Kasaragod: ಈಜು ಕೊಳಕ್ಕೆ ಬಿದ್ದು ಬಾಲಕನ ಸಾವು
Team Udayavani, Jul 19, 2023, 5:19 AM IST
ಕಾಸರಗೋಡು: ಮನೆಯ ಪಕ್ಕದಲ್ಲಿರುವ ಈಜು ಕೊಳದಲ್ಲಿ ಬಿದ್ದು ಮೂರು ವರ್ಷದ ಬಾಲಕ ಸಾವಿಗೀಡಾದ ಘಟನೆ ಮಾಣಿಕೋತ್ತ್ನಲ್ಲಿ ಸಂಭವಿಸಿದೆ.
ಮಾಣಿಕೋತ್ ನಿವಾಸಿ, ಕೊಲ್ಲಿ ಉದ್ಯೋಗಿ ಪಡಿಂಞಾರ ವಳಪಿಲ್ ಹಾಶೀಂ ಅವರ ಪುತ್ರ ಹಾದಿಯ ಸಾವಿಗೀಡಾದ ಬಾಲಕ. ಮಂಗಳವಾರ ಬೆಳಗ್ಗೆ ಮನೆಯ ಪಕ್ಕದಲ್ಲಿರುವ ಈಜು ಕೊಳದಲ್ಲಿ ಬಿದ್ದು ಘಟನೆ ನಡೆದಿದೆ.
ಮನೆಯ ಮೇಲ್ಭಾಗದಲ್ಲಿ ಆಡುತ್ತಿದ್ದಾಗ ಆಕಸ್ಮಿಕವಾಗಿ ಕೆರೆಗೆ ಬಿದ್ದ ತತ್ಕ್ಷಣ ಆಸ್ಪತ್ರೆಗೆ ಕೊಂಡೊಯ್ದರೂ ರಕ್ಷಿಸಲು ಸಾಧ್ಯವಾಗಲಿಲ್ಲ.