ಬೀದಿ ಬೀದಿಯಲ್ಲಿ ಕೃಷ್ಣಾಷ್ಟಮಿ ಮಾಡುತ್ತೇವೆ : ವೇದವ್ಯಾಸ ಕಾಮತ್ ಆಕ್ರೋಶ
ಪೊಲೀಸ್ ಇಲಾಖೆಯ ಮುಖಾಂತರ ಅಷ್ಟಮಿ ಆಚರಣೆಗೆ ಅಡ್ಡಿ
Team Udayavani, Sep 6, 2023, 9:02 PM IST
ಸುರತ್ಕಲ್ : ‘ಪೊಲೀಸ್ ಇಲಾಖೆಯ ಮುಖಾಂತರ ಅಷ್ಟಮಿಗೆ ಬ್ರೇಕ್ ಹಾಕಲು ಸರಕಾರ ಮುಂದಾಗಿದ್ದು ಹಿಂದೂ ಧಾರ್ಮಿಕತೆಗೆ ಅಡ್ಡಿಯಾಗುತ್ತಿದೆ’ ಎಂದು ಶಾಸಕ ವೇದವ್ಯಾಸ ಕಾಮತ್ ಬುಧವಾರ ಕಿಡಿಕಾರಿದ್ದಾರೆ.
‘ಅಷ್ಟಮಿ ಆಚರಣೆಗೆ ಸಮಿತಿಯ ಪದಾಧಿಕಾರಿಗಳು ಫೋಟೋ ಕೊಡಬೇಕು.ಪೊಲೀಸ್ ಇಲಾಖೆ ಮೂಲಕ ಅಡ್ಡಗಾಲು ಹಾಕಲಾಗುತ್ತಿದ್ದು,ಉತ್ಸವ ನಡೆಸುವವರನ್ನೂ ಕಳ್ಳ ಕಾಕರಂತೆ ನೋಡಲಾಗುತ್ತಿದೆ.10 ಗಂಟೆಯ ಒಳಗೆ ನಿಲ್ಲಿಸಲು ಸೂಚನೆ ನೀಡಲಾಗಿದೆ’ ಎಂದು ಆಕ್ರೋಶ ಹೊರ ಹಾಕಿದ್ದಾರೆ.
‘ನಾವೂ ಕೂಡ ನಿಮ್ಮದೊಂದಿಗೆ ಇದ್ದೇವೆ.ನಮ್ಮ ದೇವರ ಉತ್ಸವಕ್ಕೆ ಅಡ್ಡಿ ಯಾಕೆ? ನಿಮ್ಮ ಆದೇಶ ಲೆಕ್ಕಕ್ಕಿಲ್ಲ. ಸೋಲು ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ’ ಎಂದು ಕಿಡಿ ಕಾರಿದ್ದಾರೆ.
‘ಉದಯನಿಧಿ ಸ್ಟಾಲಿನ್ ಹೇಳಿಕೆಯಿಂದ ಗೊತ್ತಾಗುತ್ತದೆ, ನಮ್ಮ ಹಿಂದೂ,ಸನಾತನ ಧಾರ್ಮಿಕ ಕಾರ್ಯಕ್ಕೆ ತೊಂದರೆ ಕೊಡುವುದೇ ಕೆಲಸ.ತೊಂದರೆ ಮಾಡಿದರೆ ಬೀದಿ ಬೀದಿಯಲ್ಲಿ ಕೃಷ್ಣಾಷ್ಟಮಿ ಮಾಡುತ್ತೇವೆ.ನಮ್ಮತನ ಬಿಟ್ಟು ಕೊಡುವುದಿಲ್ಲ’ ಎಂದು ವೇದವ್ಯಾಸ ಕಾಮತ್ ಘೋಷಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ