ಆತಂಕ ಪರಿಹಾರಕ್ಕೆ ಶಿಕ್ಷಣ ಸಚಿವರಿಗೆ ಶಾಸಕ ನೆಲ್ಲಿಕುನ್ನು ಪತ್ರ
Team Udayavani, Mar 24, 2018, 9:45 AM IST
ಕಾಸರಗೋಡು: ಕಣ್ಣೂರು ವಿ.ವಿ. ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಚಾಲಾದ ಬಿ.ಎಡ್. ಶಿಕ್ಷಣ ಕೇಂದ್ರದಲ್ಲಿರುವ ಸಮಸ್ಯೆಗಳಿಗೆ ಸ್ಪಂದಿಸಿ, ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಶಾಸಕ ಎನ್.ಎ. ನೆಲ್ಲಿಕುನ್ನು ಶಿಕ್ಷಣ ಸಚಿವ ಪ್ರೊ| ಸಿ. ರವೀಂದ್ರನಾಥ್ ಅವರಿಗೆ ಪತ್ರ ಬರೆದಿದ್ದಾರೆ.
ಕಳೆದ ಇಪ್ಪತ್ತು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಬಿ.ಎಡ್ ಕೇಂದ್ರದಲ್ಲಿ ಹಲವು ಮಂದಿ ಶಿಕ್ಷಣ ಪೂರೈಸಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಈ ಕೇಂದ್ರದಲ್ಲಿ ಖಾಯಂ ಅಧ್ಯಾಪಕರ ನೇಮಕಾತಿ ನಡೆದಿಲ್ಲ. ಕನ್ನಡ, ಮಲಯಾಳಂ ಭಾಷೆಗಳಿಗೆ ಸೂಕ್ತ ಅಧ್ಯಾಪಕರಿಲ್ಲದ ಕಾರಣ ಶಿಕ್ಷಣ ವಿಭಾಗವು ತೊಂದರೆ ಅನುಭವಿಸುತ್ತಿದೆ. ಕಳೆದ ಒಂದು ತಿಂಗಳಿನಲ್ಲಿ ಇಲ್ಲಿನ ಗ್ರಂಥಾಲಯ ಸಿಬಂದಿ, ಗುಮಾಸ್ತರು ಸಹಿತ ವಾಚ್ಮನ್ ಹುದ್ದೆಯನ್ನು ರದ್ದುಗೊಳಿಸಲಾಗಿದೆ. ಬಿ.ಎಡ್. ಕೇಂದ್ರವೂ ನಿಲುಗಡೆಯಾಗುತ್ತಿದೆ ಎಂಬ ಆತಂಕ ಇಲ್ಲಿನ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಕಾಡಿದೆ. ಕಣ್ಣೂರು ವಿ.ವಿ. ಅಧೀನದ ಶಿಕ್ಷಣ ಕೇಂದ್ರದಲ್ಲಿ ಈ ಹಿಂದೆ ಎಂ.ಬಿ.ಎ., ಎಂ.ಎಸ್ಸಿ. ಕೋರ್ಸ್ಗಳನ್ನು ರದ್ದುಗೊಳಿಸಲಾಗಿತ್ತು. ಒಟ್ಟು ಏಳು ವಿಭಾಗಗಳನ್ನು ಒಳಗೊಂಡಿದ್ದ ಶಿಕ್ಷಣ ಕೇಂದ್ರದಲ್ಲಿ ಸರಕಾರಿ ಕಾಲೇಜಿನಿಂದ ಬಿ.ಎ. ಕನ್ನಡ, ಬಿ.ಎ. ಮಲಯಾಳ ವಿಭಾಗಗಳಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳು ಅಧ್ಯಾಪಕರ ಶಿಕ್ಷಣ ತರಬೇತಿಗೆ ಆಗಮಿಸುತ್ತಿದ್ದರು. ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಕಟ್ಟಡವನ್ನು ಸೂಕ್ತ ಸಿಬಂದಿ ನೇಮಕದ ಮೂಲಕ ಫಲಪ್ರದಗೊಳಿಸಬೇಕೆಂದು ಶಾಸಕರು ಶಿಕ್ಷಣ ಸಚಿವರಿಗೆ ಬರೆದ ಪತ್ರದಲ್ಲಿ ವಿನಂತಿಸಿದ್ದಾರೆ.
ಶಿಕ್ಷಣ ಕೇಂದ್ರಕ್ಕೆ ಸೂಕ್ತ ಆವರಣಗೋಡೆ, ಕ್ಯಾಂಟೀನ್ ಸೌಲಭ್ಯ ಇಲ್ಲದ ಕೇಂದ್ರದಲ್ಲಿ ಎಲ್ಲ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ, ಮಾದರಿ ಶಿಕ್ಷಣ ಕೇಂದ್ರವನ್ನಾಗಿಸುವಂತೆ ಮನವಿ ಮಾಡಲಾಗಿದೆ. ಕೇಂದ್ರದ ಹಾಸ್ಟೆಲ್ನಲ್ಲಿ 24 ಮಂದಿ ಕೇಂದ್ರೀಯ ವಿ.ವಿ.ಯ ವಿದ್ಯಾರ್ಥಿಗಳು ವಾಸ್ತವ್ಯ ಹೂಡಿದ್ದು ಒಟ್ಟು 44 ಮಂದಿ ವಿದ್ಯಾರ್ಥಿಗಳು ತಂಗಿದ್ದಾರೆ. ಅಗತ್ಯ ಸೌಕರ್ಯಗಳನ್ನು ಕೊಡ ಮಾಡುವ ಮೂಲಕ ಶಿಕ್ಷಣ ಕೇಂದ್ರದ ಅಭಿವೃದ್ಧಿಗೆ ಸಹಾಯ ಮಾಡಬೇಕೆಂದು ಪತ್ರದಲ್ಲಿ ಕೇಳಿಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ