Kasaragod: ಇನ್ನಷ್ಟು ರೈಲುಗಳ ನಿಲುಗಡೆಗೆ ಸಂಸದ ಉಣ್ಣಿತ್ತಾನ್ ಆಗ್ರಹ
Team Udayavani, Feb 10, 2024, 11:21 PM IST
ಕಾಸರಗೋಡು: ಕಾಂಞಂಗಾಡ್-ಕಾಣಿಯೂರು ರೈಲು ಹಳಿ ಸೇವೆ ಸಾಕ್ಷಾತ್ಕಾರಗೊಳಿಸಬೇಕು, ಕಾಸರಗೋಡು ಜಿಲ್ಲೆಯಲ್ಲಿ ಇನ್ನಷ್ಟು ರೈಲುಗಳಿಗೆ ನಿಲುಗಡೆ ನೀಡಬೇಕು ಸಹಿತ ಹಲವು ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ಗೆ ಸಲ್ಲಿಸಿದ್ದಾರೆ.
ಕರ್ನಾಟಕ ಸರಕಾರದ ಸಮ್ಮತಿ ಪತ್ರ ಲಭಿಸದಿರುವುದರಿಂದ ಕಾಂಞಂಗಾಡ್-ಕಾಣಿಯೂರು ರೈಲು ಹಳಿ ಯೋಜನೆ ಕುರಿತಾದ ಎಲ್ಲ ಕ್ರಮಗಳನ್ನು 2018ರಿಂದ ಸ್ಥಗಿತಗೊಳಿಸಲಾಗಿದೆ. ಈ ವಿಷಯದಲ್ಲಿ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಿ ಈ ಯೋಜನೆ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ದೀರ್ಘ ದೂರ ಸೇವೆಗಳ ರೈಲುಗಳ ಹಲವು ಬೋಗಿಗಳನ್ನು ಕಡಿತಗೊಳಿಸಲಾಗಿದ್ದು, ಮಂಜೇಶ್ವರ, ಕುಂಬಳೆ, ಚೆರುವತ್ತೂರು, ತೃಕ್ಕರಿಪುರ ಮತ್ತು ಕಣ್ಣಪುರಂ ನಿಲ್ದಾಣಗಳಲ್ಲಿ ಇನ್ನಷ್ಟು ರೈಲುಗಳಿಗೆ ನಿಲುಗಡೆ ನೀಡಬೇಕೆಂದು ಈ ಹಿಂದೆಯೇ ಮಂಡಿಸಿದ್ದ ಬೇಡಿಕೆಗಳನ್ನು ಅಂಗೀಕರಿಸಬೇಕು.
ಮಂಗಳೂರು-ತಿರುವನಂತಪುರ ಮಾರ್ಗದಲ್ಲಿ ಹಗಲು ಮತ್ತು ರಾತ್ರಿ ಸೇವೆ ನಡೆಸುವ ರೀತಿಯಲ್ಲಿ ಹೊಸ ರೈಲು ಸೇವೆ ಆರಂಭಿಸಬೇಕು, ಜನರಲ್ ಬೋಗಿಗಳ ಸಂಖ್ಯೆ ಹೆಚ್ಚಿಸಬೇಕು, ಮೂಕಾಂಬಿಕಾ-ಶೊರ್ನೂರು ರೈಲು ಯೋಜನೆಯನ್ನು ಪುನರಾರಂಭಿಸಬೇಕು ಅಥವಾ ರಾಮೇಶ್ವರ ತನಕ ವಿಸ್ತರಿಬೇಕೆಂದು ಸಂಸದರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು