ಕಾಸರಗೋಡು ಅಪರಾಧ ಸುದ್ದಿಗಳು: ರೈಲು ಢಿಕ್ಕಿ: ಯುವಕ ಸಾವು
Team Udayavani, Apr 16, 2023, 5:10 AM IST
ಕಾಸರಗೋಡು : ರಾವಣೇಶ್ವರ ಪಾಣಂತೋಡ್ ನಿವಾಸಿ, ಅಧ್ಯಾಪಕ ಕೃಷ್ಣನ್ ಅವರ ಪುತ್ರ ಫಾರ್ಮಸಿಸ್ಟ್ ಕೆ. ಸುಜಿಲ್(28) ಕಾಂಞಂಗಾಡ್ ಮಾಣಿಕೋತ್ ಗ್ರ್ಯಾಂಡ್ ಆಡಿಟೋರಿಯಂ ಪರಿಸರದಲ್ಲಿ ರೈಲು ಢಿಕ್ಕಿ ಹೊಡೆದು ಸಾವಿಗೀಡಾದ ಘಟನೆ ನಡೆದಿದೆ. ನಾಪತ್ತೆಯಾಗಿದ್ದ ಕೆ. ಸುಜಿಲ್ ಅವರ ಶೋಧ ನಡೆಯುತ್ತಿದ್ದಂತೆ ಮೃತದೇಹ ರೈಲು ಹಳಿಯಲ್ಲಿ ಪತ್ತೆಯಾಗಿದೆ. ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.
ರೆಸಾರ್ಟ್ ಬೆಂಕಿಗಾಹುತಿ
ಕಾಸರಗೋಡು: ನೀಲೇಶ್ವರ ಒಳಿಂಞ ವಳಪ್ಪಿನ ಹೆರ್ಮಿಟೇಜ್ ರೆಸಾರ್ಟ್ ಶನಿವಾರ ಮುಂಜಾನೆ ಬೆಂಕಿಗಾಹುತಿಯಾಗಿದೆ. ವಿಷು ಹಬ್ಬದ ಅಂಗವಾಗಿ ಯಾರೋ ಸಿಡಿಸಿದ ಸುಡುಮದ್ದು ರೆಸಾರ್ಟ್ ಮೇಲೆ ಬಿದ್ದಿದ್ದು, ಇದರಿಂದ ಬೆಂಕಿ ಹತ್ತಿಕೊಂಡಿತೆನ್ನಲಾಗಿದೆ. ಹುಲ್ಲು ಹಾಸಿನ ಕಾಟೇಜ್ನ ಮೇಲ್ಛಾವಣಿಗೆ ಬೆಂಕಿ ಹತ್ತಿಕೊಂಡಿದ್ದು, ರೆಸಾರ್ಟ್ನಲ್ಲಿದ್ದವನ್ನು ಶೀಘ್ರದಲ್ಲೇ ತೆರವುಗೊಳಿಸಲು ಸಾಧ್ಯವಾದುದರಿಂದ ಸಂಭವನೀಯ ಅಪಾಯ ತಪ್ಪಿದೆ. ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸಿದೆ. ಕಾರ್ಯಾಲಯ ಸಹಿತ ರೆಸಾರ್ಟ್ ಬೆಂಕಿಗಾಹುತಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ
LPG Cylinders: ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?
ಧ್ರುವ್ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್ ಪೋಸ್ಟ್ನ ಸತ್ಯಾಸತ್ಯತೆ ಏನು?
ಇನ್ಸ್ಟಾ ಪ್ರೊಫೈಲ್ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..