BC Road; ಹಿಂದಕ್ಕೆ ಚಲಿಸಿದ್ದ ಲಾರಿ ಢಿಕ್ಕಿ: ಸ್ಕೂಟರ್ ಸವಾರ ಮೃತ್ಯು
ಬಿ.ಸಿ.ರೋಡ್ನ ಕೈಕಂಬದಲ್ಲಿ ದುರ್ಘಟನೆ
Team Udayavani, Feb 26, 2024, 12:07 AM IST
ಬಂಟ್ವಾಳ: ತರಕಾರಿ ಲೋಡ್ ಖಾಲಿ ಮಾಡಿ ಹಿಂದಕ್ಕೆ ಚಲಿಸುತ್ತಿದ್ದ ಲಾರಿಯೊಂದು ಸ್ಕೂಟರ್ಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟು, ಸಹಸವಾರ ಗಂಭೀರವಾಗಿ ಗಾಯಗೊಂಡ ಘಟನೆ ರವಿವಾರ ಮುಂಜಾನೆ ಬಿ.ಸಿ. ರೋಡ್ನ ಕೈಕಂಬದಲ್ಲಿ ಸಂಭವಿಸಿದೆ.
ಪಾಣೆಮಂಗಳೂರು ಆಲಡ್ಕ ನಿವಾಸಿ ಆಶ್ರಫ್ (32) ಮೃತಪಟ್ಟವರು. ಸಹಸವಾರ ತನ್ವೀರ್ ಗಾಯ
ಗೊಂಡಿದ್ದಾರೆ. ಇವರು ಸ್ನೇಹಿತರಾಗಿದ್ದು, ಕೈಕಂಬದ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುವ ತನ್ವೀರ್ ಅವರನ್ನು ಅಂಗಡಿಗೆ ಬಿಡುವ ಉದ್ದೇಶದಿಂದ ಮುಂಜಾನೆ 5.30ಕ್ಕೆ ಅಶ್ರಫ್ ತೆರಳಿದ್ದರು.
ತರಕಾರಿ ಅಂಗಡಿಯ ಮುಂಭಾಗಕ್ಕೆ ತಲುಪಿ ಸ್ನೇಹಿತನನ್ನು ಇನ್ನೇನು ಇಳಿಸ ಬೇಕು ಎನ್ನುವಷ್ಟರಲ್ಲಿ ಲಾರಿಯನ್ನು ಚಾಲಕ ಹಿಂದಕ್ಕೆ ಚಲಾಯಿಸಿದ್ದ. ಈ ವೇಳೆ ಸ್ಕೂಟರ್ಗೆ ಢಿಕ್ಕಿ ಹೊಡೆದು ಇಬ್ಬರೂ ಗಾಯಗೊಂಡರು. ಗಂಭೀರ ಸ್ಥಿತಿಯಲ್ಲಿದ್ದ ಅಶ್ರಫ್ ಅವರನ್ನು ತತ್ಕ್ಷಣ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿ.ಸಿ. ರೋಡ್-ಕೈಕಂಬ ಮಧ್ಯದ ಈ ಪ್ರದೇಶವು ಸಾಕಷ್ಟು ಅಪಾಯಕಾರಿ ಯಾಗಿದ್ದು, ಈ ಹಿಂದೆಯೂ ಸಾಕಷ್ಟು ಅಪಘಾತಗಳು ಸಂಭವಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ