ವಿಷುವಿಗೆ ಸಾವಯವ ತರಕಾರಿ: ಕೇಶವ ಪ್ರಸಾದರ ಕೃಷಿ ಸಾಹಸ


Team Udayavani, Apr 13, 2017, 3:42 PM IST

krishi-m.jpg

ಬದಿಯಡ್ಕ: ಸಾಧಿಸುವ ಶಕ್ತಿ ಎಲ್ಲರಲ್ಲೂ ಇದೆ. ಆದರೆ ಪ್ರಯತ್ನಿಸುವ ಮನಸ್ಸು ಬೇಕು. ಹಾಗೆಯೇ ಸಮಯದ ಮಹತ್ವ ಮತ್ತು ಮೌಲ್ಯ ಬಲ್ಲವನು ಅದನ್ನು ಬೇಕಾದಂತೆ ಬೇಕಾದಾಗ ಉಪಯೋಗಿಸಿಕೊಳ್ಳಬಲ್ಲ. ಸಮಯ ಇಲ್ಲ ಎನ್ನುವ ಬದಲು ಇರುವ ಸಮಯದಲ್ಲಿ ಏನೆಲ್ಲ ಮಾಡಬಹುದು ಎಂಬುದನ್ನೂ ಮೊದಲೇ ನಿರ್ಧರಿಸುತ್ತಾನೆ, ಅದರಂತೆ ಕಾರ್ಯಪ್ರವೃತ್ತ ನಾಗುತ್ತಾನೆ. ಸಾಧಿಸುವ ಮನಸಿದ್ದರೆ ಎಲ್ಲವೂ ಸಾಧ್ಯ ಎಂಬುದನ್ನು ಸದಾ ರಾಜಕೀಯ, ಸಮಾಜಸೇವೆ ಮುಂತಾದ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಕುಂಬಳೆ ಸಮೀಪದ ನಾರಾಯಣ ಮಂಗಲದ ಕೇಶವ ಪ್ರಸಾದ್‌ ನಾಣಿತ್ತಿಲು ತೋರಿಸಿಕೊಟ್ಟಿದ್ದಾರೆ.

ಮರಗೆಣಸು ತಂದ ಆದಾಯ
ಕೃಷಿಯಲ್ಲಿ ಆಸಕ್ತಿ ಹೊಂದಿದ್ದ ಕೇಶವ ಪ್ರಸಾದ್‌ ಅವರು ಕೆಂಪು ಕಲ್ಲು ತೆಗೆದು ಹೊಂಡಗಳಿಂದ ತುಂಬಿದ್ದ ತನ್ನ ಎರಡು ಎಕ್ರೆ ಪ್ರದೇಶವನ್ನು ಸಮತಟ್ಟುಗೊಳಿಸಿ ಕೇರಳದಲ್ಲಿ ಅತೀ ಬೇಡಿಕೆ ಇರುವ ಮರಗೆಣಸು ಕೃಷಿ ಮಾಡಲು ನಿರ್ಧರಿಸಿದರು. ಇತರ ಕೃಷಿಕರಿಂದ ಹಾಗೂ ತೋಟಗಾರಿಕಾ ಇಲಾಖೆಯಿಂದ ಸುಮಾರು ಎರಡು ಸಾವಿರದಷ್ಟು ಮರಗೆಣಸಿನ ಗಿಡಗಳನ್ನು ತಂದು ನೆಟ್ಟರು. ಒಂದು ಸಸಿಯಲ್ಲಿ ಸಾಧಾರಣ ಹದಿನೈದರಿಂದ ಇಪ್ಪತ್ತು ಕಿಲೋಗಳಷ್ಟು ಗೆಣಸು ಲಭಿಸುತ್ತಿದ್ದು ಇದರಿಂದ ಮಾತ್ರ ಎರಡು ಲಕ್ಷ ರೂ.ನಷ್ಟು ಆದಾಯ ಲಭಿಸಿರುವುದಾಗಿ ಕೇಶವ ಪ್ರಸಾದ್‌ ಹೇಳುತ್ತಾರೆ.

ಜುಲೈ ತಿಂಗಳ ಕೊನೆಯಲ್ಲಿ ಗಿಡಗಳನ್ನು ನೆಟ್ಟಿದ್ದು ಮಳೆ ಕಡಿಮೆಯಾಗಿದ್ದುದರಿಂದ ಪೈಪಿನ ಮುಖಾಂತರ ನೀರುಣಿಸಬೇಕಾಯಿತು. ಹಾಗಾಗಿ ಗಿಡದ ಬೆಳವಣಿಗೆ ನಿರೀಕ್ಷೆ ಯಷ್ಟು ಆಗದೆ ಇಳುವರಿ ಕಡಿಮೆ ಯಾಯಿತು ಇಲ್ಲವಾದರೆ ಸುಮಾರು ನಾಲ್ಕು ಲಕ್ಷ ರೂ. ಆದಾಯ ಲಭಿಸುತ್ತಿತ್ತು ಎಂದವರ ಅಭಿಪ್ರಾಯ.

ಉಪಬೆಳೆಗಳ ಫ‌ಸಲು
ಮರಗೆಣಸು  ಮಾತ್ರವಲ್ಲದೆ ಉಪಬೆಳೆಯಾಗಿ ಬಸಳೆ, ಕುಂಬಳಕಾಯಿ, ಸೋರೆಕಾಯಿ, ಚೀನಿಕಾಯಿ, ತೊಂಡೆ ಕಾಯಿ, ಅಲಸಂಡೆ, ಬದನೆ, ಹರಿವೆ ಮುಂತಾದವುಗಳನ್ನು ಬೆಳೆಸುತ್ತಿದ್ದಾರೆ. ಕೇವಲ ಮೂರು ಸಾವಿರ ಖರ್ಚು ಮಾಡಿದ ಬಸಳೆ ಕೃಷಿಯಿಂದ ಮಾತ್ರ ಮೂವತ್ತೆ$çದು ಸಾವಿರ ಆದಾಯ ಲಭಿಸಿದೆ. ಸ್ಪ್ರಿಂಕ್ಲರ್‌ ಹಾಗೂ ಹನಿ ನೀರಾವರಿ ಮೂಲಕ ನೀರುಣಿಸುತ್ತಿದ್ದು, ಯಾವುದೇ ರಾಸಾಯನಿಕಗಳನ್ನು ಬಳಸದೆ ಸಾವಯವ ಕೃಷಿ ಮಾಡಿ ಯಶಸ್ವಿಗಳಿಸಿದ್ದಾರೆ ಕೇಶವ ಪ್ರಸಾದ್‌. ನೆಲಕಡಲೆ ಹಿಂಡಿ ಹಾಗೂ ಸಾವಯವ ಗೊಬ್ಬರ ಮಾತ್ರವೇ ಉಪಯೋಗಿಸಿ ಬೆಳೆದ ತರಕಾರಿಗಳಿಗೆ ಹೆಚ್ಚಿನ ಬೇಡಿಕೆ ಇದ್ದು  ಜನರು ಇವರ ಮನೆಯಿಂದ ನೇರವಾಗಿ ತರಕಾರಿಗಳನ್ನು ಕೊಂಡು ಕೊಳ್ಳುತ್ತಾರೆ. ಉಳಿದ ತರಕಾರಿಗಳನ್ನು ಕುಂಬಳೆಯಲ್ಲಿರುವ ತರಕಾರಿ ಅಂಗಡಿಗೆ ಮಾರಾಟ ಮಾಡಲಾಗುತ್ತದೆ. ಇಷ್ಟು ಮಾತ್ರವಲ್ಲದೆ ಗೋವುಗಳನ್ನೂ ಸಾಕುತ್ತಿದ್ದು ಹಟ್ಟಿಯ ಗೊಬ್ಬರ ಕೃಷಿಗೆ ಉಪಯೋಗಿಸುತ್ತಾರೆ. ಹಾಗೆಯೇ ತನ್ನ ಹಿತ್ತಿಲಲ್ಲಿ ಹುಲ್ಲನ್ನೂ ಬೆಳೆಯುತ್ತಿದ್ದಾರೆ.

ಮುಂಜಾನೆ ಆರು ಗಂಟೆಗೆ ತೋಟಕ್ಕಿಳಿಯುವ ಇವರು ಗಿಡಗಳಿಗೆ ನೀರುಣಿಸುವುದು, ಗೊಬ್ಬರ ಹಾಕು ವುದು, ಕಳೆ ಕೀಳುವುದು, ತರಕಾರಿ ಗಳನ್ನು ಕೊಯ್ಯುವುದು ಮುಂತಾದ ಕೆಲಸಗಳನ್ನು ಮುಗಿಸಿ ಸುಮಾರು ಎಂಟೂವರೆ ಗಂಟೆಗೆ ತನ್ನ ಕೃಷಿಯ ಕೆಲಸ ಮುಗಿಸಿ ಇತರ ಕೆಲಸಕ್ಕೆ ಹೊರಡುತ್ತಾರೆ. ಸಂಜೆಯಾಗುತ್ತಿದ್ದಂತೆ ಇವರ ಪತ್ನಿ, ಕುಂಬಳೆ ಪಂಚಾಯತ್‌ನ ಮಾಜಿ ಸದಸ್ಯೆ ಅಶ್ವಿ‌ನಿ ನಾಣಿತ್ತಿಲು ಹಾಗೂ ಮಕ್ಕಳಾದ ಅನನ್ಯಾ ಹಾಗೂ ಅಕ್ಷಯ ತೋಟದ ಕಾರ್ಯಗಳನ್ನು ನೋಡುತ್ತಾರೆ. ಸದಾ ಹಸನ್ಮುಖೀಯಾಗಿ ಜನರ ಅಗತ್ಯಗಳಿಗೆ ಸ್ಪಂದಿಸುವ ಸಮಾಜಸೇವಕ, ನುರಿತ ರಾಜಕಾರಣಿ, ಗಡಿನಾಡಲ್ಲಿ ಜಾನಪದ ಸಂಚಾರ ಕಾರ್ಯಕ್ರಮವನ್ನೂ ಯಶಸ್ವಿಯಾಗಿ ಮಾಡುತ್ತಿರುವ ಕೇಶವ ಪ್ರಸಾದ್‌ ಸದಾ ಒಂದಲ್ಲಾ ಒಂದು ಚಟುವಟುಕೆಯಲ್ಲಿ ನಿರತರಾಗಿರುತ್ತಾರೆ.

ಕೃಷಿಗೂ ಸೈ, ಸಮಾಜಸೇವೆಗೂ ಸೈ
ಕಾಸರಗೋಡು ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಜನಪದ ಸಾಹಿತ್ಯ ಪರಿಷತ್‌ ಕೇರಳ ಘಟಕದ ಅಧ್ಯಕ್ಷರು, ಕುಂಬಳೆ ಗ್ರಾಮ ಪಂಚಾಯತ್‌ನ ಮಾಜಿ ಉಪಾಧ್ಯಕ್ಷರು, ಉತ್ತಮ ಸಂಘಟಕ, ಸಮಾಜಸೇವಕ… ಹೀಗೆ ಸದಾ ಒಂದಲ್ಲ ಒಂದು ಕೆಲಸದಲ್ಲಿ ನಿರತರಾಗಿರುವ ಕೇಶವ ಪ್ರಸಾದರು ತನ್ನ ಬಿಡುವಿನ ಸಮಯವನ್ನು ಕೃಷಿ ಕೆಲಸಕ್ಕಾಗಿ ಮೀಸಲಿಡುತ್ತಾರೆ. ಉತ್ತಮ ವಾಗ್ಮಿಯು ಅಗಿರುವ ಇವರು ಕನ್ನಡ, ಮಲಯಾಳಂ, ತುಳು, ಇಂಗ್ಲೀಷ್‌, ಹಿಂದಿ ಮಾತಾಡಬಲ್ಲವರಾಗಿದ್ದಾರೆ. ಇವರ ತೋಟದಲ್ಲಿ ಬೆಳೆಯುವ ತರಕಾರಿಗಳು ಈ ವರ್ಷದ ವಿಷುವಿಗಾಗಿ ಈಗಾಗಲೇ ಮಾರುಕಟ್ಟೆ ತಲುಪಿದೆ. ಉತ್ತಮ ಗುಣಮಟ್ಟದ, ಸಾವಯವ ಉತ್ಪನ್ನಗಳು ಆರೋಗ್ಯವಂತ ವಿಷುವನ್ನು ಜನರು ಸಂಭ್ರಮದಿಂದ ಆಚರಿಸುವಂತೆ ಮಾಡುವುದರಲ್ಲಿ ಎರಡು ಮಾತಿಲ್ಲ.

ಆತ್ಮಹತ್ಯೆಯೋಚನೆಯ ಕೃಷಿಕರು ಇವರಿಂದ ಕಲಿಯಲಿ
ಕೃಷಿಯಲ್ಲಿ ಸಾಧನೆಮಾಡಲು ಹೋಗಿ ಕೈಸುಟ್ಟುಕೊಂಡ ನಿರಾಸೆ ಯಿಂದ ಆತ್ಮಹತ್ಯೆ ಮಾಡುವ ಕೃಷಿಕರು ಇವರಿಂದ ಕಲಿಯುವುದು ಬಹಳ ವಿದೆ. ಬಿಡುವಿನ ಸಮಯವನ್ನು ಹೇಗೆ ಪ್ರಯೋಜನಕಾರಿಯಾಗಿ ಉಪ ಯೋಗಿಸಿಕೊಳ್ಳಬಹುದು ಎಂಬು ದನ್ನು ತೋರಿಸಿಕೊಟ್ಟ ಕೇಶವ ಪ್ರಸಾದ್‌ ಅವರ ಸಾಧನೆ ಮುಂದುವ ರಿಯಲಿ. ಹಾಗೆಯೇ ಭಾರತ ದೇಶದ ಬೆನ್ನೆಲು ಬಾದ ಕೃಷಿಯತ್ತ ಜನರನ್ನು ಆಕರ್ಷಿಸು ವಂತಾಗಲಿ.
ವಿಷುವಿನ ಸಂಭ್ರಮ ವರ್ಷವಿಡೀ ಎಲ್ಲರ ಮನೆಯಲ್ಲೂ ತುಂಬಿ ತುಳುಕಲಿ.

– ಅಖೀಲೇಶ್‌ ನಗುಮುಗಂ

ಟಾಪ್ ನ್ಯೂಸ್

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod ಆನ್‌ಲೈನ್‌ ಟ್ರೇಡಿಂಗ್‌ ಮೂಲಕ 80.49 ಲಕ್ಷ ರೂ. ಲಪಟಾವಣೆ

Kasaragod ಆನ್‌ಲೈನ್‌ ಟ್ರೇಡಿಂಗ್‌ ಮೂಲಕ 80.49 ಲಕ್ಷ ರೂ. ಲಪಟಾವಣೆ

Kerala: ದ್ವಿಚಕ್ರ ವಾಹನ ಹಿಂಬದಿ ಸವಾರ ಮಾತನಾಡಿದರೂ ದಂಡ!

Kerala: ದ್ವಿಚಕ್ರ ವಾಹನ ಹಿಂಬದಿ ಸವಾರ ಮಾತನಾಡಿದರೂ ದಂಡ!

Kumbla ಆತ್ಮಹತ್ಯೆ ಯತ್ನ ವೇಳೆ ಹಗ್ಗ ತುಂಡಾಗಿ ಬಿದ್ದು ಗಾಯಗೊಂಡಿದ್ದ ಮಹಿಳೆ ಸಾವು

Kumbla ಆತ್ಮಹತ್ಯೆ ಯತ್ನ ವೇಳೆ ಹಗ್ಗ ತುಂಡಾಗಿ ಬಿದ್ದು ಗಾಯಗೊಂಡಿದ್ದ ಮಹಿಳೆ ಸಾವು

Kodagu: ಗಾಳಿ ಮಳೆಯ ಹೊಡೆತಕ್ಕೆ ಧರೆಗುರುಳಿದ ಮರಗಳು, ಕುಸಿದ ಧರೆ: ಹಲವೆಡೆ ಆತಂಕ ಸೃಷ್ಟಿ

Kodagu: ಗಾಳಿ ಮಳೆಯ ಹೊಡೆತಕ್ಕೆ ಧರೆಗುರುಳಿದ ಮರಗಳು, ಕುಸಿದ ಧರೆ: ಹಲವೆಡೆ ಆತಂಕ ಸೃಷ್ಟಿ

Madikeri ಮಳೆಯಿಂದ ಉದುರುತ್ತಿರುವ ಕಾಫಿಕಾಯಿ: ಬೆಳೆಗಾರ ಕಂಗಾಲು

Madikeri ಮಳೆಯಿಂದ ಉದುರುತ್ತಿರುವ ಕಾಫಿಕಾಯಿ: ಬೆಳೆಗಾರ ಕಂಗಾಲು

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.