ಕಾಮಗಾರಿ ತತ್ಕ್ಷಣ ಪೂರ್ಣಗೊಳಿಸಲು ಆದೇಶ
Team Udayavani, Jun 1, 2019, 6:00 AM IST
ಮಹಾನಗರ: ಮಳೆಗಾಲಕ್ಕೆ ದಿನಗಣನೆ ಮಾತ್ರ ಬಾಕಿ ಉಳಿದಿರುವಂತೆ, ನಗರದ ಕೆಲವೆಡೆ ನಡೆದಿರುವ ಅರೆಬರೆ ಕಾಮಗಾರಿಗಳು ಅರ್ಧದಲ್ಲಿ ಬಾಕಿಯಾದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಕೊನೆಗೂ ಎಚ್ಚೆತ್ತು ಕಾಮಗಾರಿಗಳನ್ನು ಬೇಗನೆ ಮುಗಿಸುವಂತೆ ತಾಕೀತು ಮಾಡಿದೆ.
ನಗರದ ಕೆಲವೆಡೆ ಅರ್ಧದಲ್ಲಿ ಬಾಕಿಯಾಗಿರುವ ಕಾಮಗಾರಿಗಳು ಮಳೆ ಗಾಲದಲ್ಲಿ ಸಮಸ್ಯೆ ಆಗಲಿದೆ ಎಂದು “ಉದಯವಾಣಿ ಸುದಿನ’ ಈ ಹಿಂದೆ ಎಚ್ಚರಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಪಾಲಿಕೆ ಕೆಲವು ಅರೆಬರೆ ಕಾಮಗಾರಿ ತತ್ಕ್ಷಣವೇ ಪೂರ್ಣಗೊಳಿಸಲು ಸೂಚಿಸಿದ್ದರು. ಇದರಂತೆ ಕಂಕನಾಡಿ, ಬಿಜೈ ಸೇರಿದಂತೆ ಕೆಲವು ಭಾಗದಲ್ಲಿದ್ದ ಸಮಸ್ಯೆಗಳಿಗೆ ತಾತ್ಕಾ ಲಿಕ ಮುಕ್ತಿ ನೀಡಲಾಗಿದೆ.
ಬಿಜೈ ಸರ್ಕಲ್ನಿಂದ ಬಿಜೈ ಚರ್ಚ್ ಗೇಟ್ವರೆಗೆ ಕಾಮಗಾರಿ ನಡೆಸಿದ ಅನಂತರ ಮಣ್ಣನ್ನು ರಸ್ತೆ ಬದಿಯಲ್ಲಿ ಸುರಿದಿದ್ದರು. ಇದರ ಪರಿಣಾಮ ಮಳೆಗೆ ಕೆಸರು ನೀರು ನಿಲ್ಲುವುದು ಖಂಡಿತ ಎಂದು ವರದಿ ಮಾಡಲಾಗಿತ್ತು. ಸಂಬಂಧಪಟ್ಟವರು ಎಚ್ಚೆತ್ತುಕೊಂಡ ತಾತ್ಕಾಲಿಕವಾಗಿ ಮಣ್ಣನ್ನು ಸರಿಪಡಿಸಿದ್ದಾರೆ. ಆದರೆ, ಇದು ಕಿರಿಕಿರಿ ತರುವ ಸಾಧ್ಯತೆ ಇಲ್ಲ ಎನ್ನುವಂತಿಲ್ಲ!
ಸುದಿನ ಪಾಲಿಕೆ ಗಮನಸೆಳೆದಿತ್ತು
ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯ ಮುಂಭಾಗದಲ್ಲಿರುವ ರಿಕ್ಷಾ ಪಾರ್ಕ್ ಸಮೀಪ ಬೃಹತ್ ಹೊಂಡ ತೆಗೆದು ಅದನ್ನು ಮುಚ್ಚದೆ ಕೆಲವು ತಿಂಗಳಿನಿಂದ ಹಾಗೆಯೇ ಬಿಡಲಾಗಿತ್ತು. ಇದು ಮಳೆಗೆ ಇನ್ನೊಂದು ಅಪಾಯ ಆಹ್ವಾನಿಸಿದಂತಿದೆ ಎಂದು ಸುದಿನ ಪಾಲಿಕೆಯ ಗಮನಸೆಳೆದಿತ್ತು. ನೀರಿನ ಪೈಪ್ಲೈನ್ಗಾಗಿ ಪಾಲಿಕೆಯವರು ಹೊಂಡ ಮಾಡಿ ಅದರ ಮಣ್ಣನ್ನು ರಸ್ತೆಯ ಬದಿಯಲ್ಲಿ ಹಾಕಿ ಸಮಸ್ಯೆ ಸೃಷ್ಟಿಸಿರುವ ಬಗ್ಗೆ ವರದಿಯಲ್ಲಿ ಉಲ್ಲೇಖೀಸಲಾಗಿತ್ತು. ಇದೀಗ ಎಚ್ಚೆತ್ತುಕೊಂಡ ಪಾಲಿಕೆ ಹೊಂಡಕ್ಕೆ ಮಣ್ಣು ಹಾಕಿ ಮುಚ್ಚಿದ್ದಾರೆ. ಆದರೆ, ಅದರ ಪಕ್ಕದಲ್ಲಿ ಸ್ವಲ್ಪ ಮಣ್ಣನ್ನು ಹಾಗೆಯೇ ಬಿಟ್ಟಿರುವುದು ಮಳೆಗಾಲಕ್ಕೆ ಸಮಸ್ಯೆ ಆಗಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ