ಮೂಲ್ಕಿ: ಕಾಂಗ್ರೆಸ್ ಅಧಿಕಾರಕ್ಕೆ
Team Udayavani, Jun 1, 2019, 6:00 AM IST
ಮೂಲ್ಕಿ: ಕಳೆದ ಬಾರಿ ಬಿಜೆಪಿ ಅಧಿಕಾರದಲ್ಲಿ ಮೂಲ್ಕಿ ನಗರ ಪಂಚಾಯತ್ ಆಡಳಿತ ಈ ಬಾರಿ ಕಾಂಗ್ರೆಸ್ ಪಾಲಾಗಿದೆ. ಶುಕ್ರವಾರ ಬೆಳಗ್ಗೆ ಮತ ಎಣಿಕೆ ಕಾರ್ಯಕ್ಕಾಗಿ 7.45ಕ್ಕೆ ಭದ್ರತಾ ಕೊಠಡಿಯಿಂದ ಮತ ಪೆಟ್ಟಿಗೆಗಳನ್ನು ಹೊರ ತಂದು. 8 ಗಂಟೆಗೆ ಸರಿಯಾಗಿ ಮತ ಎಣಿಕೆ ಆರಂಭಗೊಂಡಿತು. ಸುಮಾರು 9 ಗಂಟೆಗೆ ಮತ ಏಣಿಕೆ ಪ್ರಕ್ರಿಯೆ ಮುಗಿದು ಎಲ್ಲ 18 ವಾರ್ಡ್ಗಳ ಫಲಿತಾಂಶ ಪ್ರಕಟಗೊಂಡಿತ್ತು.
ಖಾತೆ ತೆರೆದ ಜೆಡಿಎಸ್ ಕಳೆದ ಬಾರಿ ಬಿಜೆಪಿ 11 ಮತ್ತು ಕಾಂಗ್ರೆಸ್ 6 ಸ್ಥಾನ ಪಡೆದುಕೊಂಡಿತ್ತು. ಆದರೆ ಈ ಬಾರಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಯಾಗಿ 18 ಸೀಟುಗಳ ಪೈಕಿ 3 ಜೆಡಿಎಸ್ಗೆ ಬಿಟ್ಟು ಕೊಟ್ಟು 14 ಸ್ಥಾನಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಿದ್ದು, ಬಿಜೆಪಿಗೆ 8 ಮತ್ತು ಕಾಂಗ್ರೆಸ್ಗೆ 9 ಹಾಗೂ ಮೈತ್ರಿ ಪಕ್ಷವಾದ ಜೆಡಿಎಸ್ಗೆ 1 ಸ್ಥಾನ ದೊರೆಯುವ ಮೂಲಕ ಜೆಡಿಎಸ್ ಮೂಲ್ಕಿ ನಗರ ಪಂಚಾಯತ್ನಲ್ಲಿ ತನ್ನ ಖಾತೆಯನ್ನು ತೆರೆದಿದೆ.
ಮತ ಯಂತ್ರದಲ್ಲಿ ದೋಷ
ಚುನಾವಣೆಯ ಎಣಿಕೆ ಕಾರ್ಯದ ವೇಳೆ ಮತ ಯಂತ್ರದಲ್ಲಿ ತೊಂದರೆ ಕಂಡು ಬಂದಕಾರಣ ಸ್ವಲ್ಪ ಕಾಲ ಗೊಂದಲವಾದರೂ ಅನಂತರ ತಜ್ಞರು ಆಗಮಿಸಿ ಸರಿಪಡಿಸಿದರು.
ಮರು ಮತ ಎಣಿಕೆಯ ಚಿಂತನೆಗೆ ಅವಕಾಶ ಇಲ್ಲ ಮತ ಎಣಿಕೆ ಮುಗಿದು ಪ್ರಮಾಣ ಪತ್ರ ಪಡೆದ ಅನಂತರ ಬಿಜೆಪಿ ಕೆಲವು ಸದಸ್ಯರು ಎರಡು ಕ್ಷೇತ್ರಗಳ ಮರು ಎಣಿಕೆಗೆ ಒತ್ತಾಯಿಸಿದಾಗ ಪ್ರಮಾಣ ಪತ್ರ ಪಡೆದ ಬಳಿಕ ಇದಕ್ಕೆ ಅವಕಾಶವಿಲ್ಲ ಎಂದು ಚುನಾವಣಾಧಿಕಾರಿಗಳು ಸ್ಪಷ್ಟಪಡಿಸಿದ್ದರಿಂದ ಮರು ಮತ ಎಣಿಕೆಗೆ ಅವಕಾಶ ಸಿಗಲಿಲ್ಲ. ಈ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ 10 ಸ್ಥಾನಗಳು ಹೊಂದಿರುವುದರಿಂದ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಿದ್ದರೂ ಶಾಸಕರು ಮತ್ತು ಸಂಸದರಿಗೆ ಆಯ್ಕೆಯಲ್ಲಿ ಮತ ನೀಡುವ ಅವಕಾಶ ಇರುವುದರಿಂದ ಸಮಬಲ ಬರಬಹುದು ಎಂಬ ಲೆಕ್ಕಾಚಾರವೂ ಹಲವರಲ್ಲಿದೆ.
ಸರಕಾರದಿಂದ ಗಜೆಟ್ ಪ್ರಕಟನೆಯ ಅನಂತರವೇ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ದಿನ ನಿಗದಿಯಾಗಲಿದೆ. ಮಂಡ್ಯ ಎ.ಡಿ.ಸಿ. ರೂಪಾ ಅವರು ಚುನಾವಣಾ ಆಯೋಗದಿಂದ ವೀಕ್ಷಕರಾಗಿ ಆಗಮಿಸಿ ಮತ ಎಣಿಕೆಯ ಸ್ಥಳದಲ್ಲಿ ಇದ್ದರು.
ಮಂಗಳೂರು ಸಹಾಯಕ ಕಮಿಷನರ್ ರಾಮಚಂದ್ರ ನಾಯಕ್, ಮೂಲ್ಕಿ ತಹಶಿಲ್ದಾರ್ ಮಾಣಿಕಂ, ಪೊಲೀಸ್ ಎ.ಸಿ.ಪಿ. ಮಂಜುನಾಥ ಶೆಟ್ಟಿ ಮೂಲ್ಕಿ ಇನ್ಸ್ಪೆಕ್ಚರ್ ಸತೀಶ್, ಅಧಿಕಾರಿಗಳು, ಸಿಬಂದಿ ಮತ್ತು ಕಂದಾಯ ಇಲಾಖೆಯ ತಂಡದ ಸಹಕಾರದಿಂದ ಎಲ್ಲ ಕೆಲಸ ಕಾರ್ಯಗಳು ಸುಗಮವಾಗಿ ನಡೆದಿದೆ ಎಂದು ಚುನಾವಣಾ ಅಧಿಕಾರಿಗಳಾದ ಮಂಗಳೂರು ಅರಣ್ಯ ಅದಿಕಾರಿ ಚಿದಾನಂದಪ್ಪ ಮತ್ತು ಮಂಗಳೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಹೇಳಿದ್ದಾರೆ.
ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವರಾದ ಕೆ. ಅಭಯಚಂದ್ರ ಮತ್ತು ಅಮರನಾಥ ಶೆಟ್ಟಿ ಅವರು ಮತದಾರರು ಮತ್ತು ಕಾರ್ಯಕರ್ತರಿಗೆ ಕೃತ ಜ್ಞತೆ ಸಲ್ಲಿಸಿದರು. ಕಳೆದ ಲೋಕಸಭಾ ಚುನಾವಣೆ ಮೂಲ್ಕಿ ನಗರ ಪಂಚಾಯತ್ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಕಾಂಗ್ರೆಸ್ ಪಕ್ಷವನ್ನು ಮತದಾರರು ಬೆಂಬಲಿಸಿದ್ದಾರೆ ಎಂದು ಮಾಜಿ ಸಚಿವ ಅಭಯಚಂದ್ರ ಹರ್ಷ ವ್ಯಕ್ತ ಪಡಿಸಿದರು.
ಬಲಾಬಲ
ಬಿಜೆಪಿ 8
ಕಾಂಗ್ರೆಸ್ 9
ಜೆಡಿಎಸ್ 1
ಒಟ್ಟು 18
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಗಳೂರು: ಬಿಸಿಲ ಧಗೆ ಹೆಚ್ಚಿದ್ದರೂ ಅಗ್ನಿ ಆಕಸ್ಮಿಕ ಪ್ರಮಾಣ ಕಡಿಮೆ
ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ
Tulu Movie ಮೇ 3: “ಗಬ್ಬರ್ ಸಿಂಗ್’ ತುಳು ಸಿನೆಮಾ ತೆರೆಗೆ
Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ
MUST WATCH
ಹೊಸ ಸೇರ್ಪಡೆ
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…