ಬದಿಯಡ್ಕ ಕೆಳಗಿನ ಪೇಟೆ ಬಳಿ ಪ್ಲಾಸ್ಟಿಕ್‌ ಮಾಲಿನ್ಯ


Team Udayavani, Aug 16, 2017, 6:45 AM IST

15ksde15b.jpg

ಬದಿಯಡ್ಕ: ಭಾರತ ಸ್ವತಂತ್ರವಾಗಿ ಎಪ್ಪತ್ತು ವರ್ಷ ಗಳು ತುಂಬಿವೆ. ಪರರ ಆಳ್ವಿಕೆಯ ಕಪಿಮುಷ್ಟಿಗೆ ಸಿಲುಕಿ ಸರ್ವಸ್ವವನ್ನು ಕಳೆದುಕೊಂಡು ಬಡರಾಷ್ಟ್ರವಾಗಿ ನಲುಗಿದ ನಮ್ಮ ದೇಶವು ಇಂದು ಸಾಧನೆಯ ಪಥದಲ್ಲಿ ಮಹತ್ತರವಾದ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಾ ಜಗತ್ತೇ ಬೆರಗಾಗುವಂತೆ ಮಾಡಿದೆ. ವಿಜ್ಞಾನ, ತಂತ್ರ ಜ್ಞಾನಗಳು ಆಧುನಿಕತೆಯ ಉತ್ತುಂಗಕ್ಕೆ ದೇಶವನ್ನು ತಂದು ನಿಲ್ಲಿಸಿದೆ.

ಜನಸಂಖ್ಯೆ ಅತಿಯಾಗಿದ್ದರೂ ಅದೊಂದು ಸಮಸ್ಯೆ ಯಾಗದೆ ದೇಶದ ಸೊತ್ತಾಗಿ ಪರಿವರ್ತಿಸಿರುವುದು ನಮ್ಮ ಅಭಿವೃದ್ಧಿಗೊಂದು ಕಾರಣವೆನ್ನಬಹುದು. ಮಳೆಗಾಲ ಎಂದರೆ ಬೇಸಗೆಯ ಬಿಸಿ ಕಡಿಮೆಯಾಗಿ ಇಳೆ ಪ್ರಸನ್ನಳಾಗುವ ಸಮಯ. ಮರಗಿಡಗಳು ಚಿಗುರಿ ಪ್ರಕೃತಿ ಹಸಿ ರಾಗಿ ಕಂಗೊಳಿಸುವ ಕಾಲ. ಸೆಕೆ, ನೀರಿನ ಸಮಸ್ಯೆಗಳಿಂದ ಬೇಸತ್ತ ಮನಸ್ಸುಗಳು ಸಮಾಧಾನದ ನಿಟ್ಟುಸಿರು ಬಿಡುವ ಸಮಯ. ತಂಗಾಳಿಗೆ ತಲೆದೂಗುವ ನಿಸರ್ಗದ ರಮಣೀಯತೆ ಮಾತಿಗೆ ನಿಲುಕದ್ದು. ಆದರೆ ನಮ್ಮನ್ನು ಕಾಡುವ ಕೆಲವು ಸಾಮಾನ್ಯ ಸಂಗತಿಗಳನ್ನು ನಾವು ಅಲ್ಲಗಳೆಯುವಂತಿಲ್ಲ.

ಆರೋಗ್ಯ ಸಮಸ್ಯೆಗಳು
ಮಳೆಗಾಲ ಪ್ರಾರಂಭ ವಾದಂತೆ ಆರೋಗ್ಯದಲ್ಲಿ ಏರುಪೇರಾಗುವುದು ಸಾಮಾನ್ಯ. ಸಣ್ಣ ಶೀತ,ಜ್ವರದಿಂದ ಹಿಡಿದು ಮಲೇರಿಯಾ, ಡೆಂಗ್ಯೂ, ಆನೆಕಾಲು,  ಕಾಮಾಲೆಗಳಂತಹ ಮಾರಕ ರೋಗಗಳು ಈ ಸಮಯದಲ್ಲಿ ಜನರಲ್ಲಿ ಕಾಣಿಸಿಕೊಂಡು ಆತಂಕ ಪಡಿಸುತ್ತವೆ. ಆದುದರಿಂದ ಮಳೆಗಾಲದಲ್ಲಿ ತುಂಬಾ ಜಾಗೃತರಾಗಿರಬೇಕಾದ ಅಗತ್ಯವಿದೆ. ಆರೋಗ್ಯ ಕೇಂದ್ರ ದಿಂದ ನೀಡುವ ರೋಗ ಪ್ರತಿರೋಧಕ ಮಾತ್ರೆಗಳನ್ನು ಸ್ವೀಕರಿಸುವುದರೊಂದಿಗೆ ಅವರು ನೀಡುವ ಸಲಹೆಗಳನ್ನೂ ಪಾಲಿಸಲು ಮರೆಯಬಾರದು. ಅಂತೆಯೇ ನಮ್ಮ ಪರಿಸರ ವನ್ನು ಶುಚಿಯಾಗಿಡುವುದೂ ಅಷ್ಟೇ ಮುಖ್ಯ. ಪ್ಲಾಸ್ಟಿಕ್‌ ತ್ಯಾಜ್ಯದಿಂದುಂಟಾಗುವ ಸಮಸ್ಯೆಗಳು”ಸ್ವತ್ಛ ಭಾರತ್‌’ ಭಾರತೀಯರನ್ನು ಎಷ್ಟರಮಟ್ಟಿಗೆ ಎಚ್ಚರಗೊಳಿಸಿದೆ ಎನ್ನುವುದು ಇನ್ನೂ ಒಗಟಾಗಿದೆ. ಸ್ವತ್ಛತೆಯ ಮುಗಿಲು ಮುಟ್ಟಿದರೂ ಜನರು ಕಿವುಡಾದಂತೆ ನಟಿಸಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ನಂಥ ಅಪಾಯಕಾರಿ ತ್ಯಾಜ್ಯಗ ಳನ್ನು, ಕಸಾಯಿಖಾನೆಯ ತ್ಯಾಜ್ಯಗಳನ್ನು ಎಸೆದು ಇಡೀ ಪ್ರದೇಶವೇ ವಾಸನೆಯಿಂದ ತುಂಬುವಂತೆ ಮಾಡುತ್ತಿರುವುದಲ್ಲದೆ ಅನೇಕ ರೋಗಗಳಿಗೂ ಕಾರಣರಾಗುತ್ತಿರು ವುದು ವಾಸ್ತವ. ಯಥೇತ್ಛವಾಗಿ ಮಾರುಕಟ್ಟೆಯಲ್ಲಿ ಲಭಿಸುವ ತಂಪು ಪಾನೀಯಗಳು, ಲಕೋಟೆಯಲ್ಲಿ ತುಂಬಿದ ಬಿಸ್ಕತ್ತು, ಕರಿದ ತಿಂಡಿಗಳು, ಹಾಗೆಯೇ ಮನೆಗಳಿಗೆ ಅಗತ್ಯದ ಸಾಮಾನುಗಳನ್ನು ತುಂಬಿ ತಂದ ಪ್ಲಾಸ್ಟಿಕ್‌ ಚೀಲಗಳನ್ನು ಎಲ್ಲೆಂದರಲ್ಲಿ ಬಿಸಾಡುವುದು ನಮಗೆ ಅಭ್ಯಾಸ ವಾಗಿಬಿಟ್ಟಿದೆ. ಮಳೆ ಪ್ರಾರಂಭವಾದಾಗ ಇವುಗಳಲ್ಲಿ ನೀರು ತುಂಬಿನಿಂತು ನುಸಿಗಳು ಮೊಟ್ಟೆಯಿಡಲು ಅನುಕೂಲವಾಗುತ್ತದೆ. ಇದು ರೋಗಾಣುಗಳ ಉತ್ಪಾದನಾ ಕೇಂದ್ರವಾಗಿ ಬದಲಾಗು ತ್ತದೆ. ಅಂತೆಯೇ ಭೂಮಿಯಲ್ಲಿ ಸೇರಿಕೊಂಡ ಪ್ಲಾಸ್ಟಿಕ್‌ ಕವರುಗಳು ಭೂಮಿಯಲ್ಲಿ ನೀರಿಂಗುವುದನ್ನೂ ತಡೆಯು ವುದರಿಂದ ಅಂತರ್ಜಲ ಮಟ್ಟವು ಕುಸಿಯಲು ಕಾರಣವಾಗುತ್ತದೆ.

ಪರಿಸರ ಸ್ವತ್ಛವಾಗಿಡಬೇಕು
ಮನೆಯ ಸುತ್ತುಮುತ್ತು ಸ್ವತ್ಛವಾಗಿಡುವುದರಿಂದ ಮಳೆಗಾಲದಲ್ಲಿ ಬರುವ ಹಲವಾರು ಆರೋಗ್ಯ ಸಮಸ್ಯೆಗಳನ್ನು ತಡೆಯ ಬಹುದಾಗಿದೆ. ಸಾಮಾನ್ಯ ವಾಗಿ ಮನೆಯ ಸುತ್ತಮುತ್ತ ಕಂಡುಬರುವ ಗೆರಟೆ, ಆಟಿಕೆಗಳು, ಉಪಯೋಗ ಶೂನ್ಯವಾದ ಪ್ಲಾಸ್ಟಿಕ್‌ ಅಥವಾ ಇನ್ನಿತರ ಪಾತ್ರೆಗಳನ್ನು ಕವುಚಿ ಹಾಕಿದಲ್ಲಿ ನೀರು ತುಂಬಿನಿಂತು ರೋಗಾಣು ಉತ್ಪತ್ತಿ ಯಾಗುವುದನ್ನು ತಡೆಯಬಹುದು. ಇತರರಿಗೂ ಇಂತಹ ಉತ್ತಮ ಆರೋಗ್ಯಪೂರ್ಣ ಸಲಹೆಗಳನ್ನು ನೀಡಲು ಮರೆಯಬಾರದು.ಅಭಿವೃದ್ಧಿ ಹೊಂದಿದ ದೇಶಗಳ ನಡುವೆ ಒಂದಾಗಿ ನಿಲ್ಲಲು ಸಾಧ್ಯವಾದರೂ ನಮ್ಮ ದೇಶ ಇನ್ನೂ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ ಎನ್ನುವುದನ್ನು ಅಲ್ಲಗಳೆ ಯುವಂತಿಲ್ಲ. ನಿರುದ್ಯೋಗ, ಬಡತನ, ಬರಗಾಲಗಳು ಸವಾಲಾಗಿ ನಿಂತಿವೆ. ಆದರೂ ಅಭಿವೃದ್ಧಿಯ ಪಥದಲ್ಲಿ ನಮ್ಮ ಯಾತ್ರೆಯು ಬರದಿಂದ ಸಾಗುತ್ತಿದ್ದು ಸಂಪೂರ್ಣ ಅಭಿವೃದ್ಧಿಯನ್ನು ಕೆಲವೇ ವರ್ಷಗಳಲ್ಲಿ ಗಳಿಸಬಹುದು ಎಂಬುದು ಭಾರತೀಯರ ನಂಬಿಕೆ ಸ್ವತ್ಛ ಭಾರತ ಅಭಿಯಾನ ಭಾರತಾದ್ಯಂತ ನಡೆಯುತ್ತಿದ್ದರೂ ಕೆಲವೊಂದು ಮಾಲಿನ್ಯಗಳು ಬಹು ದೊಡ್ಡ ಆತಂಕ ಕಾರಿ ವಿಷಯವಾಗಿ ಸಮಾಜದ, ದೇಶದ ನೆಲ, ಜಲವನ್ನು ತನ್ನ ಕದಂಬ ಬಾಹುಗಳಲ್ಲಿ ಬಂಧಿಸಿರುವುದು ಸಾಮಾನ್ಯ ವಿಷಯವಲ್ಲ. ಅದುವೇ ಪ್ಲಾಸ್ಟಿಕ್‌ ಮಾಲಿನ್ಯಗಳು. 

ದೃಢ ಸಂಕಲ್ಪ ಅಗತ್ಯ
ಈ ಸಮಸ್ಯೆಗಳ ಜಾಲದಿಂದ ಹೊರಬರಲು ಪ್ರತಿಯೊಬ್ಬ ಭಾರತೀಯನೂ ಮನಸ್ಸು ಮಾಡಬೇಕು, ಸಮಸ್ಯೆಯ ಗಾಂಭೀರ್ಯದ ಅರಿವಿದ್ದರೂ ಜನರು ಎಚ್ಚೆತ್ತುಕೊಳ್ಳದಿರುವುದು ಕುಚೋದ್ಯವೇ ಸರಿ ಯಾವುದನ್ನು ಮಾಡಬಾರದೆಂದು ಅಂದುಕೊಳ್ಳುತ್ತೇವೋ ಅದನ್ನೇ ಮಾಡುವ ಮನಸ್ಸುಗಳು ಬದಲಾಗಿ ನಮ್ಮ ಭಾರತವನ್ನು ಸ್ವತ್ಛವಾಗಿಡ ಬೇಕೆಂಬ ದೃಢಸಂಕಲ್ಪ ಮೂಡಬೇಕಾದರೆ ಮನೆ ಹಾಗೂ ಮನಸ್ಸು ಮೊದಲು ಸ್ವತ್ಛವಾಗಬೇಕು. ಆಗ ಪ್ಲಾಸ್ಟಿಕ್‌ ಹಾಗೂ ಇತರ ಮಾಲಿನ್ಯಮುಕ್ತ ಭಾರತ ದೇಶದ, ರಾಮರಾಜ್ಯದ ಕನಸು ನನಸಾಗಲು ಹೆಚ್ಚು ಕಾಲ ಕಾಯಬೇಕಾಗಿಲ್ಲ.

ಪ್ರತಿಯೊಬ್ಬರೂ ಕೈಜೋಡಿಸಲಿ
ರಸ್ತೆಯ ಬದಿಯಲ್ಲಿ ಧಾರಾಳ ಪ್ಲಾಸ್ಟಿಕ್‌ ತ್ಯಾಜ್ಯಗಳು ತುಂಬಿದ್ದು ಆದಷ್ಟು ಬೇಗ ಅದನ್ನು ತೆರವುಗೊಳಿಸುವಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳು ಹಾಗೂ ಇನ್ನಿತರ ಪರಿಸರ ಪ್ರೇಮಿ ಸಂಘಟನೆಗಳು ಮುಂದಾಗಬೇಕಾಗಿದೆ. ಜತೆಯಲ್ಲಿ ಭಾರತೀಯರೆಲ್ಲರೂ ಕೈಜೋಡಿಸಿದಲ್ಲಿ ಸ್ವತ್ಛ ಆರೋಗ್ಯವಂತ ಭಾರತದ ಕನಸು ನನಸಾಗಲು ಹೆಚ್ಚು  ಸಮಯ ಬೇಕಾಗಿಲ್ಲ.

– ಅಖೀಲೇಶ್‌ ನಗುಮುಗಂ

ಟಾಪ್ ನ್ಯೂಸ್

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Electric shock: ಯುವಕನ ಸಾವು

Electric shock: ಯುವಕನ ಸಾವು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.