ಬಿಷಪ್ಸ್‌ ಹೌಸ್‌ನಲ್ಲಿ ಅಕ್ಷಯ ಧಾಮ


Team Udayavani, Apr 2, 2018, 7:45 AM IST

14.jpg

ಮಂಗಳೂರು: ಕೊಡಿಯಾಲ ಬೈಲ್‌ನ ಬಿಷಪ್ಸ್‌ ಹೌಸ್‌ ಆವರಣದಲ್ಲಿ ಬಡವರಿಗಾಗಿ ಮತ್ತು ದೂರದ ಊರುಗಳಿಂದ ಬರುವ ಯಾತ್ರಿಕರಿಗಾಗಿ ಉಚಿತ ಆಹಾರ ಮತ್ತು ವಸ್ತ್ರ ಒದಗಿಸಲು ಫ್ರಿಜ್‌ ಮತ್ತು ಕಪಾಟು ವ್ಯವಸ್ಥೆಯನ್ನು ಮಾಡಲಾಗಿದ್ದು, ಅದನ್ನು ಸಾಂಕೇತಿಕವಾಗಿ ಮಂಗಳೂರು ಧರ್ಮ ಪ್ರಾಂತದ ಬಿಷಪ್‌ ರೈ| ರೆ| ಡಾ| ಅಲೋಶಿಯಸ್‌ ಪಾವ್ಲ್ ಡಿ’ಸೋಜಾ ಅವರು ರವಿವಾರ ಉದ್ಘಾಟಿಸಿದರು.

ಬಿಷಪ್ಸ್‌ ಹೌಸ್‌ ಆವರಣದಲ್ಲಿ ಈಗಾಗಲೇ ಸಾರ್ವಜನಿಕರಿಗಾಗಿ ಉಚಿತ ಕುಡಿಯುವ ನೀರಿನ ವ್ಯವಸ್ಥೆಯನ್ನು 2015ರಲ್ಲಿ ಆರಂಭಿಸಲಾಗಿದ್ದು, ಅದು ಯಶಸ್ವಿಯಾಗಿ ಮುಂದುವರಿದಿದೆ. 2018ರಿಂದ ಆಹಾರ ಮತ್ತು ಬಟ್ಟೆಗಳನ್ನು ಒದಗಿಸಲು ವ್ಯವಸ್ಥೆ ಮಾಡುವುದಾಗಿ 2017ರ ಡಿ. 23ರಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಲಾಗಿತ್ತು. ಈ ಸೌಲಭ್ಯವನ್ನು ರವಿವಾರ ಈಸ್ಟರ್‌ ಹಬ್ಬದ ಕೊಡುಗೆಯಾಗಿ ಆರಂಭಿಸಲಾಗಿದೆ. ಆದರೆ ಈಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮೇ 15ರ ಬಳಿಕ ಈ ವ್ಯವಸ್ಥೆಯನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು ಯೋಜನೆಯನ್ನು ಉದ್ಘಾಟಿಸಿ ಆಶೀರ್ವಚನಗೈದ ಬಿಷಪ್‌ ಪಾವ್ಲ್ ಡಿ’ಸೋಜಾ ತಿಳಿಸಿದರು. 

ನೀರು, ಆಹಾರ, ಬಟ್ಟೆ ಮತ್ತು ಆಶ್ರಯ- ಇವು ನಾಗರಿಕ ಬದುಕಿನ ಮೂಲ ಅಗತ್ಯಗಳು. ಬಡವರಿಗೆ ಮನೆ ಕಟ್ಟಿಸಿ ಕೊಡುವ ಯೋಜನೆಯನ್ನು ಧರ್ಮ ಪ್ರಾಂತದ ವತಿಯಿಂದ ಈಗಾಗಲೇ ನಡೆಸಲಾಗುತ್ತಿದೆ. 2012 ರಲ್ಲಿ 161 ಮನೆಗಳನ್ನು ಕಟ್ಟಿಸಲು ನೆರವು ಹಾಗೂ 2015ರಲ್ಲಿ 24 ಮನೆಗಳನ್ನು ಬಡವರಿಗೆ ಕಟ್ಟಿಸಿಕೊಡಲಾಗಿದೆ. ಆ ಬಳಿಕ ಬಿಷಪ್ಸ್‌ ಹೌಸ್‌ ಆವರಣದಲ್ಲಿ ಸಾರ್ವ  ಜನಿಕ ಕುಡಿಯುವ ನೀರಿನ ಸೌಲಭ್ಯ ಹಾಗೂ ಇದೀಗ ಆಹಾರ ಮತ್ತು ಬಟ್ಟೆ ಒದಗಿಸುವ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ಯೇಸು ಕ್ರಿಸ್ತರಿಗೆ ಬಡವರು, ಕಷ್ಟ ದಲ್ಲಿರುವವರು, ರೋಗಿಗಳು ಹತ್ತಿರ ವಾಗಿದ್ದು, ಅವರಿಗೆ ಸೇವೆ ಒದಗಿಸು ತ್ತಿದ್ದರು. ಈ ಸೇವಾ ಕೈಂಕರ್ಯವನ್ನು ಮುಂದುವರಿಸಿಕೊಂಡು ಹೋಗು ವಂತೆ ಆದೇಶ ನೀಡಿದ್ದರು. ಅದನ್ನು ಕ್ರೈಸ್ತ ಧರ್ಮಸಭೆ ಮುಂದುವರಿಸಿಕೊಂಡು ಬರುತ್ತಿದೆ ಎಂದು ವಿವರಿಸಿದರು.

ಅಕ್ಷಯ ಧಾಮ
ಈ ವ್ಯವಸ್ಥೆಯನ್ನು “ಅಕ್ಷಯ ಧಾಮ’ ಎಂದು ಹೆಸರಿಸಲಾಗಿದೆ. ಬಿಷಪ್ಸ್‌ ಹೌಸ್‌ ಆವರಣದಲ್ಲಿರುವ ಪ್ರಾರ್ಥನಾ ಮಂದಿರದ ಮುಂಭಾಗದ ಮೂಲೆ ಯಲ್ಲಿ ಆಹಾರ ಇರಿಸುವ ಫ್ರಿಜ್‌ ಮತ್ತು ಬಟ್ಟೆ ಇರಿಸಲು ಕಪಾಟು ವ್ಯವಸ್ಥೆ ಮಾಡಲಾಗಿದೆ. ದಾನ ಮಾಡಲು ಬಯಸು ವವರು ಕೂಡ ಇದರಲ್ಲಿ ಆಹಾರ ಮತ್ತು ಫಲವಸ್ತು ಹಾಗೂ ಬಟ್ಟೆಗಳನ್ನು ಇಡಬಹುದಾಗಿದೆ. ಆದರೆ ದಾನ ಮಾಡುವುದಕ್ಕಾಗಿಯೇ ತಯಾರಿಸಿದ ತಾಜಾ ಆಹಾರವನ್ನು ಹಾಗೂ ಹೊಸ ಬಟ್ಟೆಗಳನ್ನು ಮಾತ್ರ ಇರಿಸಬೇಕೆಂಬುದು ಧರ್ಮಪ್ರಾಂತದ ಉದ್ದೇಶವಾಗಿದೆ.

ಧರ್ಮಪ್ರಾಂತದ ಪ್ರಧಾನ ಗುರು ವಂ| ಡೆನ್ನಿಸ್‌ ಮೊರಾಸ್‌ ಪ್ರಭು, ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾರ್ಸೆಲ್‌ ಮೊಂತೇರೊ, ಫಾದರ್‌ ಮುಲ್ಲರ್‌ ಸಂಸ್ಥೆಯ ನಿರ್ದೇಶಕ ವಂ| ರಿಚಾರ್ಡ್‌ ಕುವೆಲ್ಲೊ, ಮೆಡಿಕಲ್‌ ಕಾಲೇಜು ಆಸ್ಪತ್ರೆಯ ಆಡಳಿತಾಧಿಕಾರಿ ಗಳಾದ ವಂ| ರವಿ ರುಡಾಲ್ಫ್ ಡೆ’ಸಾ, ಮೆಡಿಕಲ್‌ ಕಾಲೇಜಿನ ಆಡಳಿತಾಧಿಕಾರಿ ವಂ| ಅಜಿತ್‌ ಮಿನೇಜಸ್‌, ಸಹಾಯಕ ಆಡಳಿತಾಧಿಕಾರಿ ವಂ| ಜೀವನ್‌ ಸಿಕ್ವೇರಾ, ಮಾಧ್ಯಮ ಸಲಹೆಗಾರ  ಇ. ಫೆರ್ನಾಂಡಿಸ್‌ ಮತ್ತಿತರರು ಉಪಸ್ಥಿತರಿದ್ದರು. 

ಫ್ರಿಜ್‌ ಮತ್ತು ಕಪಾಟು ವ್ಯವಸ್ಥೆ ಮಾಡುವಲ್ಲಿ ಸಹಕರಿಸಿದ ರೇಮಂಡ್‌ ಡಿ’ಕುನ್ಹಾ ಅವರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು.
ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕ ಅಧಿಕಾರಿ ವಂ| ವಿಲಿಯಂ ಮಿನೇಜಸ್‌ ಸ್ವಾಗತಿಸಿದರು. ಪಾಲನಾ ಪರಿಷತ್‌ನ ಕಾರ್ಯದರ್ಶಿ ಎಂ.ಪಿ. ನೊರೊನ್ಹಾ  ವಂದಿಸಿದರು.

ಟಾಪ್ ನ್ಯೂಸ್

Exam

SSLC  ಪರೀಕ್ಷೆ-2:  ನೋಂದಣಿ ದಿನಾಂಕ ವಿಸ್ತರಣೆ

gold-and-silver

Silver ಕೆ.ಜಿ ಗೆ 1,800 ರೂ. ಏರಿಕೆ: ಸಾರ್ವಕಾಲಿಕ ದಾಖಲೆ

IT WORK

Microsoft ಚಿಂತನೆ : ಚೀನದಿಂದ 800 ನೌಕರರ‌ ವರ್ಗ

voter

EC; ಮೊದಲ 4 ಹಂತದ ಚುನಾವಣೆಯಲ್ಲಿ ಶೇ.67 ಮತದಾನ

kejriwal 2

ಜೂ.4ರ ಬಳಿಕ ಐಎನ್‌ಡಿಐಎ ಸರಕಾರ: ಅರವಿಂದ ಕೇಜ್ರಿವಾಲ್‌

Amit Shah

ತುಸು ಬಿಸಿ ಹೆಚ್ಚಾದರೆ ರಾಹುಲ್‌ ಬ್ಯಾಂಕಾಕ್‌ಗೆ ಓಟ: ಅಮಿತ್‌ ಶಾ

congress

Congress ತಮಿಳುನಾಡಿನಲ್ಲಿ ಸ್ವಂತ ಬಲದಿಂದ ಸರಕಾರ ರಚನೆ ಯಾವಾಗ?: ಕೆ.ಸೆಲ್ವ ಪೆರುಂತಗೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Theft Case: ಮನೆಯಿಂದ ಚಿನ್ನಾಭರಣ ಕಳವು

Theft Case: ಮನೆಯಿಂದ ಚಿನ್ನಾಭರಣ ಕಳವು

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

“ಫೆಡೆಕ್ಸ್‌ ಪಾರ್ಸೆಲ್‌’ ಹೆಸರಲ್ಲಿ ಸೈಬರ್‌ ವಂಚಕರಿಂದ “ಗಾಳ’

“ಫೆಡೆಕ್ಸ್‌ ಪಾರ್ಸೆಲ್‌’ ಹೆಸರಲ್ಲಿ ಸೈಬರ್‌ ವಂಚಕರಿಂದ “ಗಾಳ’

ಆಧಾರ್‌-ಪಹಣಿ ಸೀಡಿಂಗ್‌ ಮಂದಗತಿ; ಕಡ್ಡಾಯವಲ್ಲದ ಕಾರಣ ರೈತರ ನಿರಾಸಕ್ತಿ!

ಆಧಾರ್‌-ಪಹಣಿ ಸೀಡಿಂಗ್‌ ಮಂದಗತಿ; ಕಡ್ಡಾಯವಲ್ಲದ ಕಾರಣ ರೈತರ ನಿರಾಸಕ್ತಿ!

ಹೆಚ್ಚುತ್ತಿರುವ ಸೈಬರ್‌ ಅಪರಾಧ; ಮಂಗಳೂರು ಸೈಬರ್‌ ಠಾಣೆಗೆ”ಪ್ರಭಾರಿ’ಗಳೇ ಉಸ್ತುವಾರಿ!

ಹೆಚ್ಚುತ್ತಿರುವ ಸೈಬರ್‌ ಅಪರಾಧ; ಮಂಗಳೂರು ಸೈಬರ್‌ ಠಾಣೆಗೆ”ಪ್ರಭಾರಿ’ಗಳೇ ಉಸ್ತುವಾರಿ!

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Exam

SSLC  ಪರೀಕ್ಷೆ-2:  ನೋಂದಣಿ ದಿನಾಂಕ ವಿಸ್ತರಣೆ

1-wqeqewqe

Traffic ದಂಡವನ್ನು ತಪ್ಪಿಸಲು ಹೆಲ್ಮೆಟ್‌ ಧರಿಸಿ ಕಾರು ಚಾಲನೆ!

gold-and-silver

Silver ಕೆ.ಜಿ ಗೆ 1,800 ರೂ. ಏರಿಕೆ: ಸಾರ್ವಕಾಲಿಕ ದಾಖಲೆ

rain

Kerala; ಮೂರ್ನಾಲ್ಕು ದಿನ ಭಾರಿ ಮಳೆ: ಹವಾಮಾನ ಇಲಾಖೆ

marriage 2

Wedding gifts ಪಟ್ಟಿ ಇರಿಸಿಕೊಳ್ಳುವುದು ಕಡ್ಡಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.