ಎಲ್ಲ ಕ್ರೀಡೆಗೂ ಅಕಾಡೆಮಿ ಸ್ಥಾಪನೆಯಾಗಲಿ: ಚೇತನ್
Team Udayavani, Feb 19, 2018, 3:47 PM IST
ಮಹಾನಗರ:ಕ್ರೀಡೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಪ್ರತಿಯೊಂದು ಕ್ರೀಡೆಗೂ ಅಕಾಡೆಮಿಗಳು ಸ್ಥಾಪನೆಯಾಗಬೇಕು ಎಂದು ಕ್ರೀಡಾ ಭಾರತಿ ಅಖಿಲ ಭಾರತ ಗೌರವಾಧ್ಯಕ್ಷ, ಉತ್ತರಪ್ರದೇಶದ ಕ್ರೀಡಾ ಸಚಿವ ಚೇತನ್ ಚೌಹಾಣ್ ತಿಳಿಸಿದರು.
ನಗರದ ಸಂಘನಿಕೇತನದಲ್ಲಿ ಕ್ರೀಡಾ ಭಾರತಿ ಆಯೋಜಿಸಿದ ಭಾರತಿಯ ನಿಯಾಮಕ ಮಂಡಳಿ ಹಾಗೂ ಕಾರ್ಯಕಾರಿಣಿ ಬೈಠೆಕ್ಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಿಂದಲೇ ಕ್ರೀಡೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಈ ನಿಟ್ಟಿನಲ್ಲಿ ಮುಂದಿನ ಐದು ವರ್ಷಗಳಲ್ಲಿ ಎಲ್ಲ ಗ್ರಾಮಗಳಲ್ಲೂ ಕ್ರೀಡಾ ಭಾರತಿಯ ಸದಸ್ಯರಿರಬೇಕು ಎಂದರು.
ಉತ್ತರಪ್ರದೇಶದಲ್ಲಿ 5 ವರ್ಷಗಳ ಹಿಂದಿನಿಂದಲೂ ಕ್ರೀಡಾ ಕೋಟ ರದ್ದಾಗಿತ್ತು. ನಾನು ಕ್ರೀಡಾ ಸಚಿವನಾದ ಮೇಲೆ ಪುನಃ ಪ್ರಾರಂಭಿಸಿದೆ. ಒಲಿಂಪಿಂಕ್ ವಿಜೇತರಿಗೆ ಸರಕಾರಗಳು ಪುರಸ್ಕಾರ ನೀಡುವ ಮೂಲಕ ಅವರನ್ನು ಪ್ರೋತ್ಸಾಹಿಸಬೇಕಿದೆ ಎಂದರು.
ಸಂಸ್ಕೃತಿ ಉಳಿಸಿ
ಕ್ರೀಡಾ ಭಾರತಿ ಅಖಿ ಲ ಭಾರತೀಯ ಸಂಘಟನ ಕಾರ್ಯದರ್ಶಿ ರಾಜ್ ಚೌಧರಿ ಮಾತನಾಡಿ, ವರ್ಷದಲ್ಲಿ ಒಂದು ದಿನ ಗ್ರಾಮೀಣ ಪ್ರದೇಶದಲ್ಲಿ ಕ್ರೀಡಾ ದಿನವನ್ನಾಗಿ ಆಚರಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಕ್ರೀಡೆಯನ್ನು ಬೆಳೆಸುವುದರ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಬೇಕಿದೆ. ಸಮಾಜವನ್ನು ಸಮಾನತೆಯಿಂದ ಕಾಣುವ ಸಾರ ಕ್ರೀಡೆಯಲ್ಲಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಕ್ರೀಡಾ ಭಾರತಿಯ ವತಿಯಿಂದ ಅಂಗವಿಕಲರಿಗೆ ಕ್ರೀಡೆಯ ತರಬೇತಿ ನೀಡುವ ಉದ್ದೇಶವಿದ್ದು, ಇದಕ್ಕೆಂದೇ ವಿಶೇಷ ಘಟಕ ರಚಿಸಿ, ಕಾರ್ಯಕರ್ತರನ್ನು ನೇಮಕ ಮಾಡುತ್ತೇವೆ ಎಂದರು. ಸಂಸ್ಥೆಯ ಕಾರ್ಯಾಧ್ಯಕ್ಷ ಚೈತನ್ಯ ಕಶ್ಯಪ್, ಉಪಾಧ್ಯಕ್ಷ ಕರ್ನಲ್ ನಾರಾಯಣ ಸಿಂಗ್ ರಾಣ, ಗೋಪಾಲ್ ಸೈನಿ, ಚಂದ್ರಶೇಖರ ಜಹಗೀರ್ದಾರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Modi ಬಂದಿದ್ದು ಕಾಂಗ್ರೆಸ್ಗೆ ಅಡ್ಡ ಪರಿಣಾಮ ಏನಿಲ್ಲ: ಭೀಮಣ್ಣ ನಾಯ್ಕ
T20 ವಿಶ್ವಕಪ್ ಇಂಗ್ಲೆಂಡ್ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್ ಬೌಲರ್ ತಂಡಕ್ಕೆ ಕಂಬ್ಯಾಕ್
ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 2 ರಂದು ಕುಬೇರ ಲಕ್ಷ್ಮಿ ಪ್ರತಿಷ್ಠಾ ವರ್ಧಂತಿ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್ಗೆ ದಕ್ಷಿಣ ಆಫ್ರಿಕಾ ಪ್ರಕಟ