“ವಿನಯ ಹೆಗ್ಡೆ ಸಾಧನೆ, ಬದುಕು ಪ್ರೇರಣದಾಯಿ’
Team Udayavani, Apr 15, 2019, 6:30 AM IST
ಮಂಗಳೂರು: ಉದ್ಯಮಿ, ಶಿಕ್ಷಣತಜ್ಞ ನಿಟ್ಟೆ ವಿನಯ ಹೆಗ್ಡೆ ಅವರ ಬದುಕು ಹಾಗೂ ಸಾಧನೆ ಸರ್ವರಿಗೂ ಪ್ರೇರಣಾದಾಯಕವಾಗಿದೆ ಎಂದು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಶ್ರೀ ಜಿತಕಾಮಾನಂದ ಸ್ವಾಮೀಜಿ ಹೇಳಿದರು.
ನಗರದ ಹೊಟೇಲ್ ಗೇಟ್ವೇಯ ಸಭಾಂಗಣದಲ್ಲಿ ರವಿವಾರ ಜರಗಿದ ಡಾ| ಎಂ. ಶಾಂತಾರಾಮ ಶೆಟ್ಟಿ ಅವರು ಬರೆದ “ಮೆನ್ ಅಮಾಂಗ್ಸ್ಟ್ ಆಲ್ ಮೆನ್ ನಿಟ್ಟೆ ವಿನಯ ಹೆಗ್ಡೆ’ ಕೃತಿಯನ್ನು ಅನಾವರಣಗೊಳಿಸಿ ಅವರು ಮಾತ ನಾಡಿದರು.
ವಿನಯ ಹೆಗ್ಡೆ ಅವರು ಅವರು ಕಠಿನ ಪರಿಶ್ರಮ, ಬದ್ಧತೆ, ದೂರದರ್ಶಿತ್ವ
ದಿಂದ ತನ್ನ ಬದುಕನ್ನು ಬಂಗಾರವಾಗಿಸಿ ಕೊಂಡವರು ಎಂದರು.
ಸಂತ ಅಲೋಶಿಯಸ್ ಕಾಲೇಜಿನ ಎಐಎಂಐಟಿ ನಿರ್ದೇಶಕ ಫಾ| ಡೆಂಜಿಲ್ ಲೋಬೋ ಅಭಿನಂದನ ಭಾಷಣ ಮಾಡಿದರು.
ಧನ್ಯತಾ ಭಾವ: ವಿನಯ ಹೆಗ್ಡೆ ಸವಾಲುಗಳು ನಮ್ಮ ಮುಂದೆ ಇದ್ದರೆ
ಜೀವನದಲ್ಲಿ ಬೆಳೆಯಲು, ಸಾಧನೆ ಮಾಡಲು ಸಾಧ್ಯ. ಹಾಗೆಯೇ ಜೀವನದಲ್ಲಿ ನನಗೂ ಸವಾಲುಗಳು ಎದುರಾದವು. ಸುಪ್ರೀಂ ಕೋರ್ಟ್ನ ನ್ಯಾಯಾಧೀಶರ ಮಗನಾದ ನನ್ನ ವೃತ್ತಿ ಬದುಕು ಖಾಸಗಿ ಸಂಸ್ಥೆಯಲ್ಲಿ 150 ರೂ. ವೇತನದ
ನೌಕರಿಯೊಂದಿಗೆ ಪ್ರಾರಂಭವಾಯಿತು. ಮುಂದಕ್ಕೆ ಉದ್ಯಮಿಯಾಗಿ ಮತ್ತು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಬೆಳೆದು ಬಂದೆ. ಸಾಧನೆಯಲ್ಲಿ ನನ್ನ ಪಾತ್ರದ ಜತೆಗೆ ತಂಡ ಪ್ರಯತ್ನವೂ ಇದೆ ಎಂದರು.
ಡಾ| ಶಾಂತಾರಾಮ ಶೆಟ್ಟಿ ಅವರು ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ವಿನಯ ಹೆಗ್ಡೆ ಅವರ 80ನೇ ಹುಟ್ಟುಹಬ್ಬ ಹಾಗೂ ಡಾ| ಶಾಂತಾರಾಮ ಶೆಟ್ಟಿ ಅವರ 79ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಮಾಹೆ ಸಹಕುಲಾಧಿಪತಿ ಡಾ| ಎಚ್. ಎಸ್. ಬಲ್ಲಾಳ್ ವಿನಯ ಹೆಗ್ಡೆ ಅವರನ್ನು
ಅಭಿನಂದಿಸಿದರು. ಪ್ರೊ| ಎನ್.ಆರ್. ಶೆಟ್ಟಿ, ಡಾ| ದಿನೇಶ್ಚಂದ್ರ ಹೆಗ್ಡೆ ಉಪಸ್ಥಿತರಿದ್ದರು. ವಿಶಾಲ ಹೆಗ್ಡೆ ಕೃತಜ್ಞತೆ ಸಲ್ಲಿಸಿದರು. ಡಾ| ಅಜಿತ್ ವಂದಿಸಿದರು. ರೆಜಿನಾ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ
Tulu Movie ಮೇ 3: “ಗಬ್ಬರ್ ಸಿಂಗ್’ ತುಳು ಸಿನೆಮಾ ತೆರೆಗೆ
Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ
U. T. Khader ಮಂಗಳೂರಿನಿಂದ ಹಜ್ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ
MUST WATCH
ಹೊಸ ಸೇರ್ಪಡೆ
Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ