ಮಂಗಳೂರು: ಇಂದು ಕೆಲವು ರೈಲು ಸೇವೆಯಲ್ಲಿ ವ್ಯತ್ಯಯ
Team Udayavani, Apr 6, 2023, 7:42 AM IST
ಮಂಗಳೂರು: ಪಾಲಕ್ಕಾಡ್ ವಿಭಾಗದ ಶೋರ್ನೂರ್ ಕಾರಕ್ಕಾಡ್, ಪಳ್ಳಿಪುರಂ ಕುಟ್ಟಿಪುರಂ ಸೆಕ್ಷನ್ ಹಾಗೂ ತಿಕ್ಕೋಟಿ ಯಾರ್ಡ್ನ ನಿರ್ವಹಣ ಕಾಮಗಾರಿ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ.
ಎ. 6ರಂದು ನಂ.12618 ನಿಜಾಮುದ್ದೀನ್ ಎರ್ನಾಕುಳಂ ಜಂಕ್ಷನ್ ಮಂಗಳಾ ಲಕ್ಷದ್ವೀಪ್ ಎಕ್ಸ್ಪ್ರೆಸ್ ರೈಲನ್ನು ವಡಕರ ರೈಲು ನಿಲ್ದಾಣದಲ್ಲಿ 25 ನಿಮಿಷ ತಡೆಹಿಡಿಯಲಾಗುವುದು.
ಎ. 6ರಂದು ನಂ.22638 ಮಂಗಳೂರು ಸೆಂಟ್ರಲ್-ಡಾ| ಎಂ.ಜಿ.ಆರ್ ಚೆನ್ನೈ ಸೆಂಟ್ರಲ್ ವೆಸ್ಟ್ಕೋಸ್ಟ್ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲನ್ನು ಮಾಹೆಯಲ್ಲಿ 20 ನಿಮಿಷ ಕಾಲ ತಡೆಹಿಡಿಯಲಾಗುವುದು.
ಎ. 6ರಂದು ನಂ.12218 ಚಂಡೀಗಢ – ಕೊಚ್ಚುವೇಲಿ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್ ರೈಲನ್ನು ತಲಶೇರಿಯಲ್ಲಿ 15 ನಿಮಿಷ ಕಾಲ ತಡೆಹಿಡಿಯಲಾಗುವುದು.
ಪ್ರಯಾಣಿಕರು ಬದಲಾದ ವೇಳಾ ಪಟ್ಟಿಯನ್ನು ರಾಷ್ಟ್ರೀಯ ರೈಲು ವಿಚಾರಣ ವ್ಯವಸ್ಥೆ (ಎನ್ಟಿಇಎಸ್) ವೆಬ್ಸೈಟ್ ಅಥವಾ ರೈಲ್ವೇ ಸಹಾಯವಾಣಿ: 139 ಮೂಲಕ ದೃಢಪಡಿಸಲು ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?