ದಮಾಮ್ನಿಂದ 169 ಪ್ರಯಾಣಿಕರ ಆಗಮನ
Team Udayavani, Jun 8, 2020, 12:10 PM IST
ಸಾಂದರ್ಭಿಕ ಚಿತ್ರ
ಮಂಗಳೂರು: ಕೋವಿಡ್ ದಿಂದಾಗಿ ವಿದೇಶಗಳಲ್ಲಿ ಸಂತ್ರಸ್ತರಾಗಿರುವ ಕರ್ನಾಟಕದ ಜನರನ್ನು ಕರೆತರುವ ಪ್ರಕ್ರಿಯೆಯ ಅಂಗವಾಗಿ ರವಿವಾರ ದಮಾಮ್ನಿಂದ 169 ಪ್ರಯಾಣಿಕರನ್ನು ಹೊತ್ತ ಖಾಸಗಿ ವಿಮಾನ ಮಂಗಳೂರಿಗೆ ಆಗಮಿಸಿತು. ಅವರಲ್ಲಿ 156 ಪುರುಷರು ಮತ್ತು 13 ಮಹಿಳೆಯರು ಇದ್ದರು. ಆರೋಗ್ಯ ಇಲಾಖೆಯ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಹಾಜರಿದ್ದು, ಎಲ್ಲ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಿ ಕ್ವಾರಂಟೈನ್ಗೆ ಒಳಪಡಿಸಿದರು.
ದುಬಾೖ, ಮಸ್ಕತ್ನಿಂದ ವಿಮಾನ “ವಂದೇ ಭಾರತ್ ಮಿಶನ್’ನ 3ನೇ ಹಂತದ ಕಾರ್ಯಾಚರಣೆ ಜೂ. 9ರಿಂದ 23ರ ವರೆಗೆ ನಡೆಯಲಿದ್ದು, ಈ ಅವಧಿಯಲ್ಲಿ ಮಂಗಳೂರಿಗೆ ದುಬಾೖ ಮತ್ತು ಮಸ್ಕತ್ನಿಂದ ವಿಮಾನಗಳು ಬರಲಿವೆ. ಜೂ. 12ರಂದು ದುಬಾೖಯಿಂದ 13.50ಕ್ಕೆ ಹೊರಡುವ ಎಐ ವಿಮಾನ 19.10ಕ್ಕೆ ಬೆಂಗಳೂರಿಗೆ ಬಂದು ಅಲ್ಲಿಂದ 20.10ಕ್ಕೆ ಹೊರಟು 21 ಗಂಟೆಗೆ ಮಂಗಳೂರು ತಲಪುವುದು. ಜೂ. 17ರಂದು ಮಸ್ಕತ್ನಿಂದ 12.10ಕ್ಕೆ ಹೊರಡುವ ವಿಮಾನ 17.20ಕ್ಕೆ ಬೆಂಗಳೂರು ಹಾಗೂ ಅಲ್ಲಿಂದ 18.20ಕ್ಕೆ ಹೊರಟು 19.15ಕ್ಕೆ ಮಂಗಳೂರು ತಲಪುವುದು. ಈ ವಿಮಾನಗಳಲ್ಲಿ ಮಂಗಳೂರಿನ ಪ್ರಯಾಣಿಕರು ಎಷ್ಟು ಮಂದಿ ಇರುತ್ತಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ.
ಕುವೈಟ್ನಿಂದ ಇನ್ನೆರಡು ವಿಮಾನ
ಕುವೈಟ್ನಿಂದ ಇನ್ನೆರಡು ವಿಮಾನಗಳು ಮುಂದಿನ ದಿನಗಳಲ್ಲಿ ಮಂಗಳೂರಿಗೆ ಆಗಮಿಸಲಿವೆ. ಈ ಪೈಕಿ ಒಂದು ವಿಮಾನ ವಂದೇ ಭಾರತ್ ಮಿಶನ್ ಅಡಿಯಲ್ಲಿ ಹಾಗೂ ಇನ್ನೊಂದು ವಿಮಾನ ಖಾಸಗಿ ನೆಲೆಯಲ್ಲಿ ವ್ಯವಸ್ಥೆ ಮಾಡಿದ್ದಾಗಿದೆ. ಈ ವಿಮಾನಗಳ ಯಾನದ ನಿರ್ದಿಷ್ಟ ದಿನಾಂಕ ಪ್ರಕಟವಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ