Kasaragod ಮಾಯಿಪ್ಪಾಡಿ: ಅಂತಾರಾಜ್ಯ ವಾಹನ ಕಳ್ಳರ ಬಂಧನ
Team Udayavani, May 10, 2024, 10:42 PM IST
ಕಾಸರಗೋಡು: ಅಂತಾರಾಜ್ಯ ವಾಹನ ಕಳವು ತಂಡದ ಇಬ್ಬರನ್ನು ವಿದ್ಯಾನಗರ ಪೊಲೀಸರು ಮಾಯಿಪ್ಪಾಡಿಯಲ್ಲಿ ಬಂಧಿಸಿದ್ದಾರೆ. ಮಂಗಳೂರು ಗುಡ್ಡೆ ಕಣ್ಣೂರು ಬಳ್ಳೂರು ನಿವಾಸಿ ಮೊಹಮ್ಮದ್ ಅಲ್ಫಾಸ್ (24) ಮತ್ತು ಮಂಗಳೂರು ಪಂಜಿಮೊಗರು ಮಂಜೋಟಿ ಮಸೀದಿ ರಸ್ತೆ ಬಳಿಯ ಮುಸಾಂಬಿಲ್ ಹುಸೈನ್(20) ಬಂಧಿತರು.
ವಿದ್ಯಾನಗರ ಪೊಲೀಸ್ ಇನ್ಸ್ಪೆಕ್ಟರ್ ಬಿನೋಯ್ ಕೆ.ಜೆ. ಅವರ ಮಾರ್ಗದರ್ಶನದಲ್ಲಿ ಎಸ್.ಐ. ದೀಪ್ತಿ ವಿ.ವಿ. ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ. ಕಳವುಗೈದಿರುವ ಒಂದು ಬೈಕನ್ನು ವಶಪಡಿಸಿಕೊಳ್ಳಲಾಗಿದೆ.
2023 ಡಿ.18 ರಂದು ರಾತ್ರಿ ಎಡನೀರು ಪಾಡಿ ಕೋರಿಕ್ಕಾರಿನ ಮುಹಶಿರ್ ಅವರ ಮನೆ ಅಂಗಳದಲ್ಲಿ ನಿಲ್ಲಿಸಲಾಗಿದ್ದ ಅವರ ಸಹೋದರ ಮುಬಶಿರ್ ಅವರ ಬೈಕ್ ಕಳವಾಗಿತ್ತು. ಮಂಗಳೂರಿನ ಶಕೀಲ್ ಈ ಬೈಕ್ನ್ನು ಕಳವು ಮಾಡಿದ್ದನೆಂದೂ, ಅದನ್ನು ಮಾರಾಟ ಮಾಡಲು ತಮಗೆ ನೀಡಿದ್ದಾನೆಂದು ಬಂಧಿತರು ಪೊಲೀಸರಿಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
AAP ನಾಯಕರಿಗೆ 100 ಕೋಟಿ ಕಿಕ್ ಬ್ಯಾಕ್;ಕವಿತಾ ವಿರುದ್ಧ ಇಡಿ ಆರೋಪ
Delhi; ಹೊತ್ತಿ ಉರಿದ ತಾಜ್ ಎಕ್ಸ್ಪ್ರೆಸ್ ರೈಲಿನ ಮೂರು ಬೋಗಿಗಳು
Threat ಇವತ್ತೇ ನಿನಗೆ ಕೊನೆಯ ದಿನ; ರೇಣುಕಾಚಾರ್ಯ ಅವರಿಗೆ ವಿದೇಶದಿಂದ ಬೆದರಿಕೆ ಕರೆ
KMC Manipal; ಖ್ಯಾತ ಸಂತಾನೋತ್ಪತ್ತಿ ತಜ್ಞ ಡಾ. ಪ್ರತಾಪ್ ಪೂರ್ಣ ಸಮಯದ ಸಮಾಲೋಚನೆಗೆ ಲಭ್ಯ
Exit poll ಸಮೀಕ್ಷೆಗಳ ಬಗ್ಗೆ ನಂಬಿಕೆಯಿಲ್ಲ: ಸಚಿವ ಸತೀಶ್ ಜಾರಕಿಹೊಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.