ವಿದ್ಯುನ್ಮಂಡಳಿಯಿಂದ ಸೌರಶಕ್ತಿ ಯೋಜನೆಗೆ ನಾಂದಿ


Team Udayavani, Jan 19, 2019, 12:30 AM IST

solor.jpg

ಕಾಸರಗೋಡು: “ನಾಡಿಗೆ ಬೆಳಕು-ಮನೆಗೆ ಲಾಭ’ ಎಂಬ ಗುರಿಯೊಂದಿಗೆ ಮನೆಯ ಮೇಲ್ಛಾವಣಿ ಯಲ್ಲಿ ಸೌರಶಕ್ತಿ ಯೋಜನೆಗೆ ವಿದ್ಯುತ್‌ ಖಾತೆ ನಾಂದಿಹಾಡುತ್ತಿದೆ. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಕೆ.ಎಸ್‌.ಇ.ಬಿ. ನೇತೃತ್ವದಲ್ಲಿ ರಾಜ್ಯದಲ್ಲಿ ಒಂದು ಸಾವಿರ ಮೆಗಾವ್ಯಾಟ್‌ ವಿದ್ಯುತನ್ನು ಸೌರಶಕ್ತಿ ಯೋಜನೆ ಮೂಲಕ ಉತ್ಪಾದಿಸುವುದು ಈ ಯೋಜನೆಯ ಉದ್ದೇಶ. 

ಇದರಲ್ಲಿ 30 ಮೆಗಾವ್ಯಾಟ್‌ (3 ಸಾವಿರ ಕಿಲೋವ್ಯಾಟ್‌) ಕಾಸರಗೋಡು ಜಿಲ್ಲೆಯಿಂದ ಉತ್ಪಾದನೆಗೊಳಿಸುವ ಗುರಿಯಿದೆ.
ಮನೆ, ಕೃಷಿ ಬಳಕೆದಾರರಿಗೆ 150 ಮೆಗಾವ್ಯಾಟ್‌, ಸರಕಾರದ ಕಟ್ಟಡಗಳಿಗೆ 100, ಮನೆಯೇತರ, ಸರಕಾರೇತರ ಸಂಸ್ಥೆಗಳಿಗೆ 250 ಮೆಗಾವ್ಯಾಟ್‌ ಎಂದು ವಿಂಗಡಿಸಿ ರಾಜ್ಯದಲ್ಲಿ ಒದಗಿಸಲಾಗುವುದು. ಪ್ರತಿ ಗ್ರಾಹಕನಿಗಾಗಿ ವಿವಿಧ ಯೋಜನೆಗಳೂ ಇವೆ.

ಮೊದಲ ಯೋಜನೆ 
ಫಲಾನುಭವಿಯ ಕಟ್ಟಡದ ಮೇಲ್ಛಾವಣಿಯಲ್ಲಿ ವಿದ್ಯುತ್‌ ಮಂಡಳಿಯ ವೆಚ್ಚದಲ್ಲಿ (ಉಚಿತವಾಗಿ)ಸೌರಶಕ್ತಿ ಪ್ಯಾನೆಲ್‌ ನಿಲಯವನ್ನು ಸ್ಥಾಪಿಸುವುದು ಮೊದಲ ಯೋಜನೆಯಾಗಿದೆ. ಈ ಮೂಲಕ ಉತ್ಪಾದಿಸುವ ವಿದ್ಯುತ್‌ನ ಶೇ.10 ಕಟ್ಟಡದ ಮಾಲಕನಿಗೆ ಪೂರೈಕೆಯಾಗಲಿದೆ. ಜತೆಗೆ ಉತ್ಪಾದಿಸುವ ವಿದ್ಯುತ್‌ ದೀರ್ಘಾವ ಧಿಗೆ ಬಳಸುವ ನಿಟ್ಟಿನಲ್ಲಿ ನಿಗದಿತ ಶುಲ್ಕದಲ್ಲಿ ಕಟ್ಟಡದ   ಮಾಲಕನಿಗೆ ಒದಗಿಸಲಾಗುವುದು. ಇಲ್ಲಿನ ಸೌರ ನಿಲಯದ ಪರಿಪಾಲನೆಯ ಹೊಣೆಯನ್ನು 25 ವರ್ಷಗಳ ವರೆಗೆ ಕೆ.ಎಸ್‌.ಇ.ಬಿ.ವಹಿಸಿಕೊಳ್ಳಲಿದೆ.

ಎರಡನೇ ಯೋಜನೆ 
ಎರಡನೇ ಯೋಜನೆಯ ರೂಪದಲ್ಲಿ ಕಟ್ಟಡದ ಮೇಲ್ಛಾವಣಿಯಲ್ಲಿ ಗ್ರಾಹಕನ ವೆಚ್ಚದಲ್ಲಿ ಸೌರಶಕ್ತಿ ನಿಲಯ ಸ್ಥಾಪಿಸಿ ಕೊಡಲಾಗುವುದು. ಇಲ್ಲಿ ಉತ್ಪಾದಿಸಲಾಗುವ ವಿದ್ಯುತ್ತನ್ನು ಭಾಗಶ: ಅಥವಾ ಪೂರ್ಣರೂಪದಲ್ಲಿ ವಿದ್ಯುತ್‌ ಮಂಡಳಿ ನಿಗದಿತ ರೂಪದಲ್ಲಿ ಖರೀದಿ ಮಾಡಲಿದೆ. ಗ್ರಾಹಕ ಅಗತ್ಯವಿದ್ದರೆ ಈ ವಿದ್ಯುತ್ತನ್ನು ಬಳಸಲೂಬಹುದು.

ಮಾಡಿನಲ್ಲಿ ಯಾ ಜಾಗದಲ್ಲಿ 
ಗ್ರಾಹಕನ ಮನೆ ಮಾಡಿನಲ್ಲಿ ಯಾ ಜಾಗದಲ್ಲಿ ಸೌರಶಕ್ತಿ ನಿಲಯವನ್ನು ಸ್ಥಾಪಿಸಿ ನೀಡಲಾಗುವುದು. ಇದಕ್ಕೆ ಕನಿಷ್ಠ 200 ಚದರ ಅಡಿ ಜಾಗದ ಅಗತ್ಯವಿದೆ.ಇಲ್ಲಿ 2 ಕಿಲೋವ್ಯಾಟ್‌ ವಿದ್ಯುತ್‌ ಉತ್ಪಾದನೆ ಸಾಧ್ಯ. 200 ಚದರ ಅಡಿ ಸೋಲಾರ್‌ ಪ್ಯಾನೆಲ್‌ ಸ್ಥಾಪನೆಗೆ ಕೇವಲ 1.30 ಲಕ್ಷ ರೂ. ವನ್ನು ಕೆ.ಎಸ್‌.ಇ.ಬಿ. ಪಡೆಯಲಿದೆ. 

ಜನರ ಬಳಿಗೆ ಯೋಜನೆ 
ಜನತೆಯ ಬಳಿಗೆ ಈ ಯೋಜನೆ ತಲಪಿಸುವ ನಿಟ್ಟಿನಲ್ಲಿ ಕೆ.ಎಸ್‌. ಇ.ಬಿ.ಎಲ್‌. ಪ್ರತಿ ಸಬ್‌ ಡಿವಿಜನ್‌ ಮಟ್ಟದಲ್ಲಿ ತಲಾ ಇಬ್ಬರು ಸೋಲಾರ್‌ ಎಕ್ಸಿಕ್ಯೂಟಿವ್‌ಗಳನ್ನು ನೇಮಿಸಿದೆ. ಜಿಲ್ಲೆಯಲ್ಲಿ ಈವರೆಗೆ 2 ಸಾವಿರಕ್ಕೂ ಅ ಧಿಕ ಮಂದಿ ಮನೆಯ ಮೇಲ್ಛಾವಣಿ ಸೌರಶಕ್ತಿ ಯೋಜನೆಯಲ್ಲಿ ನೋಂದಣಿ ನಡೆಸಿದ್ದಾರೆ. ರಾಜ್ಯದಲ್ಲಿ ಅತ್ಯಧಿ ಕ ನೋಂದಣಿ ನಡೆದಿರುವ ಪ್ರದೇಶ ವಯನಾಡ್‌ ಜಿಲ್ಲೆಯ ಕಲ್ಪಟ್ಟ ಆಗಿದೆ. ಹೆಚ್ಚುವರಿ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 0471 2555544,1912

ಮಾಡಬೇಕಾದುದೇನು? 
ಮನೆಯ ಮೇಲ್ಛಾವಣಿಯಲ್ಲಿ ಸೌರಶಕ್ತಿ ಯೋಜನೆ ಜಾರಿಗೊಳಿಸಲು ಆಸಕ್ತರು ಜ.31ರ ಮುಂಚಿತವಾಗಿ ಕೆ.ಎಸ್‌.ಇ.ಬಿ.ಯಲ್ಲಿ ನೋಂದಣಿ ನಡೆಸಬೇಕು. ಸರಳವಾದ 5 ಹಂತಗಳಲ್ಲಿ ನೋಂದಣಿ ನಡೆಸಬಹುದಾಗಿದೆ. ಮನೆಗಳಲ್ಲಿ/ಸಂಸ್ಥೆಗಳಲ್ಲಿ ಎಪ್ರಿಲ್‌ ತಿಂಗಳ ವರೆಗೆ ಇಲಾಖೆಯ ಸಿಬಂದಿ ಈ ಸಂಬಂಧ ಆಗಮಿಸಿ ತಪಾಸಣೆ ನಡೆಸಲಿದ್ದಾರೆ. ನಂತರ 2019ನೇ ಇಸವಿಯ ಮಧ್ಯದಲ್ಲಿ ಸೋಲಾರ್‌ ಪ್ಯಾನೆಲ್‌ಗ‌ಳ ಸ್ಥಾಪನೆ ನಡೆಯಲಿದೆ. 
 

ಟಾಪ್ ನ್ಯೂಸ್

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.