ಪಿಂಚಣಿಗೆ ಆಧಾರ್‌ ಲಿಂಕ್‌: ಕರಾವಳಿಯಲ್ಲಿ 6,400 ಮಂದಿ ಬಾಕಿ!

ಎನ್‌ಪಿಸಿಐ ಮ್ಯಾಪಿಂಗ್‌' ಇಲ್ಲವಾದರೆ ಪಿಂಚಣಿ ಸ್ಥಗಿತ

Team Udayavani, Jul 13, 2023, 7:00 AM IST

1-dadas

ಮಂಗಳೂರು: ಸಾಮಾಜಿಕ ಭದ್ರತ ಯೋಜನೆ ಯಡಿ ವಿವಿಧ ಪಿಂಚಣಿಗಳನ್ನು ಪಡೆಯುತ್ತಿರುವವರು ಕೂಡಲೇ ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌ ಮಾಡಿಸಿ “ಎನ್‌ಪಿಸಿಐ ಮ್ಯಾಪಿಂಗ್‌’ ಮಾಡಬೇಕು; ಇಲ್ಲವಾದರೆ ಪಿಂಚಣಿ ಸ್ಥಗಿತವಾಗಬಹುದು!

ಎಲ್ಲ ಪಿಂಚಣಿ ಫಲಾನುಭವಿಗಳನ್ನು ನಿಖರವಾಗಿ ಗುರುತಿಸಲು ಹಾಗೂ ಸರಕಾರದ ಯಾವುದೇ ಸೌಲಭ್ಯ ಪಡೆ ಯಲು ಆಧಾರ್‌ನೊಂದಿಗೆ ಜೋಡಿಸಿ ನೇರ ಹಣ ಸಂದಾಯ ಯೋಜನೆ ಜಾರಿಗಾಗಿ “ಎನ್‌ಪಿಸಿಐ ಮ್ಯಾಪಿಂಗ್‌’ ಕಡ್ಡಾಯ. ಈಗಾಗಲೇ ಬಹು ತೇಕ ಮಂದಿ ಇದನ್ನು ಮಾಡಿದ್ದಾರೆ. ಆದರೆ ಇನ್ನೂ ಸಾವಿರಾರು ಮಂದಿಯ ಮ್ಯಾಪಿಂಗ್‌ ಬಾಕಿ ಇದೆ. ಈ ಪೈಕಿ ಬಹು ಮಂದಿಗೆ ಪಿಂಚಣಿ ಸ್ಥಗಿತವಾಗಿದೆ.

ದಕ್ಷಿಣ ಕನ್ನಡದಲ್ಲಿ 1,78,630 ಮಂದಿ ವಿವಿಧ ಪಿಂಚಣಿ ಪಡೆಯುತ್ತಿದ್ದಾರೆ. ಇದರಲ್ಲಿ ಸುಮಾರು 4,600 ಮಂದಿಯ ಎನ್‌ಪಿಸಿಐ ಮ್ಯಾಪಿಂಗ್‌ ಬಾಕಿ ಇದೆ. ಮ್ಯಾಪಿಂಗ್‌ಗೆ ಜೂನ್‌ ಅಂತ್ಯದ ಗಡುವು ನೀಡಲಾಗಿತ್ತು. ಆದರೆ ಇನ್ನೂ ಹಲವರು ದಾಖಲೆ ನೀಡದ ಕಾರಣ ಅಂತಿಮ ದಿನಾಂಕ ವಿಸ್ತರಣೆ ಆಗಿದೆ.

ಉಡುಪಿ ಜಿಲ್ಲೆಯಲ್ಲಿ 1,48,216 ಮಂದಿ ಪಿಂಚಣಿದಾರರಿದ್ದಾರೆ. ಇವರಲ್ಲಿ 14,155 ಮಂದಿಯ ಎನ್‌ಪಿಸಿಐ ಮ್ಯಾಪಿಂಗ್‌ ಬಾಕಿ ಇತ್ತು. ಈ ಪೈಕಿ ಇಲ್ಲಿಯ ವರೆಗೆ 12,350 ಮಂದಿ ಮಾಡಿದ್ದಾರೆ. ಇನ್ನು 1,805 ಮಂದಿ ಮ್ಯಾಪಿಂಗ್‌ ಬಾಕಿ ಇದೆ.

ಏನಿದು ಯೋಜನೆ?
ಕೇಂದ್ರ ಸರಕಾರದ ಸೂಚನೆಯ ಅನುಸಾರ ನೇರ ಹಣ ಸಂದಾಯ ಯೋಜನೆಯನ್ನು ಶತ ಪ್ರತಿಶತ ಜಾರಿ  ಗೊಳಿಸುವ ಹಿನ್ನೆಲೆಯಲ್ಲಿ ಸಾಮಾಜಿಕ ಭದ್ರತೆ ಹಾಗೂ ಪಿಂಚಣಿ ಯೋಜನೆಯಡಿ ಪಿಂಚಣಿ ಪಡೆ ಯುತ್ತಿರುವ ಎಲ್ಲ ಫಲಾನು ಭವಿಗಳು ಆಧಾರ್‌ ಜೋಡಣೆ ಮಾಡಲು ಕಳೆದ ವರ್ಷ ಸೆ.15ರ ಗಡುವು ನೀಡಲಾಗಿತ್ತು. ಈ ಪ್ರಕ್ರಿಯೆ ಪೂರ್ಣಗೊಳಿಸಲು ಎಲ್ಲ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿತ್ತು.

ಪಿಂಚಣಿ ಮರು ಚಾಲನೆ ಅವಕಾಶ ಸೆ. 15ರ ಬಳಿಕ ಫಲಾನುಭವಿಗಳು ತಮ್ಮ ಆಧಾರ್‌ ಹಾಗೂ ಬ್ಯಾಂಕ್‌/ಅಂಚೆ ಖಾತೆ ವಿವರಗಳನ್ನು ಸಲ್ಲಿಸಿದ ಅನಂತರ ಸಂಬಂಧಪಟ್ಟ ತಹ ಶೀಲ್ದಾರರು ಪಿಂಚಣಿ ಮರುಚಾಲನೆಗೊಳಿಸಲು ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ತಾತ್ಕಾಲಿಕವಾಗಿ ಸ್ಥಗಿತಗೊಂಡ ಪ್ರಕರಣಗಳನ್ನು ಮರುಚಾಲನೆ ಗೊಳಿಸಿದ ಅನಂತರ ಪಾವತಿ ಬಾಕಿ ಇರುವ ಪಿಂಚಣಿಯನ್ನು ಪಾವತಿಸಲಾಗುತ್ತದೆ.

ಪಿಂಚಣಿ ಲಭ್ಯವಾಗದ ಫಲಾನುಭವಿ ಅಥವಾ ಆಧಾರ್‌ ಸೀಡಿಂಗ್‌ ಆಗದಿದ್ದರೆ ಅಂಥವರು ಪಿಂಚಣಿ ಪಡೆಯುವ ಬ್ಯಾಂಕ್‌ ಅಥವಾ ಅಂಚೆ ಕಚೇರಿಗೆ ತೆರಳಿ ಆಧಾರ್‌ ಕಾರ್ಡ್‌ ಹಾಗೂ ಬ್ಯಾಂಕ್‌ ಪಾಸ್‌ ಪುಸ್ತಕವನ್ನು ನೀಡಿ ಎನ್‌ಪಿಸಿಐ ಮ್ಯಾಪಿಂಗ್‌ ಮಾಡಬೇಕು. ಪಿಂಚಣಿ ಸ್ಥಗಿತಗೊಂಡವರ ಮನೆಗೆ ಗ್ರಾಮ ಲೆಕ್ಕಾಧಿಕಾರಿ, ಗ್ರಾಮ ಸಹಾಯಕರು ಈಗಾಗಲೇ ಭೇಟಿ ನೀಡುತ್ತಿದ್ದಾರೆ. ಅವರಲ್ಲಿಯೂ ಈ ಬಗ್ಗೆ ಮಾಹಿತಿ ಪಡೆಯಬಹುದು. ಅಂಚೆ ಕಚೇರಿ, ಬ್ಯಾಂಕ್‌ನಲ್ಲಿಯೂ ಇದರ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. – ಬೋಪಯ್ಯ, ಸಹಾಯಕ ನಿರ್ದೇಶಕರು, ಸಾಮಾಜಿಕ ಭದ್ರತ ಯೋಜನೆ, ದ.ಕ. ಜಿಲ್ಲೆ – ರವಿಶಂಕರ್‌, ಸಹಾಯಕ ನಿರ್ದೇಶಕರು (ಪ್ರಭಾರ), ಸಾಮಾಜಿಕ ಭದ್ರತ ಯೋಜನೆ, ಉಡುಪಿ ಜಿಲ್ಲೆ

ಗ್ರಾಮವಾರು ಪರಿಶೀಲನೆ
ಆಧಾರ್‌ ಲಿಂಕ್‌ ಮಾಡದವರ ಗ್ರಾಮವಾರು ಪಟ್ಟಿಯನ್ನು ಗ್ರಾಮ ಲೆಕ್ಕಾಧಿಕಾರಿಗಳಿಗೆ ಹಂಚಿಕೆ ಮಾಡಲಾಗಿದೆ. ಅವರು ಪಟ್ಟಿಯ ಅನ್ವಯ ಆಧಾರ್‌ ನಂಬರ್‌, ಒಪ್ಪಿಗೆ ಪತ್ರ ಹಾಗೂ ಪಾಸ್‌ ಬುಕ್‌ ಪ್ರತಿಯನ್ನು ಪಡೆಯುತ್ತಿದ್ದಾರೆ. ಫಲಾನುಭವಿಗಳಿಂದ ಪಡೆದ ಒಂದು ಪ್ರತಿಯನ್ನು ಉಪತಹಶೀಲ್ದಾರರಿಗೆ ಆಧಾರ್‌ ಸೀಡಿಂಗ್‌ ಮಾಡಲು ನೀಡಲಾಗುತ್ತದೆ. ಇನ್ನೊಂದು ಪ್ರತಿಯನ್ನು ಬ್ಯಾಂಕ್‌ ಶಾಖೆವಾರು ವಿಭಜಿಸಿ ಸಂಬಂ«  ‌ಪಟ್ಟ ಬ್ಯಾಂಕ್‌ ಶಾಖೆಗೆ ಕಳುಹಿಸ ಲಾಗು ತ್ತಿದೆ. ಬ್ಯಾಂಕ್‌ ಶಾಖೆ ವ್ಯವಸ್ಥಾಪಕರಿಂದ ಪ್ರತೀ ದಿನ ಎನ್‌ಪಿಸಿಐ ಮ್ಯಾಪಿಂಗ್‌ ನಡೆಸಲಾಗುತ್ತಿದೆ. ಫಲಾನುಭವಿಯು ಹಾಸಿಗೆ ಹಿಡಿದಿದ್ದಲ್ಲಿ ಹಾಗೂ ಬಯೋಮೆಟ್ರಿಕ್‌ ಸಾಧ್ಯವಾಗದಿರುವ “ವಿರಳ ಪ್ರಕರಣ’ದಡಿಯಲ್ಲಿ ಆಧಾರ್‌ ಸೀಡಿಂಗ್‌ ಮಾಡಿ ಅಂಚೆ ಇಲಾಖೆಯ ಮೂಲಕ ಎನ್‌ಪಿಸಿಐ ಮ್ಯಾಪಿಂಗ್‌ ಮಾಡಿಸಲಾಗುತ್ತಿದೆ.

 ದಿನೇಶ್‌ ಇರಾ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.