ಸುರತ್ಕಲ್: ಶಾಸಕರಿಂದ ಅಭಿವೃದ್ಧಿ ಕಾಮಗಾರಿ ವೀಕ್ಷಣೆ
Team Udayavani, Sep 19, 2019, 4:41 AM IST
ಸುರತ್ಕಲ್: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ವಿವಿಧ ಕಾಮಗಾರಿಗಳನ್ನು ಶಾಸಕ ಡಾ| ಭರತ್ ಶೆಟ್ಟಿ ವೈ. ಅವರು ವೀಕ್ಷಿಸಿದರು.
ಕೃಷಾಪುರ ಪ.ಪೂ.ಕಾಲೇಜಿನಲ್ಲಿ 40 ಲಕ್ಷರೂ. ವೆಚ್ಚದಲ್ಲಿ ನಿರ್ಮಾಣವಾ ಗುತ್ತಿರುವ ನೂತನ ಸಭಾಂಗಣದ ನಿರ್ಮಾಣ ಕಾಮಗಾರಿ ವೀಕ್ಷಿಸಿ ಶೀಘ್ರ ಮುಗಿಸಿಕೊಡುವಂತೆ ಗುತ್ತಿಗೆದಾ ರರಿಗೆ ಸೂಚಿಸಿದರು. ಕಾಲೇಜಿನ ಆವರಣ ಗೋಡೆ ಅಂದಾಜುವೆಚ್ಚ ಪಟ್ಟಿ ತಯಾರಿಸಿಕೊ ಡುವಂತೆ ಪ್ರಾಂಶುಪಾಲರಿಗೆ ಸೂಚಿಸಿದರು.
ತ್ವರಿತಗೊಳಿಸಲು ಸೂಚನೆ
ಈ ಸಂದರ್ಭ ಮಾತನಾಡಿದ ಶಾಸಕ ಡಾ| ಭರತ್ ಶೆಟ್ಟಿ ವೈ., ಮಂಗಳೂರು ಉತ್ತರ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ರಸ್ತೆ, ಮಾರುಕಟ್ಟೆ, ಒಳಚರಂಡಿ ವ್ಯವಸ್ಥೆ ಸಹಿತಿ ವಿವಿಧ ಯೋಜನೆ ತ್ವರಿತವಾಗಿ ಮುಗಿಸಲು ಸೂಚಿಸಲಾಗಿದೆ ಎಂದರು.
62 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸುರತ್ಕಲ್ ಮಾರುಕಟ್ಟೆಯ ಒಂದನೇ ಹಂತದ ಕಾಮಗಾರಿ ನಡೆಯುತ್ತಿದೆ. ಇದಕ್ಕೆ ಮತ್ತಷ್ಟು ಅನುದಾನದ ಅಗತ್ಯವಿದ್ದು ಇದನ್ನು ಸಂಪೂರ್ಣಗೆಳಿಸುವ ಬಗ್ಗೆ ಪಾಲಿಕೆ ಆಯುಕ್ತರಲ್ಲಿ ಚರ್ಚಿಸಿ ನಿರ್ಣಯಿಸಲಾಗುವುದು. ಕೃಷ್ಣಾಪುರ ದಲ್ಲಿ ಮಾರುಕಟ್ಟೆ ಅಪೂರ್ಣಗೊಂಡಿದ್ದು ಅನುದಾನ ಕ್ರೋಢಿಕರಿಸುವ ಕುರಿತಾಗಿ ಚಿಂತಿಸಲಾಗುವುದು ಎಂದರು.
ಈ ಸಂದರ್ಭ ಬಿಜೆಪಿ ಮುಖಂಡರು, ಕಾಲೇಜಿನ ಆಡಳಿತ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.