ಗೇರು ಕೃಷಿ: ಹೂ ಬಿಡುವುದೇ ನಿಧಾನ: ಮೊದಲ ಹೂ ಕರಟಿತು: ಮೂರನೇ ಬಾರಿಯಲ್ಲಿ ನಿರೀಕ್ಷೆ


Team Udayavani, Feb 18, 2022, 3:00 AM IST

ಗೇರು ಕೃಷಿ: ಹೂ ಬಿಡುವುದೇ ನಿಧಾನ: ಮೊದಲ ಹೂ ಕರಟಿತು: ಮೂರನೇ ಬಾರಿಯಲ್ಲಿ ನಿರೀಕ್ಷೆ

ಪುತ್ತೂರು: ಕರಾವಳಿಯ ಗೇರು ಕೃಷಿಗೆ ಈ ಬಾರಿ ಹವಾಮಾನ ವೈಪರೀತ್ಯದ ಹೊಡೆತ ತಟ್ಟಿದೆ. ಮೊದಲ ಹಂತ ಗೇರು ಫಸಲು ಕರಟಿದ ಪರಿ ಣಾಮ ಹಾಲಿ ಹಂಗಾಮಿನಲ್ಲಿ ಫಸಲು ಕುಂಠಿತಗೊಂಡಿದ್ದು ಬೇಡಿಕೆ ಇದ್ದರೂ ಮಾರುಕಟ್ಟೆಗೆ ಗೇರುಬೀಜ ಪೂರೈಕೆ ಆಗುತ್ತಿಲ್ಲ.

ಉತ್ತರ ಕರ್ನಾಟಕ, ಮಲೆನಾಡು ಮತ್ತು ಮಧ್ಯ ಕರ್ನಾಟಕಗಳಲ್ಲಿ ಉತ್ತಮ ಗೇರು ಫಸಲಿನ ನಿರೀಕ್ಷೆ ಮೂಡಿದ್ದರೂ, ಹವಾಮಾನದ ಹೊಡೆತ ಬಿದ್ದಿದೆ. ಜನವರಿ ತಿಂಗಳಾರಂಭದಲ್ಲೇ ಚಳಿ ಸಹಿತ ಮುಂಜಾನೆಯ ಇಬ್ಬನಿ ಹಾಗೂ ಹಗಲು ಹೊತ್ತಿನ ಮೋಡದ ವಾತಾವರಣ ವ್ಯಾಪಕ ವಾಗಿದ್ದ ಕಾರಣ ಗೇರು ಕೃಷಿಗೆ ಮಾರಕ ವಾಗಿ ಪರಿಣಮಿಸಿತ್ತು. ಈ ಹೊತ್ತಿಗೆ ಹೂ ಬಿಟ್ಟು ಕಾಯಿ ಮೂಡಲು ಸಿದ್ಧಗೊಂಡಿದ್ದ ಲಕ್ಷಾಂತರ ಗಿಡಗಳಲ್ಲಿ ಹೂಗಳೇ ಕರಟಿದ್ದು, ಫಸಲು ನಷ್ಟಗೊಂಡಿರುವುದೇ ಉತ್ಪಾದನೆ ಇಳಿ ಮುಖಕ್ಕೆ ಕಾರಣ.

ಉತ್ಪಾದನೆ ಕುಸಿತ:

ಗೇರು ಕೃಷಿಗೆ ಪ್ರಖರ ಬಿಸಿಲು ಆಪ್ಯಾಯಮಾನವಾಗಿದ್ದು, ಇದೇ ಕಾರಣದಿಂದ ದಕ್ಷಿಣ ಕನ್ನಡ, ಉಡುಪಿ ಮತ್ತು ಗಡಿನಾಡಿನ ಕಾಸರಗೋಡು ಜಿಲ್ಲೆಗಳಲ್ಲಿ ಹಿಂದಿನಿಂದಲೂ ವ್ಯಾಪಕವಾಗಿ ಗೇರು ಕೃಷಿ ಮಾಡಲಾಗುತ್ತಿದೆ. ಗಿಡಗಳು ಹೂ ಬಿಟ್ಟು ಕಾಯಿ ಮೂಡುವ ಹಂತದಲ್ಲಿ ಇಬ್ಬನಿ ಮತ್ತು ಮೋಡ ಕವಿದ ವಾತಾವರಣವಿದ್ದರೆ ಹೂಗಳು ಕರಟಿ ಹೋಗುವ ಸಾಧ್ಯತೆಯೇ ಹೆಚ್ಚು. ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ ಪ್ರದೇಶ, ಗದಗ, ಹಾವೇರಿ, ಚಿತ್ರದುರ್ಗ, ಧಾರವಾಡ ಮತ್ತು ಬೆಳಗಾವಿ ಪ್ರದೇಶ, ತುಮಕೂರು, ಶಿರಾ, ಮಧುಗಿರಿ ಪ್ರದೇಶ ಹಾಗೂ ಕೋಲಾರ ಜಿಲ್ಲೆಯ ಚಿಂತಾಮಣಿ ಮುಂತಾದ ಕಡೆ ಗೇರು ಕೃಷಿ ಚೆನ್ನಾಗಿ ಬೆಳೆಯಲಾಗುತ್ತಿದ್ದು, ಈ ಬಾರಿ ಅಲ್ಲಿ ಹವಾಮಾನದ ವೈಪರಿತ್ಯ ತಟ್ಟಿಲ್ಲ. ಕರಾವಳಿಯಲ್ಲಿ ಮಾತ್ರ ಈ ಬಾರಿ ಸಮ್ಮಿಶ್ರ ಹವಾಮಾನ ಏಕಕಾಲದಲ್ಲಿ ಮೂಡಿದ ಕಾರಣ ಸಮಸ್ಯೆ ಉಂಟಾಗಿದೆ. ಇದರಿಂದ ಇಡೀ ರಾಜ್ಯದ ಒಟ್ಟಾರೆ ಉತ್ಪಾದನೆ ಮೇಲೆ ಪರಿಣಾಮ ಬೀರಲಿದೆ ಎಂಬುದು ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯದ ಪ್ರಧಾನ ವಿಜ್ಞಾನಿಗಳ ಅಭಿಪ್ರಾಯ.

ಡಿಸೆಂಬರ್‌ ಹೊತ್ತಿಗೆ ಹೂ ಬಿಡುವ ವೆಂಗುರ್ಲ-4, ವೆಂಗುರ್ಲ-3, ಉಳ್ಳಾಲ-2, ಉಳ್ಳಾಲ-3, ಸೆಲೆಕ್ಷನ್‌ – 2 ಮತ್ತು ವಿಆರ್‌ಐ-3 ಮುಂತಾದ ತಳಿಗಳು ಕರಾವಳಿಯಲ್ಲಿ ಕಳೆದ ಬಾರಿಯಂತೆ ಈ ಬಾರಿ ತೊಂದರೆಗೆ ಸಿಲುಕಿದೆ. ವೆಂಗುರ್ಲ-3 ಮೂರು ಸಲ ಹೂ ಬಿಡುತ್ತದೆ. ಇದರಲ್ಲಿ ಮೊದಲನೆಯದು ಕರಟಿ ಹೋಗಿದ್ದು, ಈಗ 2ನೇ ಬಾರಿ ಹೂ ಬಿಟ್ಟಿದೆ. ಮಾರ್ಚ್‌ನಲ್ಲಿ 3ನೇ ಬಾರಿ ಹೂ ಬಿಡಲಿದೆ. 2 ಮತ್ತು 3ನೇ ಫಸಲಿನಲ್ಲಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಮಡ್ಕತ್ತರ-2, ಉಳ್ಳಾಲ-1 ಎಚ್‌-130 ತಳಿಗಳಿಗೆ ಸಮಸ್ಯೆ ಆಗಿಲ್ಲ.

ಕರ್ನಾಟಕ ರಾಜ್ಯದಲ್ಲಿ ಒಟ್ಟು 1.45 ಲಕ್ಷ ಟನ್‌ ಹೆಕ್ಟೇರ್‌ ವಿಸ್ತೀರ್ಣದಲ್ಲಿ ಗೇರು ಬೆಳೆಯಲಾಗುತ್ತಿದ್ದು, ಕಳೆದ ಸಾಲಿನಲ್ಲಿ 91,000 ಟನ್‌ ಗೇರು ಬೆಳೆಯಲಾಗಿದೆ. ರಾಜ್ಯದಲ್ಲಿ ಹೆಕ್ಟೇರಿಗೆ ಸರಾಸರಿ 682 ಕೆ.ಜಿ. ಗೇರು ಬೆಳೆಯಲಾಗುತ್ತಿದೆ. ಹಿಂದಿನ ವರ್ಷ ಗೇರು ಬೀಜಕ್ಕೆ 80ರಿಂದ 150 ರೂ. ಧಾರಣೆ ಇತ್ತು. ಪ್ರಸ್ತುತ ಕೆ.ಜಿ.ಗೆ 100 ರೂ.ಧಾರಣೆ ಇದೆ.ಆದರೆ ಬೇಡಿಕೆಗೆ ತಕ್ಕಷ್ಟು ಪೂರೈಕೆ ಆಗುತ್ತಿಲ್ಲ. ಹಲವೆಡೆ ಅರ್ಧಕರ್ಧ ನಷ್ಟ ಉಂಟಾಗಿದೆ ಎನ್ನುತ್ತಾರೆ ವ್ಯಾಪಾರಿ ಹಂಝ.

ಈ ಬಾರಿ ಗೇರು ಕೃಷಿಗೆ ಸೊಳ್ಳೆ ಕಾಟ ಕಡಿಮೆ. ಒಂದೆರಡು ದಿನಗಳ ಮೋಡ ಕವಿದ ವಾತಾವರಣದಿಂದ ಗೇರು ಫಸಲಿಗೆ ಹೊಡೆತ ಬೀಳುವುದು ಕಡಿಮೆ. ಈ ಬಾರಿ ಗೇರು ಹೂ ಬಿಡುವ ಸಮಯ ತುಸು ನಿಧಾನವಾಗುವುದರಿಂದ ಬೆಳೆಗಾರರು ಆತಂಕ ಪಡುವ ಅಗತ್ಯ ಇಲ್ಲ. ಡಾ| ದಿನಕರ ಅಡಿಗ, ಪ್ರಧಾನ ವಿಜ್ಞಾನಿ, ಗೇರು ಸಂಶೋಧನ ನಿರ್ದೇಶನಾಲಯ ಪುತ್ತೂರು

ಟಾಪ್ ನ್ಯೂಸ್

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.