ರೈಲು ವಿಧ್ವಂಸಕ ಕೃತ್ಯ ಯತ್ನದ ಹಿಂದೆ ಉಗ್ರರ ಕೈವಾಡ ಶಂಕೆ; ರೈಲ್ವೇ ಡಿವೈಎಸ್ಪಿ ತನಿಖೆ
Team Udayavani, Aug 25, 2022, 4:20 PM IST
ಕಾಸರಗೋಡು : ಜಿಲ್ಲೆಯ ವಿವಿಧೆಡೆ ರೈಲು ಹಳಿಗಳಲ್ಲಿ ಕಲ್ಲುಗಳು, ಬೃಹದಾಕಾರದ ಕಾಂಕ್ರೀಟ್ ತುಂಡುಗಳನ್ನು ಇರಿಸಿ ವಿಧ್ವಂಸಕ ಕೃತ್ಯಕ್ಕೆ ಸಂಚು ಹೂಡುತ್ತಿರುವ ಹಿನ್ನೆಲೆಯಲ್ಲಿ ರೈಲ್ವೇ ಇಲಾಖೆಯ ಉತ್ತರ ವಲಯದ ಡಿವೈಎಸ್ಪಿ ಕೆ.ಎನ್. ರಾಧಾಕೃಷ್ಣನ್ ನೇತೃತ್ವದಲ್ಲಿ ಸಮಗ್ರ ತನಿಖೆ ಆರಂಭಗೊಂಡಿದೆ.
ಡಿವೈಎಸ್ಪಿ ನೇತೃತ್ವದ ತಂಡ ಬೇಕಲ ಸಮೀಪದ ತೃಕ್ಕನ್ನಾಡ್ ರೈಲು ಹಳಿ ಮತ್ತು ಪರಿಸರವನ್ನು ಸಂದರ್ಶಿಸಿ ತನಿಖೆ ನಡೆಸಿದೆ. ತೃಕ್ಕನ್ನಾಡ್ ಕ್ಷೇತ್ರದ ಹಿಂದುಗಡೆ ಇರುವ ರೈಲು ಹಳಿಯಲ್ಲಿ ದುಷ್ಕರ್ಮಿಗಳು ಕಬ್ಬಿಣವೂ ಒಳಗೊಂಡ ಬೃಹದಾಕಾರದ ಕಾಂಕ್ರೀಟ್ ತುಂಡನ್ನು ಇರಿಸಿ ಹಳಿ ತಪ್ಪಿಸಿ ವಿಧ್ವಂಸಕ ಕೃತ್ಯಕ್ಕೆ ಸಂಚು ನಡೆಸಲಾಗಿತ್ತು. ಕೃತ್ಯದಲ್ಲಿ ಯಾವುದಾದರೂ ಉಗ್ರಗಾಮಿ ಸಂಘಟನೆಗಳ ಕೈವಾಡ ಇರಬಹುದೆಂಬ ಶಂಕೆಯನ್ನು ತನಿಖಾ ತಂಡ ವ್ಯಕ್ತಪಡಿಸಿದೆ.
ಇದನ್ನೂ ಓದಿ : ಉಡುಪಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆ , ಪ್ರತ್ಯೇಕ ಸಮಿತಿ