು ಕನ್ನಡ ಸಾರಸ್ವತ ಲೋಕಕ್ಕೆ ಅಮೂಲ್ಯ ನಿಧಿಯಾಗಲಿ ಎಂದು ಹಾರೈಸಿದರು.
ಪ್ರಕಾಶಕ ಎ.ಆರ್. ಸುಬ್ಬಯಕಟ್ಟೆ. ಲೇಖಕ ರವಿ ನಾಯಿಕಾಪು, ಸಾಹಿತ್ಯ ಸಂಘಟಕ ಪಮ್ಮಿ ಕೊಡಿಯಾಲಬೈಲು, ಹರಿದಾಸ ಜಯಾನಂದ ಕುಮಾರ, ಝಡ್.ಎ. ಕಯ್ನಾರ್, ಅಕ್ಷಯ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ