Kanhangad ಹಳಿ ಬದಲಾಗಿ ಸಂಚರಿಸಿದ ಮಾವೇಲಿ ಎಕ್ಸ್ಪ್ರೆಸ್: ತಪ್ಪಿದ ಭಾರೀ ದುರಂತ
Team Udayavani, Oct 27, 2023, 6:18 PM IST
ಕಾಸರಗೋಡು: ಮಂಗಳೂರಿನಿಂದ ತಿರುವನಂತಪುರಕ್ಕೆ ಪ್ರಯಾಣಿಸುತ್ತಿದ್ದ ಮಾವೇಲಿ ಎಕ್ಸ್ಪ್ರೆಸ್ ರೈಲು ಹಳಿ ಬದಲಾಗಿ ಸಂಚರಿಸಿದುದು ಕೆಲವು ಹೊತ್ತು ಗೊಂದಲ ಹಾಗು ಆತಂಕಕ್ಕೆ ಕಾರಣವಾಯಿತು.
ಕಾಂಞಂಗಾಡ್ ರೈಲ್ವೇ ನಿಲ್ದಾಣದಲ್ಲಿ ಅ.26 ರಂದು ಸಂಜೆ 6.45 ರ ವೇಳೆ ಈ ಘಟನೆ ನಡೆದಿದೆ. ಒಂದನೇ ಫ್ಲಾಟ್ಫಾಂಗೆ ತಲುಪಬೇಕಾಗಿದ್ದ ರೈಲು ಫ್ಲಾಟ್ಫಾಂ ಇಲ್ಲದ ಮಧ್ಯದ ಹಳಿಯಲ್ಲಿ ಸಂಚರಿಸಿತ್ತು. ಈ ಹೊತ್ತಿನಲ್ಲಿ ಅದೇ ಹಳಿಯಲ್ಲಿ ಬೇರೆ ರೈಲು ಇಲ್ಲದಿದ್ದುದರಿಂದ ಸಂಭವನೀಯ ಭಾರೀ ದುರಂತ ತಪ್ಪಿತು.
ಇದೇ ರೈಲಿನಲ್ಲಿ ಪ್ರಯಾಣಿಸಬೇಕಾಗಿದ್ದವರು ಫ್ಲಾಟ್ಫಾಂನಿಂದ ಕೆಳಗಿಳಿದು ಕಷ್ಟಪಟ್ಟು ರೈಲು ಗಾಡಿಯನ್ನೇರಿದರು. ವಿದ್ಯುತ್ ದೀಪದ ಬೆಳಕು ಕಡಿಮೆಯಿದ್ದುದರಿಂದ ರಿಸರ್ವೇಶನ್ ಬೋಗಿಗಳನ್ನು ಹುಡುಕುವುದು ಪ್ರಯಾಣಿಕರಿಗೆ ಕಷ್ಟವಾಯಿತು.
ತಾಂತ್ರಿಕ ಕಾರಣದಿಂದಾಗಿ ಹಳಿ ಬದಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ