“ಪರಿಶೀಲಿಸಿ ಒತ್ತುವರಿ ತೆರವಿಗೆ ಕ್ರಮ’

ಪ. ಜಾತಿ, ಪಂಗಡ ಕುಂದುಕೊರತೆ ಸಭೆ

Team Udayavani, Jul 4, 2019, 5:00 AM IST

13

ಬಂಟ್ವಾಳ: ಡಿ.ಸಿ. ಮನ್ನಾ ಜಮೀನು ಪರಾಭಾರೆ ವಿಚಾರದಲ್ಲಿ ಆಗಿರುವ ಲೋಪದ ಬಗ್ಗೆ ನಿರ್ದಿಷ್ಟವಾಗಿ ಸ.ನಂ. ಸಹಿತ ಗಮನಕ್ಕೆ ತನ್ನಿ, ಒತ್ತುವರಿ ಪರಿಶೀಲಿಸಿ ತೆರವಿಗೆ ಕ್ರಮ ಕೈಗೊಳ್ಳ ಲಾಗುವುದು. ಈಗ ಜಮೀನು ಅಪೇಕ್ಷಿಸಿ 710 ಅರ್ಜಿಗಳು ಸಲ್ಲಿಕೆಯಾಗಿವೆ. ಮುಂದಿನ ಹಂತದಲ್ಲಿ ವಿಲೇವಾರಿ ಮಾಡಲಾಗುತ್ತದೆ ಎಂದು ತಹಶೀಲ್ದಾರ್‌ ರಶ್ಮಿ ಎಸ್‌.ಆರ್‌. ಹೇಳಿದರು.

ಜು. 3ರಂದು ಬಂಟ್ವಾಳ ತಾ.ಪಂ.ಸಭಾಂಗಣದಲ್ಲಿ ನಡೆದ ಪ. ಜಾತಿ, ಪಂಗಡ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅರಣ್ಯ ಇಲಾಖೆಯೇ ಜಮೀನು ಒತ್ತುವರಿ ಮಾಡಿದೆ. ನೆಡುತೋಪು ಮಾಡಿದೆ. ಇದರಿಂದ ಪ. ಜಾತಿ, ಪಂಗಡಕ್ಕೆ ಅನ್ಯಾಯವಾಗಿದೆ ಎಂದು ಪ್ರಮುಖರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಂಟ್ವಾಳ ವಲಯ ಅಧಿಕಾರಿ ಸುರೇಶ್‌, ಸರಕಾರದ ಮಾರ್ಗದರ್ಶಿ ಯಂತೆ ನಾವು ಖಾಲಿ ಇರುವ ಅರಣ್ಯ ಭೂಮಿಯಲ್ಲಿ ಗಿಡಗಳ ನಾಟಿ ಮಾಡಿದ್ದೇವೆ. ಡಿ.ಸಿ. ಮನ್ನಾ ಜಮೀನು ಅತಿಕ್ರಮಣ ನಡೆಸಿಲ್ಲ. ಕೆಲವು ವರ್ಷ ಗಳ ಹಿಂದೆ ನಾಟಿ ಮಾಡಿದ ಗಿಡಗಳು ಕಟಾವಿಗೆ ಬಂದಿದ್ದು, ಅದನ್ನು ಕಡಿಯಲು ವ್ಯವಸ್ಥೆ ಮಾಡಲಾಗಿದೆ. ಅದಕ್ಕೆ ಪ್ರಸ್ತುತ ಆಕ್ಷೇಪ ಬಂದಿರುವುದು ಎಂದರು.

ಖಾಲಿ ಜಮೀನಿನಲ್ಲಿ ಗಿಡಗಳನ್ನು ನೆಟ್ಟು ಪ.ಜಾತಿ, ಪಂಗಡಕ್ಕೆ ದೊರಕಬೇಕಾದ ಜಮೀನು ಹಸ್ತಾಂತರ ಬಾಕಿಯಾಗಿದೆ. ಈಗಾಗಲೇ ತಾ|ನಲ್ಲಿ 113 ಎಕ್ರೆ ಜಮೀನು ಅರಣ್ಯ ಇಲಾಖೆ ಗಿಡನೆಟ್ಟು ವಶಕ್ಕೆ ಪಡೆದಿದೆ. ಅದನ್ನು ತೆರವು ಮಾಡಬೇಕು ಎಂದು ಜನಾರ್ದನ ಚಂಡ್ತಿಮಾರು ಆಗ್ರಹಿಸಿದರು.

ಸದ್ರಿ ಪ್ರಕರಣದ ಬಗ್ಗೆ ಖುದ್ದು ಅರಣ್ಯ, ಕಂದಾಯ, ಪ. ಜಾತಿ, ಪಂಗಡದ ಪ್ರಮುಖರ ಉಪಸ್ಥಿತಿಯಲ್ಲಿ ಮಾತುಕತೆ ನಡೆಸಿ ಪರಿಹಾರ ಕಾಣುವ ಎಂದು ತಹಶೀಲ್ದಾರ್‌ ನಿರ್ಣಯ ನೀಡಿದರು. ಡಿ.ಸಿ. ಮನ್ನಾ ಜಮೀನಿನಲ್ಲಿ ಪ್ರಸ್ತುತ 48 ಎಕ್ರೆ ಉಳಿಕೆ ಆಗಿದ್ದು, ಅದರಲ್ಲಿ ಪರಂಬೋಕು, ತೋಡು, ಹಳ್ಳ, ಅರಣ್ಯ ಇಲಾಖೆಯ ಕಟ್ಟಡ, ಇತರ ಸರಕಾರಿ ಕಟ್ಟಡಗಳು ಎದ್ದು ನಿಂತಿವೆ. ಇದರ ಬಗ್ಗೆಯೂ ಪರಿಶೀಲನೆ ನಡೆಯಲಿ ಎಂದು ರುಕ್ಮಯ ಬಂಗೇರ ಆಗ್ರಹಿಸಿದರು.

ಪ್ರಸ್ತುತ ಉಳಿಕೆ ಭೂಮಿಯನ್ನು ಸ್ಥಳೀಯ ಗ್ರಾ.ಪಂ. ವ್ಯಾಪ್ತಿಯಲ್ಲಿ ಇರುವಂತಹ ವಸತಿರಹಿತ ಮಂದಿಗೆ ನೀಡುವ ಕ್ರಮ ಆಗಬೇಕು. ಈಬಗ್ಗೆ ಹಲವು ಸಂದರ್ಭಗಳಲ್ಲಿ ಮಾಡಿದ ಮನವಿಗೆ ಅಧಿಕಾರಿ ವರ್ಗದಿಂದ ಸರಿಯಾದ ಸ್ಪಂದನವಿಲ್ಲ ಎಂದು ಜನಾರ್ದನ ಬೋಳಂತೂರು ಅಭಿಪ್ರಾಯ ನೀಡಿದರು.

ಫಜೀರು ಗ್ರಾ.ಪಂ. ಪ. ಜಾತಿ, ಪಂಗಡ ಮೀಸಲು ನಿಧಿಯಿಂದ ಮಾಡಿದ ರಸ್ತೆ ಯನ್ನು ಖಾಸಗಿ ವ್ಯಕ್ತಿ ಅತಿಕ್ರಮಿಸಿದ್ದಾರೆ. ಅನುದಾನ ಬಿಡುಗಡೆ ಮಾಡುವ ಸಂದರ್ಭ ಈ ಬಗ್ಗೆ ಸದ್ರಿ ಗ್ರಾ.ಪಂ. ಪಿಡಿಒ ಅವರಿಗೆ ಅರಿವಿಲ್ಲವೆ ಎಂದು ಸ್ಥಳೀಯರು ಪ್ರಶ್ನಿಸಿದರು. ಈ ಬಗ್ಗೆ ಪರಿಶೀಲಿಸುವುದಾಗಿ ತಾ.ಪಂ. ಕಾರ್ಯನಿರ್ವ ಹಣಾಧಿಕಾರಿ ರಾಜಣ್ಣ ತಿಳಿಸಿದರು.

ಮರಳು ಸಮಸ್ಯೆ
ಜಿಲ್ಲೆಯ ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಮರಳು ದಿಬ್ಬವನ್ನು ಗುರುತಿಸಲಾಗಿದೆ. ಆದರೆ ನೇತ್ರಾವತಿ ನದಿ ಹಾದು ಹೋಗುವ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಅದನ್ನು ಗುರುತಿಸುವಲ್ಲಿ ವ್ಯವಸ್ಥೆ ಸೋತಿದೆ. ಇಲ್ಲಿ ಮರಳು ಅಕ್ರಮ ಸಾಗಾಟ ಆಗುತ್ತಿದ್ದರೂ ಗಣಿ ಇಲಾಖೆ, ಜಿಲ್ಲಾಡಳಿತ ಗಮನ ಹರಿಸುತ್ತಿಲ್ಲ. ನಿರ್ದಿಷ್ಟವಾಗಿ ಮರಳು ದಿಬ್ಬ ರಚಿಸಿ ಸಾರ್ವಜನಿಕವಾಗಿ ಮರಳು ವಿತರಣೆ ಮಾಡುವ ಬದಲು ಸಮಸ್ಯೆಯನ್ನು ಇನ್ನಷ್ಟು ಜಟಿಲ ಮಾಡಲಾಗುತ್ತಿದೆ ಎಂದು ಹೊನ್ನಪ್ಪ ಕುಂದರ್‌, ನಾರಾಯಣ ಪುಂಚಮೆ ಆಗ್ರಹಿಸಿದರು.

ಸಭೆಯಲ್ಲಿ ಪ್ರಮುಖರಾದ ಗಂಗಾಧರ ಪರಾರಿ, ಕೇಶವ ಬಂಗೇರ, ಸತೀಶ ಅರಳ, ಸೇಸಪ್ಪ ಬೆದ್ರಕಾಡು, ವಿಟ್ಟಲ ನಾಯ್ಕ ಬಾಳ್ತಿಲ, ಜಯರಾಮ ನಾಯ್ಕ ಕೊಳ್ನಾಡು, ಸದಾಶಿವ ಪುದು, ಉಮಾನಾಥ ತುಂಬೆ, ಶೇಖರ ಕುಕ್ಕಿಪ್ಪಾಡಿ, ನೋಣಯ ಸರಪಾಡಿ, ಸತೀಶ ಕಕ್ಕೆಪದವು ಸಹಿತ ಮತ್ತಿತರರು ಮಾತನಾಡಿದರು.
ಸಮಾಜ ಕಲ್ಯಾಣ ಅಧಿಕಾರಿ ಮೋಹನ್‌ ಕುಮಾರ್‌ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

 ಮಾಹಿತಿ ನೀಡಿ
ನಿರ್ದಿಷ್ಟ ದೂರುಗಳ ಬಗ್ಗೆ ಪರಿಶೀಲನೆ ನಡೆಸಿ ಕಾನೂನು ಕ್ರಮ ಮಾಡಲಾಗುವುದು. ಆಕ್ಷೇಪಗಳ ಬಗ್ಗೆ ಲಿಖೀತ ಮಾಹಿತಿ ನೀಡಿ. ಸಭೆಯಲ್ಲಿ ನಡೆದ ಕಲಾಪದಲ್ಲಿ ಮಾಡಲಾದ ಸೂಚನೆಗಳನ್ನು ಪರಿಶೀಲನೆ ಮಾಡುತ್ತೇನೆ.
 - ರಶ್ಮಿ ಎಸ್‌.ಆರ್‌. ತಹಶೀಲ್ದಾರ್‌

 ಒತ್ತುವರಿ ನಡೆಸಿಲ್ಲ
ಅರಣ್ಯ ಇಲಾಖೆ ಡಿ.ಸಿ. ಮನ್ನಾ ಜಮೀನು ಒತ್ತುವರಿ ನಡೆಸಿಲ್ಲ. ಸರಕಾರದ ಮಾರ್ಗದರ್ಶಿ ಸೂತ್ರ ದಂತೆ ಕೆಲವು ವರ್ಷಗಳ ಹಿಂದೆ ನಾಟಿ ಮಾಡಿದ ಗಿಡಗಳು ಕಟಾವಿಗೆ ಬಂದಿವೆ. ಅದನ್ನು ಕಡಿಯಲು ಇಲಾಖೆ ಅನುಮತಿ ನೀಡುವುದು.
 - ಸುರೇಶ್‌, ವಲಯ ಅರಣ್ಯಾಧಿಕಾರಿ, ಬಂಟ್ವಾಳ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.